12:41 AM Saturday16 - August 2025
ಬ್ರೇಕಿಂಗ್ ನ್ಯೂಸ್
Bangalore | ಬಿಜೆಪಿಯವರಿಗೆ ರಾಜಕಾರಣಕ್ಕಾಗಿ ಧರ್ಮಸ್ಥಳ ಬೇಕಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ ವಿರಾಜಪೇಟೆ: ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ; ನಾಡಿನಲ್ಲಿ ಬೀಡು ಬಿಟ್ಟಿದ್ದ 10ಕ್ಕೂ ಅಧಿಕ… ‘ಧರ್ಮಸ್ಥಳ ವಿರುದ್ಧ ಷಡ್ಯಂತರʼ ರಾಜ್ಯ ಸರ್ಕಾರದ್ದೇ?: ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಕೇಂದ್ರ ಸಚಿವ… ಸಾಲದ ಬಾಧೆ: ಆಟೋ ಚಾಲಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಅರಣ್ಯ… ಬಸವಣ್ಣನವರ ಕಲ್ಯಾಣ ರಾಜ್ಯದ ಕನಸಿನ ಈಡೇರಿಕೆಯೇ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ ಕೇಂದ್ರದಿಂದ ಸ್ವಾತಂತ್ರ್ಯೋತ್ಸವದ ವಿಶಿಷ್ಠ ಕೊಡುಗೆ; ಉತ್ತರ ಕರ್ನಾಟಕಕ್ಕೆ ವಿಶೇಷ ಆರ್ಥಿಕ ವಲಯ ಘೋಷಣೆ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ; ಎಸ್ಐಟಿ ತನಿಖೆ ನಡೆಯುತ್ತಿರುವಾಗ ಸದನದಲ್ಲಿ ಪ್ರಸ್ತಾಪ ಸರಿಯಲ್ಲ:… ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್: ನಟ ದರ್ಶನ್​​, ಪವಿತ್ರಾ ಗೌಡ ಸಹಿತ 4… ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆ ರಾಜ್ಯದ ಸಮಸ್ಯೆಗೆ ಕಾರಣ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ Kodagu | ಮಡಿಕೇರಿ: ಅಸ್ಸಾಂ ಕಾರ್ಮಿಕರಿಂದ ಆಧಾರ್ ಕಾರ್ಡಿನ ದುರ್ಬಳಕೆ ಆರೋಪ

ಇತ್ತೀಚಿನ ಸುದ್ದಿ

‘ವಾಯ್ಸ್ ಆಫ್ ಆರಾಧನಾ’: ಮಾರ್ಚ್ ತಿಂಗಳ ಟಾಪರ್ ಆಗಿ ಮಂಗಳೂರಿನ ನತಾಶ ಹಾಗೂ ಕಾಸರಗೋಡಿನ ಅಸ್ತಾ ಆಯ್ಕೆ

07/04/2022, 19:07

ಮಂಗಳೂರು(reporterkarnataka.com):

ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮಾರ್ಚ್ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ಮಂಗಳೂರಿನ ನತಾಶ ಹಾಗೂ ಕಾಸರಗೋಡಿನ ಅಸ್ತಾ ಶೆಟ್ಟಿ ಆಯ್ಕೆಯಾಗಿದ್ದಾರೆ. 

ನತಾಶ ಎನ್. ಮಂಗಳೂರು, ನಟರಾಜ್ ವಿ.  ಹಾಗೂ  ಆಶಾ ಎನ್. ದಂಪತಿಯ ಪ್ರಥಮ ಪುತ್ರಿ. ವಯಸ್ಸು 10 ವರ್ಷ.  ಇವಳು ಕೊಲ್ಯ ಜೊಯಿಲೆನ್ಡ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಇವಳು ನೃತ್ಯ ಹಾಗೂ ಸಂಗೀತ ತರಬೇತಿಯನ್ನು ಪಡೆಯುತ್ತಿದ್ದಾಳೆ. ಸ್ವಾಮಿ ಕೊರಗಜ್ಜನ ತುಳು ಭಕ್ತಿ ಗೀತೆಗಳು ಮತ್ತು  ಕನ್ನಡ, ತಮಿಳು, ತೆಲುಗು, 65ಕ್ಕೂಹೆಚ್ಚು ವೇದಿಕೆಗಳಲ್ಲಿ ಹಾಡಿದ್ದಾಳೆ. ಕಲಾನಂಜಲಿ ಮತ್ತು ವಾಯ್ಸ್ ಆಫ್ ಆರಾಧನಾ ತಂಡದಲ್ಲಿ ಎರಡು ಮೂರು ಬಾರಿ ಲೈವ್ ಕಾರ್ಯಕ್ರಮ ನೀಡಿದ್ದಾಳೆ. ವಾಯ್ಸ್ ಆಫ್ ಆರಾಧನಾದಲ್ಲಿ ಭಾಗವಹಿಸಿ ಮಲಬಾರ್ ಗೋಲ್ಡ್ ವೀಜೆತಳಾಗಿದ್ದಾಳೆ.

ಸಮಾಜ ಸೇವೆಗಾಗಿ ಅನೇಕ ಲೈವ್ ಕಾರ್ಯಕ್ರಮ ನೀಡಿದ್ದಾಳೆ. ಸ್ವಂದನ ಚಾನೆಲ್ ನಲ್ಲಿ ಭಾಗವಹಿಸಿದ್ದಳು. ನಮ್ಮ ಕುಡ್ಲ ಚಾನೆಲ್‌ನ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಳು. ರಾಜ್ಯ ಮಟ್ಟದ ಪ್ರಶಸ್ತಿ ಮತ್ತು ಜನ ಸ್ಪಂದ, ಕಲಾ ಕುಸುಮ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ. ಕದ್ರಿ ಕಲ್ಕೂರ ಪ್ರತಿಷ್ಟಾನದಲ್ಲಿ , ಶಾಲೆ ಗಳಲ್ಲಿ ನಡೆದ   ನೃತ್ಯ, ಗಾಯನ, ಡ್ರಾಯಿಂಗ್ ಮತ್ತು ಅನೇಕ ಸ್ವರ್ದೆಗಳಲ್ಲಿ ಬಹುಮಾನ ಪಡೆದಿರುತ್ತಾರೆ . ಎಕ್ಸ್ ಪ್ರೆಶನ್ ಉರ್ವದಲ್ಲಿ ನಡೆದ ರಾಧಾಕೃಷ್ಣ ನೃತ್ಯದಲ್ಲಿ ಪ್ರಥಮ ಮತ್ತು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ನಡೆದ ಗಾನಂ ವೇಷಂದಲ್ಲಿ ಭಾಗವಹಿಸಿ ಪ್ರಥಮ ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಗೌರವ, ಸನ್ಮಾನ ಬಹುಮಾನ ಮತ್ತು ಅನೇಕ ಸಂಘ ಸಂಸ್ಥೆಗಳಲ್ಲಿ ಗೌರವ ಪಡೆದಿದ್ದಾಳೆ.

ಕರ್ನಾಟಕ ಜನಸ್ವಂದನ ಟ್ರಸ್ಟ್ ನಲ್ಲಿ ಭಕ್ತಿ ಗೀತೆಯಲ್ಲಿ ತೃತೀಯ, ಆಶು ಭಾಷಣ ಅತ್ಯುತ್ತಮ ಸ್ಥಾನ ಪಡೆದಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ದೊರಕಿದೆ. ಸ್ಥಳಿಯ ಕಾರ್ಯಕ್ರಮಗಳಲ್ಲಿ ಭಕ್ತಿಗೀತೆ ಮತ್ತು ಚಲನಚಿತ್ರ ಗೀತೆ ಗಳನ್ನು ಹಾಡಿ ಜನ ಮೆಚ್ಚುಗೆ ಪಡೆದಿದ್ದಾರೆ.

