7:04 PM Friday19 - September 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

ಇತ್ತೀಚಿನ ಸುದ್ದಿ

ಕ್ರಷರ್ ಗಣಿಗಾರಿಕೆಯ ಕಾನೂನು ತೊಡಕು ನಿವಾರಿಸಿ ಉದ್ಯಮಸ್ನೇಹಿಯಾಗಿಸಲು ನಾವು ಬದ್ದ: ರಾಜ್ಯಾದ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ

23/10/2021, 19:47

ಕಾರ್ಕಳ(reporterkarnataka.com): ಯಾವುದೇ ಕ್ರಷರ್ ಗಳು ಅಕ್ರಮವಾಗಿಲ್ಲ , ಸರಕಾರದ ಕಾನೂನು ನಿಯಾಮವಳಿಗಳಲ್ಲಿ ಲೋಪವಿದೆ. ಕ್ರಷರ್ ಗಣಿಗಾರಿಕೆಗಿರುವ ಕಾನೂನು ತೊಡಕುಗಳನ್ನು ನಿವಾರಿಸಿ ಉದ್ಯಮ ಸ್ನೇಹಿ ಯಾಗಿಸುವ ಕಾರ್ಯಕ್ಕೆ ನಾವು ಬದ್ದ  ಎಂದು ಕರ್ನಾಟಕ ರಾಜ್ಯ ಫೆಡರೇಶನ್‌ ಆಫ್‌ ಕ್ವಾರಿ ಮತ್ತು ಸ್ಟೋನ್‌ ಕ್ರಷರ್‌ ಓನರ್ಸ್‌ ಅಸೋಸಿಯೇಷನ್‌ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು .

ಕಾರ್ಕಳ ಕಟೀಲ್ ಇಂಟರ್ ನ್ಯಾಶನಲ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಚ್ಚಾ ವಸ್ತುಗಳಾದ ಜಲ್ಲಿ ಮರಳು ಕಲ್ಲುಗಳನ್ನು   ವಿವಿಧ ಕೈಗಾರಿಕೆ ಕಟ್ಟಡ ಗಳಿಗೆ  ಪೂರೈಸುವ, ಕ್ವಾರಿ  ಉದ್ಯಮವು ಲಕ್ಷಾಂತರ ಜನರಿಗೆ ನೇರ ಹಾಗು ಪರೊಕ್ಷವಾಗಿ ಉದ್ಯೋಗ ವನ್ನು ನೀಡಿವೆ. ಆದರೆ ಸರಕಾರದ ಕೆಲವು ಅಸಮರ್ಪಕವಾದ ಕಾನೂನುಗಳಿಂದ ಕಚ್ಚಾವಸ್ತುಗಳ  ಸಾಗಾಣಿಕೆ ಹಾಗೂ ಕಲ್ಲುಗಣಿಗಾರಿಕೆಗಳಿಗೆ ತೊಂದರೆಯಾಗುತ್ತಿದ್ದು, ಸರಕಾರದ ಕಾಮಗಾರಿಗಳನ್ನು ಗುತ್ತಿಗೆ ವಹಿಸಿಕೊಂಡಿರುವ ಗುತ್ತಿಗೆದಾರರಿಗೂ ಸಮಸ್ಯೆ ಯಾಗುತ್ತಿದ್ದು, ಅದಕ್ಕಾಗಿ  ಸರಕಾರ ಕಾನೂನು ತೊಡಕುಗಳನ್ನು ನಿವಾರಿಸಿ ಕಚ್ಚಾವಸ್ತುಗಳನ್ನು ಪೂರೈಸಲು ಅನುವು ಮಾಡಲು ಸರಕಾರ ಯೋಗ್ಯ ರೀತಿಯಲ್ಲಿ ಸ್ಪಂದಿಸಬೇಕು ಎಂದರು.   

ಎಲ್ಲ ಗುತ್ತಿಗೆದಾರರು ಎಲ್ಲಾ ವಲಯದ ಕ್ರಷರ್ ಗಳಿಂದ ಪೂರೈಕೆಯಾಗುವ ಕಚ್ಚಾವಸ್ತುಗಳನ್ನು ಪೂರೈಸುವ ಕೈಗಾರಿಗಳಿಗೂ ತನ್ನ ಚೌಕಟ್ಟಿನೊಳಗೆ ಗಣಿಗಾರಿಗೆ ಕಾನೂನು ಸ್ನೇಹಿಯಾಗಿ ನಿರ್ವಹಿಸಿ ಸರಕಾರಕ್ಕೆ ಸಂದಾಯವಾಗುವ ರಾಜಸ್ವವು ಹೆಚ್ಚುತ್ತದೆ.  ಕ್ವಾರಿ ಕ್ರಷರ್  ಉದ್ಯಮದ ಬೇಡಿಕೆ ಏನೆಂದರೆ ಕಾನೂನು ಚೌಕಟ್ಟಿನೊಳಗೆ ಉದ್ಯಮ ನಡೆಸಲು ಅವಕಾಶ ಕೊಡಿ, ಎಲ್ಲರೂ ಕಾನೂನು ಬದ್ದವಾಗಿ  ಉದ್ಯಮ ನಡೆಸಲು ತಯಾರಿದ್ದಾರೆ, ಅದಕ್ಕೆ ಪೂರಕವಾದ ನಿಯಮಗಳಿಲ್ಲ ,ಆದ್ದರಿಂದ ಗಣಿಗಾರಿಕೆ ಹಿನ್ನಡೆ ಯಾಗುತ್ತಿದೆ ಎಂದರು. ಆದರೆ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಆರೋಪ ಹೋರಿಸುವುದು ಸರಿಯಲ್ಲ.ಆದರೆ ಸರಕಾರದ ಕಾನೂನಿನಲ್ಲಿ ಸಮಸ್ಯೆ ಇದೆ ಆದ್ದರಿಂದ ಮುಂದಿನ ಮೂರು ತಿಂಗಳ ಒಳಗೆ ಕ್ರಷರ್ ಹಾಗೂ ಕ್ವಾರಿಗಳಿಗಿರುವ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು