ಇತ್ತೀಚಿನ ಸುದ್ದಿ
Kodagu | ಶನಿವಾರಸಂತೆ: ಟ್ರ್ಯಾಕ್ಟರ್ -ಕಾರು ಅಪಘಾತ; ಟ್ರ್ಯಾಕ್ಟರ್ ಚಾಲಕ ಸಾವು
30/03/2026, 14:50
ಮಡಿಕೇರಿ(reporterkarnataka.com): ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ಖ್ಯಾತೆ ಗ್ರಾಮದಲ್ಲಿ ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಟ್ರ್ಯಾಕ್ಟರ್ ನಿಂದ ಕೆಳಗೆ ಬಿದ್ದ ಚಾಲಕನ ಮೇಲೆ ಅದೇ ಟ್ರ್ಯಾಕ್ಟರ್ ಚಕ್ರ ಹರಿದು ಸಾವನಪ್ಪಿದ ಘಟನೆ ನಡೆದಿದೆ.
ಯಸಳೂರು ಗ್ರಾಮದ ಪರಮೇಶ್ (52) ಮೃತ ವ್ಯಕ್ತಿ. ಖ್ಯಾತೆ ಗ್ರಾಮದ ಅಬ್ದುಲ್ ರೆಹಮಾನ್ ಎಂಬುವರು ಮಗ ಮತ್ತು ಮೊಮ್ಮಗನೊಂದಿಗೆ ಕಾರಿನಲ್ಲಿ ಮಸೀದಿಗೆ ತೆರಳುತ್ತಿದ್ದ ಸಂದರ್ಭ ಯಾಸಳೂರು ತೊಂತಲಾಪುರ ಗ್ರಾಮದ ಪರಮೇಶ್ ಚಲಿಸುತ್ತಿದ್ದ ಟ್ರಾಕ್ಟರ್ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿದ್ದು
ಈ ಸಂದರ್ಭ ಟ್ರಾಕ್ಟರ್ ಚಾಲಕ ಕೆಳಕ್ಕೆ ಬಿದ್ದು ಅದೇ ಟ್ರಾಕ್ಟರ್ ಚಕ್ರ ಚಾಲಕನ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