ಕಾಸರಗೋಡು ಜಿಲ್ಲೆಯ ವಿದ್ಯಾನಗರದ ತಿಮ್ಮಪ್ಪ ಶೆಟ್ಟಿ ಹಾಗೂ ಆಶಾ ಶೆಟ್ಟಿ ದಂಪತಿಯ ಮಗಳಾದ ಆಸ್ತಾ ಶೆಟ್ಟಿ ಬೋವಿಕ್ಕಾನದ ಎಯುಪಿಎಸ್ 

ಶಾಲೆಯಲ್ಲಿ 4ನೇ ತರಗತಿಯಲ್ಲಿ  ಓದುತ್ತಿದ್ದಾಳೆ. ಇವಳು ನೃತ್ಯ, ಯೋಗ ಹಾಗೂ ಶಾಸ್ತ್ರೀಯ ಸಂಗೀತ ತರಬೇತಿ ಪಡೆಯುತ್ತಿದ್ದಾಳೆ. ನೃತ್ಯ, ಹಾಡು, ಚಿತ್ರರಚನೆ,  ಕವಿತಾ ರಚನೆ , ಕಥೆ ಹೇಳುವುದು, ಅಭಿನಯ, ಯೋಗ ಮೊದಲಾದವುಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವಳು. ಶಾಲಾ ಮಟ್ಟದಲ್ಲಿ ಅನೇಕ ಬಹುಮಾನಗಳು ಲಭಿಸಿರುತ್ತದೆ. ಕಾಸರಗೋಡು ಸಬ್ ಜಿಲ್ಲಾ ಕಲೋತ್ಸವದಲ್ಲಿ ಅಭಿನಯ ಗೀತೆ ಹಾಗೂ ಕಥೆ ಹೇಳುವ ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನ ಪಡೆದಿದ್ದಾಳೆ.

ಕಳೆದ ಎರಡು ವರ್ಷಗಳಿಂದ ವಾಯ್ಸ್ ಆಫ್ ಆರಾಧನಾ ಸಂಸ್ಥೆಗೆ ಉತ್ತಮವಾದ ಪ್ರತಿಭಾ ಪ್ರದರ್ಶನಗಳನ್ನು ಕೊಡುತ್ತಾ ಅಚ್ಚುಮೆಚ್ಚಿನ ಪ್ರತಿಭೆ ಎನಿಸಿಕೊಂಡಿದ್ದಾಳೆ. ಅಲ್ಲದೇ ಇವಳು ಮೂರು ಬಾರಿ ಬೆಸ್ಟ್ ಪರ್ಪಾಮರ್  ಕೂಡಾ ಆಗಿದ್ದಳು. ವಾಯ್ಸ್  ಆಫ್ ಆರಾಧನಾ ಸಂಸ್ಥೆ ಇವಳಿಗೆ ವಾಯ್ಸ್  ಆಫ್ ಆರಾಧನಾ ಅವಾರ್ಡ್ ಕೂಡಾ ನೀಡಿ ಗೌರವಿಸಿದೆ.  ಶ್ರೀ ಕೃಷ್ಣ ಯುವಕ ಮಂಡಲ ಆರದಿರಲಿ ಬದುಕು ಆರಾಧನಾ ಸಂಸ್ಥೆ, ಸಿಟಿಗುಡ್ಡೆ ಪುತ್ತೂರು  ಇವರು ಆಸ್ತಾ ಶೆಟ್ಟಿ ಯನ್ನು ಗುರುತಿಸಿ ಸನ್ಮಾನಿಸಿರುತ್ತಾರೆ. ಅನೇಕ ವೇದಿಕೆ ಗಳಲ್ಲಿ ಪ್ರತಿಭಾ ಪ್ರದರ್ಶನ ನೀಡಿರುತ್ತಾಳೆ. ಸ್ಪಂದನಾ ಟಿವಿಯ ಟಾಲೆಂಟ್ ಶೋ ನಲ್ಲಿ ಭಾಗವಹಿಸಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು