7:30 AM Saturday10 - May 2025
ಬ್ರೇಕಿಂಗ್ ನ್ಯೂಸ್
Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌… Indo- Pak | ಯುದ್ಧ ಕಾರ್ಮೋಡ: ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಭಾರತೀಯ ಸೇನೆಗೆ… ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ – ಮಗುವಿಗೆ… Airport | ಕಲಬುರಗಿ ವಿಮಾನ ನಿಲ್ದಾಣ: ಭದ್ರತಾ ತಪಾಸಣೆ; ನಿಗದಿತ ಸಮಯಕ್ಕೆ ಪ್ರಯಾಣಿಕರು… J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!! Karnataka CM | ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್… ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಸ್ವಾಗತಿಸಿದ ಮಾಜಿ… ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆಗೆ 35 ಲಕ್ಷ ರೂ. ವಂಚನೆ: ಎಫ್… Doddaballapura | ಘಾಟಿ ಸುಬ್ರಹ್ಮಣ್ಯ ಕ್ಷೇತ್ರ: ಸರಳ ಸಾಮೂಹಿಕ ವಿವಾಹದಲ್ಲಿ 66 ಜೋಡಿಗಳಿಗೆ… Ex CM | ಸಿಂಧೂರ ಕಳೆದುಕೊಂಡ ಹೆಣ್ಣು ಮಕ್ಕಳ ಪ್ರತೀಕಾರ: ಮಾಜಿ ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ಸಿನಿರಿಪೋರ್ಟ್ : ನಗಿಸಿ, ಅಳಿಸಿ ಭಾವುಕಗೊಳಿಸಿ, ತಾಯಿಯತ್ತ ಒಮ್ಮೆ ಹೊರಳಿ ನೋಡುವಂತೆ ಮಾಡುತ್ತೆ “ರತ್ನನ್ ಪ್ರಪಂಚ”

23/10/2021, 17:00

ಗಣೇಶ್ ಅದ್ಯಪಾಡಿ, ಮಂಗಳೂರು
adyapadyganesha@gmail.com

ಒಂದು ಕಡೆ ಎರಡೆರಡು ಸಿನಿಮಾಗಳು ಅಬ್ಬರಿಸಿ ಬೊಬ್ಬಿರಿದು ಥಿಯೇಟರ್‌ಗಳಿಗೆ ಇಳಿದಿದ್ದರೆ ಇಲ್ಲೊಂದು ಚಿತ್ರ ಸದ್ದಿಲ್ಲದೆ ಜನರ ಮನಸ್ಸು ಗೆಲ್ಲುತ್ತಿದೆ. ಹೌದು, ರೋಹಿತ್ ಪದಕಿ ನಿರ್ದೇಶನದ ರತ್ನನ್ ಪ್ರಪಂಚ ತನ್ನ ಕಥಾ ವಸ್ತುವಿನ ಮೂಲಕ ಚಿತ್ರ ಪ್ರೇಮಿಗಳ ಮನಸ್ಸು ಮುಟ್ಟುತ್ತಿದೆ.

ಅಮೇಜಾನ್ ಪ್ರೈಮ್ ಓಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾ ಅಮೋಘ ಭಾವುಕ ಅನುಭವ ನೀಡುತ್ತಾ, ನಗಿಸಿ ಅಳಿಸಿ, ಒಂದಷ್ಟು ಪಾಠ ಕಲಿಸಿ, ಹೃದಯ ತುಂಬುವಂತೆ ಮಾಡಿ ನಿರಾಳಗೊಳಿಸಿ.. ಬದುಕಿನ ಮಜಲನ್ನು ಪರಿಚಯಿಸುತ್ತಾ ಮನಸ್ಸಲ್ಲಿ ಛಾಪನ್ನು ಮೂಡಿಸಿಬಿಡುತ್ತದೆ.

ತಾಯಿ ಮಗನ ನಡುವಿನ ಮಮತೆ ಹಾಗೂ ಮನಸ್ಥಿತಿಗಳ ನಡುವಿನ ತಿಕ್ಕಾಟದ ಜತೆಗೆ ಕಳೆದು ಹೋದ ನಿನ್ನೆ ಹಾಗೂ ಇಂದಿನ ವರ್ತಮಾನಕ್ಕೆ ಎರವಾದವರ ನಡುವಿನ ಹಲವಾರು ಭಾವುಕ ವಿಪ್ಲವಗಳನ್ನು ಕಣ್ಣ ಮುಂದೆ ಇಡುತ್ತದೆ.

ಪೆದ್ದುಪೆದ್ದಾಗಿ ನಡೆದುಕೊಳ್ಳುವ, ಮಗನ ಬಗ್ಗೆ ಅತಿಯಾದ ಪ್ರೀತಿ ಹಾಗೂ ಕಾಳಜಿ ಹೊಂದಿರುವ ತಾಯಿ ಪಾತ್ರದಲ್ಲಿ ಉಮಾಶ್ರೀ ಅವರ ನಟನೆ ಬಹಳ ಆಪ್ತವೆನಿಸಿಬಿಡುತ್ತದೆ. ಅತಿಯಾದ ಪ್ರೀತಿ ಕಾಳಜಿ ಮತ್ತೊಂದಿಷ್ಟು ತುಂಟತನ ಮನಸಿಗಿಳಿಯುತ್ತದೆ.

ಡಾಲಿ ಧನಂಜಯ್ ಕೂಡ ತನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಫರ್ಸ್ಟ್ರೇಟೆಡ್ ಮಿಡಲ್ ಕ್ಲಾಸ್ ಮ್ಯಾನ್ ರತ್ನಾಕರನ ಕ್ಯಾರೆಕ್ಟರ್ ಇಡೀ ಸಿನಿಮಾದ ಮುಖ್ಯ ಕೇಂದ್ರ. ತನ್ನ ತಾಯಿ ತನ್ನನ್ನು ಹೆತ್ತವಳು ಅಲ್ಲ ಎಂದು ಗೊತ್ತಾದಾಗ ಮನೆ ಬಿಟ್ಟು ಹೆತ್ತ ತಾಯಿಯನ್ನು ಹುಡುಕಲು ಹೊರಟಾಗ ಆತ ಕಂಡುಕೊಳ್ಳುವ ಸತ್ಯಗಳು, ಜರ್ನಿಯಲ್ಲಿ ಎದುರಿಸುವ ಸಮಸ್ಯೆಗಳು, ಸುಖಗಳು, ಭೇಟಿಯಾಗುವ ಜನ, ಎದುರಿಸುವ ಭಾವ ತೀವ್ರತೆಯ ಸನ್ನಿವೇಶಗಳ ಭಾವ ತೀವ್ರತೆ ಹಾಗೂ ಅದನ್ನು ತಲುಪಿಸಿದ ಬಗೆ ಸೊಗಸಾಗಿದೆ.

ತಾಯಿಯನ್ನು ವಿವಿಧ ಮಜಲುಗಳಲ್ಲಿ ಅಥವಾ ತಾಯ್ತನವನ್ನು ಬೇರೆ ಬೇರೆ ರೀತಿಯಲ್ಲಿ ತೆರೆ ಮೇಲೆ ತರುವಂತಹ ಪ್ರಯತ್ನ ಮಾಡಿದ ರೋಹಿತ್ ಪದಕಿಯವರಿಗೆ ಶಭಾಶ್ ಎನ್ನಲೆ ಬೇಕು.

ತಾರಾಗಣದಲ್ಲಿರುವ ಶೃತಿ, ಅಚ್ಯುತ ಕುಮಾರ್, ರೇಬಾ ಮೋನಿಕಾ, ರವಿಶಂಕರ್, ಪ್ರಮೋದ್ ಮೊದಲಾದವರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು