10:24 AM Wednesday9 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ತವರಿಗೆ ಬಂದ ಸೇನಾನಿಗಳಿಗೆ ಅದ್ದೂರಿ  ಸ್ವಾಗತ: ಹೂ ಕೊಟ್ಟು  ಹೀರೋಗಳಿಗೆ ಸೆಲ್ಯೂಟ್ ಮಾಡಿದ ಪುಟಾಣಿಗಳು.!

09/01/2022, 22:02

ಚಿಕ್ಕಮಗಳೂರು(reporterkarnataka.com): ಇಡೀ ಜೀವನವನ್ನೇ ಸೇವೆಗಾಗಿ ಮುಡಿಪಾಗಿಟ್ಟು ಹುಟ್ಟೂರಿಗೆ ಬಂದ ಯೋಧರಿಗೆ ಅದ್ದೂರಿ ಸ್ವಾಗತ ಕೋರಲಾಯಿತು.

ದೇಶ ಕಾಯುವ ಹೀರೋಗಳಿಗೂ ಕೊಟ್ಟ ಸ್ವಾಗತ ನಿಜಕ್ಕೂ ವೀರ ಯೋಧರನ್ನು ಮೂಕ ವಿಸ್ಮಿತಗೊಳಿಸಿತು.

ಅಲ್ಲಿ ಇಡೀ ಊರಿಗೆ ಊರೇ ಹಬ್ಬದ ಸಡಗರದಲ್ಲಿ ಮುಳುಗಿತ್ತು. ಎತ್ತ ನೋಡಿದ್ರೂ ಪಟಾಕಿಯ ಸದ್ದು, ಡೊಳ್ಳಿನ ಕುಣಿತ..! ಭಾರತಾಂಬೆಗೆ ಜೈ, ವೀರಯೋಧರಿಗೆ ಜೈ ಅನ್ನೋ ಜೈಕಾರ..! ರಸ್ತೆಯುದ್ದಕ್ಕೂ ನಿಂತು ತಮ್ಮ ನೆಚ್ಚಿನ ಹೀರೋಗಳಿಗೆ ಶಾಲಾ ಮಕ್ಕಳು ಸ್ವಾಗತ ಕೋರುತ್ತಿದ್ದರು..! 

ಅಷ್ಟಕ್ಕೂ ಈ ಸಡಗರ ಸಂಭ್ರಮಕ್ಕೆ ಕಾರಣವಾಗಿದ್ದು ಆ ಮೂವರು ಯೋಧರು. 

 ಈ ದೃಶ್ಯ ಕಂಡು ಬಂದಿದ್ದು  ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ.. ಭಾರತಾಂಬೆಯನ್ನ ಸೇವೆ ಮುಗಿಸಿ ಯೋಧರು ತಮ್ಮೂರಿನ  ಬರುವಿಕೆಯನ್ನು  ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಗ್ರಾಮದ ವೃದ್ಧರವರೆಗೂ ಕಾತರ-ಕುತೂಹಲದಿಂದ ನೋಡುತ್ತಿದ್ದರು.

 ಭಾರತೀಯ ಸೇನೆಯಲ್ಲಿ ಬರೋಬ್ಬರಿ 20ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ತವರೂರಿಗೆ ಆಗಮಿಸಿದ ಏರ್ಫೋರ್ಸ್ ನ ಆರ್ ಶ್ರೀಕಾಂತ್, ಬಿಎಸ್ಎಫ್ ನ ಕೃಷ್ಣಮೂರ್ತಿ, ಗುರಪ್ಪರವರನ್ನು ಅದ್ಧೂರಿಯಾಗಿ ಸ್ವಾಗತಿಸಿದ ಅಜ್ಜಂಪುರದ ಜನತೆ ಆತ್ಮೀಯವಾಗಿ ಬರಮಾಡಿಕೊಂಡರು. 

ಪಟ್ಟಣದ ಮೂರ್ನಾಲ್ಕು ಕಿಲೋ ಮೀಟರ್ ತೆರೆದ ಜೀಪಿನಲ್ಲಿ ರಾಲಿ ಮಾಡಿ ಸಂಭ್ರಮಿಸಿದರು. ದಾರಿಯುದ್ದಕ್ಕೂ ಭಾರತ್ ಮಾತಾಕಿ ಜೈ, ವಂದೇ ಮಾತರಾಂ ಅನ್ನೋ ಘೋಷ ವಾಕ್ಯ ಮೊಳಗಿತ್ತು.

ವೀರ ಯೋಧರು ಊರಿಗೆ ಆಗಮಿಸುತ್ತಿದ್ದಂತೆ ಶಾಲಾ ಮಕ್ಕಳು ತಮ್ಮ ನೆಚ್ಚಿನ  ಹೀರೋಗಳಿಗೆ  ಹೂ ನೀಡಿ, ಸೆಲ್ಯೂಟ್ ಹೊಡೆದು ದೇಶಪ್ರೇಮ ಮೆರದರು.

ತಮ್ಮೂರಿನ ಜನರು ನೀಡಿದ ಗ್ರ್ಯಾಂಡ್ ವೆಲ್ಕಂ ನೋಡಿ ಮೂವರು ಯೋಧರು ಸೇವೆಯ ಸಾರ್ಥಕತೆ ಅನುಭವಿಸಿದರು. ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಬಂದಾಗ ಈ ರೀತಿಯ ಒಂದು ಸತ್ಕಾರ ಸಿಗುತ್ತೆ ಅನ್ನೋ ಕಲ್ಪನೆ ಯೋಧರಿಗಿರಲಿಲ್ಲ.

ಯೋಧರಿಗೆ ಜೈಕಾರ ಹಾಕಿ ದೇಶಪ್ರೇಮ ಮೆರೆದರು.

ಇತ್ತೀಚಿನ ಸುದ್ದಿ

ಜಾಹೀರಾತು