11:22 PM Friday3 - May 2024
ಬ್ರೇಕಿಂಗ್ ನ್ಯೂಸ್
ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ…

ಇತ್ತೀಚಿನ ಸುದ್ದಿ

ತವರಿಗೆ ಬಂದ ಸೇನಾನಿಗಳಿಗೆ ಅದ್ದೂರಿ  ಸ್ವಾಗತ: ಹೂ ಕೊಟ್ಟು  ಹೀರೋಗಳಿಗೆ ಸೆಲ್ಯೂಟ್ ಮಾಡಿದ ಪುಟಾಣಿಗಳು.!

09/01/2022, 22:02

ಚಿಕ್ಕಮಗಳೂರು(reporterkarnataka.com): ಇಡೀ ಜೀವನವನ್ನೇ ಸೇವೆಗಾಗಿ ಮುಡಿಪಾಗಿಟ್ಟು ಹುಟ್ಟೂರಿಗೆ ಬಂದ ಯೋಧರಿಗೆ ಅದ್ದೂರಿ ಸ್ವಾಗತ ಕೋರಲಾಯಿತು.

ದೇಶ ಕಾಯುವ ಹೀರೋಗಳಿಗೂ ಕೊಟ್ಟ ಸ್ವಾಗತ ನಿಜಕ್ಕೂ ವೀರ ಯೋಧರನ್ನು ಮೂಕ ವಿಸ್ಮಿತಗೊಳಿಸಿತು.

ಅಲ್ಲಿ ಇಡೀ ಊರಿಗೆ ಊರೇ ಹಬ್ಬದ ಸಡಗರದಲ್ಲಿ ಮುಳುಗಿತ್ತು. ಎತ್ತ ನೋಡಿದ್ರೂ ಪಟಾಕಿಯ ಸದ್ದು, ಡೊಳ್ಳಿನ ಕುಣಿತ..! ಭಾರತಾಂಬೆಗೆ ಜೈ, ವೀರಯೋಧರಿಗೆ ಜೈ ಅನ್ನೋ ಜೈಕಾರ..! ರಸ್ತೆಯುದ್ದಕ್ಕೂ ನಿಂತು ತಮ್ಮ ನೆಚ್ಚಿನ ಹೀರೋಗಳಿಗೆ ಶಾಲಾ ಮಕ್ಕಳು ಸ್ವಾಗತ ಕೋರುತ್ತಿದ್ದರು..! 

ಅಷ್ಟಕ್ಕೂ ಈ ಸಡಗರ ಸಂಭ್ರಮಕ್ಕೆ ಕಾರಣವಾಗಿದ್ದು ಆ ಮೂವರು ಯೋಧರು. 

 ಈ ದೃಶ್ಯ ಕಂಡು ಬಂದಿದ್ದು  ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ.. ಭಾರತಾಂಬೆಯನ್ನ ಸೇವೆ ಮುಗಿಸಿ ಯೋಧರು ತಮ್ಮೂರಿನ  ಬರುವಿಕೆಯನ್ನು  ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಗ್ರಾಮದ ವೃದ್ಧರವರೆಗೂ ಕಾತರ-ಕುತೂಹಲದಿಂದ ನೋಡುತ್ತಿದ್ದರು.

 ಭಾರತೀಯ ಸೇನೆಯಲ್ಲಿ ಬರೋಬ್ಬರಿ 20ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ತವರೂರಿಗೆ ಆಗಮಿಸಿದ ಏರ್ಫೋರ್ಸ್ ನ ಆರ್ ಶ್ರೀಕಾಂತ್, ಬಿಎಸ್ಎಫ್ ನ ಕೃಷ್ಣಮೂರ್ತಿ, ಗುರಪ್ಪರವರನ್ನು ಅದ್ಧೂರಿಯಾಗಿ ಸ್ವಾಗತಿಸಿದ ಅಜ್ಜಂಪುರದ ಜನತೆ ಆತ್ಮೀಯವಾಗಿ ಬರಮಾಡಿಕೊಂಡರು. 

ಪಟ್ಟಣದ ಮೂರ್ನಾಲ್ಕು ಕಿಲೋ ಮೀಟರ್ ತೆರೆದ ಜೀಪಿನಲ್ಲಿ ರಾಲಿ ಮಾಡಿ ಸಂಭ್ರಮಿಸಿದರು. ದಾರಿಯುದ್ದಕ್ಕೂ ಭಾರತ್ ಮಾತಾಕಿ ಜೈ, ವಂದೇ ಮಾತರಾಂ ಅನ್ನೋ ಘೋಷ ವಾಕ್ಯ ಮೊಳಗಿತ್ತು.

ವೀರ ಯೋಧರು ಊರಿಗೆ ಆಗಮಿಸುತ್ತಿದ್ದಂತೆ ಶಾಲಾ ಮಕ್ಕಳು ತಮ್ಮ ನೆಚ್ಚಿನ  ಹೀರೋಗಳಿಗೆ  ಹೂ ನೀಡಿ, ಸೆಲ್ಯೂಟ್ ಹೊಡೆದು ದೇಶಪ್ರೇಮ ಮೆರದರು.

ತಮ್ಮೂರಿನ ಜನರು ನೀಡಿದ ಗ್ರ್ಯಾಂಡ್ ವೆಲ್ಕಂ ನೋಡಿ ಮೂವರು ಯೋಧರು ಸೇವೆಯ ಸಾರ್ಥಕತೆ ಅನುಭವಿಸಿದರು. ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಬಂದಾಗ ಈ ರೀತಿಯ ಒಂದು ಸತ್ಕಾರ ಸಿಗುತ್ತೆ ಅನ್ನೋ ಕಲ್ಪನೆ ಯೋಧರಿಗಿರಲಿಲ್ಲ.

ಯೋಧರಿಗೆ ಜೈಕಾರ ಹಾಕಿ ದೇಶಪ್ರೇಮ ಮೆರೆದರು.

ಇತ್ತೀಚಿನ ಸುದ್ದಿ

ಜಾಹೀರಾತು