4:37 AM Thursday3 - July 2025
ಬ್ರೇಕಿಂಗ್ ನ್ಯೂಸ್
ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ಸಿನಿರಿಪೋರ್ಟ್ : ನಗಿಸಿ, ಅಳಿಸಿ ಭಾವುಕಗೊಳಿಸಿ, ತಾಯಿಯತ್ತ ಒಮ್ಮೆ ಹೊರಳಿ ನೋಡುವಂತೆ ಮಾಡುತ್ತೆ “ರತ್ನನ್ ಪ್ರಪಂಚ”

23/10/2021, 17:00

ಗಣೇಶ್ ಅದ್ಯಪಾಡಿ, ಮಂಗಳೂರು
adyapadyganesha@gmail.com

ಒಂದು ಕಡೆ ಎರಡೆರಡು ಸಿನಿಮಾಗಳು ಅಬ್ಬರಿಸಿ ಬೊಬ್ಬಿರಿದು ಥಿಯೇಟರ್‌ಗಳಿಗೆ ಇಳಿದಿದ್ದರೆ ಇಲ್ಲೊಂದು ಚಿತ್ರ ಸದ್ದಿಲ್ಲದೆ ಜನರ ಮನಸ್ಸು ಗೆಲ್ಲುತ್ತಿದೆ. ಹೌದು, ರೋಹಿತ್ ಪದಕಿ ನಿರ್ದೇಶನದ ರತ್ನನ್ ಪ್ರಪಂಚ ತನ್ನ ಕಥಾ ವಸ್ತುವಿನ ಮೂಲಕ ಚಿತ್ರ ಪ್ರೇಮಿಗಳ ಮನಸ್ಸು ಮುಟ್ಟುತ್ತಿದೆ.

ಅಮೇಜಾನ್ ಪ್ರೈಮ್ ಓಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾ ಅಮೋಘ ಭಾವುಕ ಅನುಭವ ನೀಡುತ್ತಾ, ನಗಿಸಿ ಅಳಿಸಿ, ಒಂದಷ್ಟು ಪಾಠ ಕಲಿಸಿ, ಹೃದಯ ತುಂಬುವಂತೆ ಮಾಡಿ ನಿರಾಳಗೊಳಿಸಿ.. ಬದುಕಿನ ಮಜಲನ್ನು ಪರಿಚಯಿಸುತ್ತಾ ಮನಸ್ಸಲ್ಲಿ ಛಾಪನ್ನು ಮೂಡಿಸಿಬಿಡುತ್ತದೆ.

ತಾಯಿ ಮಗನ ನಡುವಿನ ಮಮತೆ ಹಾಗೂ ಮನಸ್ಥಿತಿಗಳ ನಡುವಿನ ತಿಕ್ಕಾಟದ ಜತೆಗೆ ಕಳೆದು ಹೋದ ನಿನ್ನೆ ಹಾಗೂ ಇಂದಿನ ವರ್ತಮಾನಕ್ಕೆ ಎರವಾದವರ ನಡುವಿನ ಹಲವಾರು ಭಾವುಕ ವಿಪ್ಲವಗಳನ್ನು ಕಣ್ಣ ಮುಂದೆ ಇಡುತ್ತದೆ.

ಪೆದ್ದುಪೆದ್ದಾಗಿ ನಡೆದುಕೊಳ್ಳುವ, ಮಗನ ಬಗ್ಗೆ ಅತಿಯಾದ ಪ್ರೀತಿ ಹಾಗೂ ಕಾಳಜಿ ಹೊಂದಿರುವ ತಾಯಿ ಪಾತ್ರದಲ್ಲಿ ಉಮಾಶ್ರೀ ಅವರ ನಟನೆ ಬಹಳ ಆಪ್ತವೆನಿಸಿಬಿಡುತ್ತದೆ. ಅತಿಯಾದ ಪ್ರೀತಿ ಕಾಳಜಿ ಮತ್ತೊಂದಿಷ್ಟು ತುಂಟತನ ಮನಸಿಗಿಳಿಯುತ್ತದೆ.

ಡಾಲಿ ಧನಂಜಯ್ ಕೂಡ ತನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಫರ್ಸ್ಟ್ರೇಟೆಡ್ ಮಿಡಲ್ ಕ್ಲಾಸ್ ಮ್ಯಾನ್ ರತ್ನಾಕರನ ಕ್ಯಾರೆಕ್ಟರ್ ಇಡೀ ಸಿನಿಮಾದ ಮುಖ್ಯ ಕೇಂದ್ರ. ತನ್ನ ತಾಯಿ ತನ್ನನ್ನು ಹೆತ್ತವಳು ಅಲ್ಲ ಎಂದು ಗೊತ್ತಾದಾಗ ಮನೆ ಬಿಟ್ಟು ಹೆತ್ತ ತಾಯಿಯನ್ನು ಹುಡುಕಲು ಹೊರಟಾಗ ಆತ ಕಂಡುಕೊಳ್ಳುವ ಸತ್ಯಗಳು, ಜರ್ನಿಯಲ್ಲಿ ಎದುರಿಸುವ ಸಮಸ್ಯೆಗಳು, ಸುಖಗಳು, ಭೇಟಿಯಾಗುವ ಜನ, ಎದುರಿಸುವ ಭಾವ ತೀವ್ರತೆಯ ಸನ್ನಿವೇಶಗಳ ಭಾವ ತೀವ್ರತೆ ಹಾಗೂ ಅದನ್ನು ತಲುಪಿಸಿದ ಬಗೆ ಸೊಗಸಾಗಿದೆ.

ತಾಯಿಯನ್ನು ವಿವಿಧ ಮಜಲುಗಳಲ್ಲಿ ಅಥವಾ ತಾಯ್ತನವನ್ನು ಬೇರೆ ಬೇರೆ ರೀತಿಯಲ್ಲಿ ತೆರೆ ಮೇಲೆ ತರುವಂತಹ ಪ್ರಯತ್ನ ಮಾಡಿದ ರೋಹಿತ್ ಪದಕಿಯವರಿಗೆ ಶಭಾಶ್ ಎನ್ನಲೆ ಬೇಕು.

ತಾರಾಗಣದಲ್ಲಿರುವ ಶೃತಿ, ಅಚ್ಯುತ ಕುಮಾರ್, ರೇಬಾ ಮೋನಿಕಾ, ರವಿಶಂಕರ್, ಪ್ರಮೋದ್ ಮೊದಲಾದವರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು