2:40 PM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ವಿದ್ಯಾರ್ಥಿನಿಯರಲ್ಲಿ ಸಮಯ ಪರಿಪಾಲನೆ, ನಾಯಕತ್ವದ ಗುಣಗಳು ಜನ್ಮದತ್ತ: ಡಾ. ನಾಗರತ್ನ ಕೆ. ಎ .

01/02/2022, 00:01

ಮಂಗಳೂರು(reporterkarnataka.com): ವಿದ್ಯಾರ್ಥಿನಿಯರಲ್ಲಿ ಸಮಯ ಪರಿಪಾಲನೆ ಹಾಗೂ ನಾಯಕತ್ವದ ಗುಣಗಳು ಜನ್ಮದತ್ತವಾಗಿ ಬಂದಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ. ಹೇಳಿದರು.

ಅವರು ನಗರದ ಬೆಸೆಂಟ್  ಮಹಿಳಾ  ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾಮಿ ವಿವೇಕಾನಂದರು ಯುವ ಶಕ್ತಿಗಳಿಗೆ ಪ್ರೇರಣೆ.  ಯುವಕರಲ್ಲಿ ಹಿಂದೆಯೂ ಸಮಸ್ಯೆಗಳಿದ್ದವು ಈಗಲೂ ಸಮಸ್ಯೆಗಳಿವೆ . ಆದ್ದರಿಂದ ಸಮಸ್ಯೆಗಳಿಂದ ದೂರ ಸರಿಯದೆ ತಮ್ಮೊಳಗಿನ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸ್ವಾಮಿವಿವೇಕಾನಂದರ ತತ್ವ-ಆದರ್ಶ ಗಳನ್ನು ಪಾಲಿಸಿ, ಅದರಿಂದ ರಾಷ್ಟ್ರೀಯತೆ,ಮಾನವೀಯ ಸಂಬಂಧಗಳು ಉತ್ತಮವಾಗಿ ಬೆಳೆಯಲು ಸಹಕಾರಿ ಎಂದುರಾ. ಸೇ. ಯೋ. ಸ್ವಯಂ ಸೇವಕಿಯರಿಗೆ ಕಿವಿ ಮಾತು ಹೇಳಿದರು.


ವಿದ್ಯಾರ್ಥಿನಿಯರಲ್ಲಿ ಸಮಯಪಾಲನೆ, ನಾಯಕತ್ವದ ಗುಣಗಳು ಜನ್ಮದತ್ತವಾಗಿ ಇರುತ್ತದೆ, ಎಂದರು.

ಬೆಸೆಂಟ್ ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಸಿಂಪತಿ ಗಿಟ್ಟಿಸಿಕೊಳ್ಳಲು ಸೇವೆ ಮಾಡಬೇಡಿ. ಅದರಿಂದ ಏನೂ ಪ್ರಯೋಜನವಿಲ್ಲ. ನಿಷ್ಕಲ್ಮಶ ಸೇವೆ ಮಾಡಿ ಅದರಲ್ಲಿರುವ ಕಷ್ಟ-ಸುಖಗಳನ್ನು ಅನುಭವಿಸಿದಾಗ ಮಾತ್ರ ಜೀವನ ಏನು ಎಂಬುದು ಅರಿವಾಗುತ್ತದೆ.





ರಾ.ಸೆ.ಯೋ ಯೋಜನಾಧಿಕಾರಿ  ರವಿಪ್ರಭಾ,  ರಾ. ಸೇ. ಯೋ ಕಾರ್ಯದರ್ಶಿಗಳಾದ ಸ್ಮಿತಾ, ಪೂಜಾ,ಉಪನ್ಯಾಸಕರಾದ ಡಾ. ಸತೀಶ್.ಕೆ ಅರುಣ್, ರಕ್ಷಿತ್, ಸ್ವಾತಿ, ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು