12:08 AM Thursday12 - February 2026
ಬ್ರೇಕಿಂಗ್ ನ್ಯೂಸ್
ಮಾಜಿ ಪ್ರಧಾನಿ ಎಚ್ಡಿಡಿ ಮಧ್ಯಪ್ರವೇಶ: ಕಾಫಿ ತೋಟಗಳ ಆನ್-ಲೈನ್ ಹರಾಜು ತಕ್ಷಣವೇ ಸ್ಥತಿತಗೊಳಿಸುವಂತೆ… ಕಾಲವೇ ಉತ್ತರ ಕೊಡುತ್ತೆ: ಸೋನಿಯಾ, ರಾಹುಲ್, ಪ್ರಿಯಾಂಕ ಭೇಟಿ ಬಳಿಕ ಡಿಸಿಎಂ ಡಿಕೆಶಿ… ಶಿವಣ್ಣನ ಶಿವಭಕ್ತಿ: ಶಿವರಾತ್ರಿಯ ಅಂಗವಾಗಿ 37 ವರ್ಷಗಳಿಂದ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ! ದಕ್ಷಿಣ ಕೊಡಗಿನಲ್ಲಿ ಆತಂಕದ ಸೃಷ್ಟಿಸಿದ್ದ ವ್ಯಾಘ್ರ ಕೊನೆಗೂ ಸೆರೆ: ಬಲೆಗೆ ಬಿದ್ದ ಗಂಡು… ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ…

ಇತ್ತೀಚಿನ ಸುದ್ದಿ

ತಲಚೇರಿ: ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಏರಿಯಾ ಸಿ ವಿಭಾಗದ ಮಿಲನ ಸಮ್ಮೇಳನ: ಮಂಗಳೂರು ಲೀಜನ್ ಗೆ ಪ್ರಥಮ ಪ್ರಶಸ್ತಿ

07/12/2021, 10:05

ಮಂಗಳೂರು(reporterkarnataka.com): ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಏರಿಯಾ ಸಿ ವಿಭಾಗದ “ಮಿಲನ” ಸಮ್ಮೇಳನ ಕೇರಳದ ತಲಚೇರಿಯಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ತಲಚೇರಿಯ ಆತಿಥ್ಯದಲ್ಲಿ ನಡೆಯಿತು.

ಕೇರಳ ಮತ್ತು ಕರ್ನಾಟಕ ರಾಜ್ಯದ ಸುಮಾರು 25 ಘಟಕಗಳ ಸಮ್ಮೇಳನದ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನವನ್ನು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್  ಮಂಗಳೂರು ಪಡೆದುಕೊಂಡಿತು.



ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್  ನ ಅಂತಾರಾಷ್ಟ್ರೀಯ ಅಧ್ಯಕ್ಷ ಡಾ. ಅರವಿಂದ ರಾವ್ ಕೇದಿಗೆ ಪ್ರಥಮ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. Excellent story ಅವಾರ್ಡ್ ಮತ್ತು ವಿಶೇಷ ಪ್ರಶಸ್ತಿಯನ್ನು ಎಸ್ ಸಿಐ ಅಧ್ಯಕ್ಷ ಜಿ. ಕೆ. ಹರಿಪ್ರಸಾದ ರೈ ಕಾರಮೊಗರು ಗುತ್ತು ಪಡೆದುಕೊಂಡರು. ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಉಪಾಧ್ಯಕ್ಷ ಪ್ರಾಂತ್ಯ ಸಿ ಯ ಪ್ರದೀಪ್ ಪ್ರತಿಭಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್ ಸಿಐ ರಾಷ್ಟ್ರೀಯ ನಿಕಟಪೂರ್ವ ಅಧ್ಯಕ್ಷ ಕೆ.ಮಹಮ್ಮದ್ ಕೋಯಾ,  ರಾಷ್ಟ್ರೀಯ ಕೋಶಾಧಿಕಾರಿ ಸಿ.ಎಸ್. ಎಲ್. ಜೋಸ್ ಕಂಡೋತ್, ಮ್ಯಾನೇಜ್ಮೆಂಟ್ ವಿಭಾಗದ ರಾಜೇಶ್ ವೈಭವ್, ಗ್ರೌತ್ ಅಂಡ್ Dev ನ ನಿರ್ದೇಶಕ ಚಿತ್ರ ಕುಮಾರ್, ಎಸ್ ಸಿಐ ತಲಚೇರಿಯ ಅಧ್ಯಕ್ಷ ರಾಜೀವಿ, ಕಾರ್ಯಕ್ರಮ ಸಂಯೋಜಕ ಕೆ. ಅನುಪ್, ಎಸ್ ಸಿಐ ಮಂಗಳೂರಿನ ಕಾರ್ಯದರ್ಶಿ ಶಾಲಿನಿ  ಪ್ರಶಾಂತ ಸುವರ್ಣ, ಉಪಾಧ್ಯಕ್ಷ ಕಿಶೋರ್ ಫೆರ್ನಾಂಡಿಸ್, ಪ್ಲೇವಿ ಡಿಮೆಲ್ಲೋ, ಪ್ರಶಾಂತ್ ಸುವರ್ಣ, ಲತಾ ಕಲ್ಲಡ್ಕ  ಲತಾ ಕರ್ಕೇರ , ಮಾಲತಿ ಶೆಟ್ಟಿ, ಸುಬ್ರಮಣ್ಯ ಸಾಲ್ಯಾನ್, ಮನಿಷ್ ಕೃಷ್ಣ ಕಲ್ಲಡ್ಕ, ಸೀನಿಯರೇಟ್ ಕಾರ್ಯದರ್ಶಿ ನಿರ್ಮಲ ಪ್ರಮೋದ್, ಉಷಾ ಶೆಟ್ಟಿ, ಜ್ಯೋತಿ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು