1:28 AM Friday21 - November 2025
ಬ್ರೇಕಿಂಗ್ ನ್ಯೂಸ್
ಮಂಡ್ಯ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಸಚಿನ್ ಚಲುವರಾಯಸ್ವಾಮಿ ಆಯ್ಕೆ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಮಣ್ಣು ಸಾಗಾಟ: ಸ್ಥಳೀಯರ ತೀವ್ರ ಆಕ್ಷೇಪ; ಮೌನ ವಹಿಸಿದ… ದ್ವಿಚಕ್ರ ವಾಹನದಲ್ಲಿ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ ಡಿ. 6ರಂದು ಹಾಸನಕ್ಕೆ ಸಿಎಂ ಭೇಟಿ: ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ… Bangalore | ನಾಯಿ ದಾಳಿಯಿಂದ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ.… ಕಲಾ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಜತೆಗೆ ಸಾಹಿತಿ ಯು.ಆರ್. ಅನಂತಮೂರ್ತಿ, ಕವಿ ಡಾ.… ಬಿಜೆಪಿಯಿಂದ ಭೀಮ ಸ್ಮರಣೆ ಕಾರ್ಯಕ್ರಮ; ಕಾಂಗ್ರೆಸ್‌ ಮಾಡಿದ ಅನ್ಯಾಯದ ಕುರಿತು ಜಾಗೃತಿ: ಪ್ರತಿಪಕ್ಷ… ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಚಾಲಕನ ಅಜಾಗರೂಕತೆ: ವಿದ್ಯಾರ್ಥಿಗಳಿಂದ ತುಂಬಿದ್ದ ಕೇರಳ ಮೂಲದ ಪ್ರವಾಸಿ ಬಸ್ ಪಲ್ಟಿ

ಇತ್ತೀಚಿನ ಸುದ್ದಿ

ಕಾಫಿನಾಡಿನಲ್ಲಿ‌  ಸಾಮರಸ್ಯದ ಹೆಜ್ಜೆ: ವಿವಾದಿತ ಸ್ಥಳದಲ್ಲಿದ್ದ ಸಮಾಧಿ ಶಿಲುಬೆ ತೆರವುಗೊಳಿಸಿದ ಕ್ರೈಸ್ತ ಸಮುದಾಯ

06/04/2022, 12:22

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮೂಡಿಗೆರೆ ಪಟ್ಟಣದ ಹೃದಯ ಭಾಗದಲ್ಲಿದ್ದ ವಿವಾದಿತ ಸಮಾಧಿಯ ಶಿಲುಬೆಯನ್ನು ಕ್ರೈಸ್ತ.ಸಮುದಾಯ ತೆರವುಗೊಳಿಸಿದೆ. ಆ ಮೂಲಕ ಪಟ್ಟಣ ಪಂಚಾಯಿತಿಯಿಂದ ನಡೆಯುತ್ತಿದ್ದ ಅಭಿವೃದ್ಧಿ ಕಾರ್ಯಕ್ಕೆ ಸಾಥ್ ನೀಡಿದೆ.

ನೂರಾರು ವರ್ಷಗಳಿಂದ ಪಟ್ಟಣದ ಹೃದಯಭಾಗದ ವಿವಾದಿತ ಸ್ಥಳದಲ್ಲಿದ್ದ ಶಿಲುಬೆಯನ್ನು ಹಲವು ಬಾರಿ ತೆರವುಗೊಳಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿತ್ತು. ಇದೀಗ ಸಾಮರಸ್ಯದ ಮೂಲಕ ಕ್ರೈಸ್ತರ ಸಮಾಧಿಯ ಶಿಲುಬೆಯನ್ನು ತೆರವುಗೊಳಿಸಲಾಗಿದೆ.


ನೂರಾರು ವರ್ಷಗಳ ಹಿಂದೆ ಕ್ರೈಸ್ತ ಸಮುದಾಯ ಸ್ಯಾಮ್ಯುಯಲ್ ಸುಸ್ಮಾನ್ ಎನ್ನುವ ವ್ಯಕ್ತಿ ಮೃತಪಟ್ಟಿದ್ದರು. ಆ ವ್ಯಕ್ತಿ ಅಂತ್ಯಸಂಸ್ಕಾರವನ್ನು ಬಸ್ ನಿಲ್ದಾಣ ಎದುರಿನ ಜಾಗದಲ್ಲಿ ಮಾಡಲಾಗಿತ್ತು.

ಈ ನಿಟ್ಟಿನಲ್ಲಿ ಶಾಂತಿಯುತವಾಗಿ ಮಾತುಕತೆ ನಡೆಸಿ ವಿವಾದವನ್ನು ಪಟ್ಟಣ ಪಂಚಾಯಿತಿ ಬಗೆಹರಿಸಿದೆ. ಸಮಾಧಿ ತೆರವುಗಳಿಸಿದ ಜಾಗದಲ್ಲಿ ಪಟ್ಟಣ ಪಂಚಾಯಿತಿಯ ಮಳಿಗೆಗಳ  ನಿರ್ಮಾಣ ಮಾಡಲಿದೆ.


ತೆರವುಳಿಸಿದ ಸಮಾಧಿಯ ಶಿಲುಬೆಗೆ ಮತ್ತೆ ಕ್ರೈಸ್ತರ ಸ್ಮಶಾನದಲ್ಲಿ ಪೂಜಾ ವಿಧಿ ವಿಧಾನದ ಮೂಲಕ ನಮನ ಸಲ್ಲಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು