ಇತ್ತೀಚಿನ ಸುದ್ದಿ
Raichuru | ಮಸ್ಕಿ: ಭಾರತ ರತ್ನ, ಸಂವಿಧಾನದ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತ್ಸೋತ್ಸವ
15/04/2026, 04:57
ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಮಸ್ಕಿ ರಾಯಚೂರು
info.reporterkarnataka@gmail.com
ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಸ್ಕಿ l ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಹಾರಾರ್ಪಣೆ ಮಾಡುವ ಮೆರವಣಿಗೆ ಚಾಲನೆ ನೀಡಿದರು.
ಕಲಾತಂಡ ಮೆರವಣಿಯೊಂದಿಗೆ ಜೈಕಾರ ಘೋಷಗಳೊಂದಿಗೆ
ಭಾವಚಿತ್ರ ಮೆರವಣಿಗೆ ಮೂಲಕ ಶಾಸಕ ಬಸನಗೌಡ ತುರುವಿಹಾಳ ವಾಹನ ನಡೆಸುವುದರ ಜೊತೆಗೆ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ್ ಯಾದವ್ ತಹಶೀಲ್ದಾರ್ ಮಂಜುನಾಥ್ ನರಸಾರೆಡ್ಡಿ ರೆಡ್ಡಿ ಮುಖ್ಯ ಅಧಿಕಾರಿಗಳು ಭೋಗವತಿ ಡಾಕ್ಟರ್ ಮೂಲಕ ಎಲ್ಲರ ಗಮನ ಸೆಳೆದರು.







ನಗರಗಳಲ್ಲಿ ಅಂಬೇಡ್ಕರ್ ಜಯಂತೋತ್ಸವ ಅಂಗವಾಗಿ ಶೃಂಗಾರಗೊಂಡ ಮದುಮಗಳಂತೆ ಮಸ್ಕಿ ಪಟ್ಟಣವು ಶೃಂಗಾರಗೊಂಡಿದ್ದು ಜನರನ್ನು ಆಕರ್ಷಿಸುವಂತೆ ಕಾಣುತ್ತಿತ್ತು. ಅಂಬೇಡ್ಕರ್ ಮೂರ್ತಿಗೆ ಹೂವಿನ ಹಾರ ಹಾಕುವ ಮೂಲಕ ಜಯಂತೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಮಸ್ಕಿ ತಹಶಿಲ್ದಾರ್ ಮಂಜುನಾಥ ಭೋಗವತಿ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಪೂರ, ತಾಲ್ಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ ಮಹಿಬೂ ಸಾಬ್ ಮುದ್ದಾಪುರ ಹಾಗೂ
ಮಸ್ಕಿಯಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಮತ್ತು ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಜಯಂತಿ ಮೆರವಣಿಗೆಯಲ್ಲಿ ಭಾಗವಹಿಸಿದ ಮಸ್ಕಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರ ಅಭಿಮಾನಿಗಳು ಅಂಬೇಡ್ಕರ್ ಮೂರ್ತಿಗೆ ಹೂವಿನ ಹಾರ ಹಾಕುವುದರ ಮೂಲಕ ಜಯಂತೋತ್ಸವ ಆಚರಣೆ ಮಾಡಿದರು.














