4:09 PM Wednesday24 - December 2025
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ ತಾಪಂ ಇಒ ದರ್ಬಾರ್‌: ಸರ್ಕಾರಿ ಜೀಪ್‌ ಖಾಸಗಿಯಾಗಿ ದುರ್ಬಳಕೆ; ನಿತ್ಯ 60… ಸಂಸದ ಯದುವೀರ್‌ ಪ್ರಯತ್ನದ ಫಲಶ್ರುತಿ : ತಂಬಾಕು ಮಾರಾಟಕ್ಕೆ ಅನುಮತಿ ರಾಮೇಶ್ವರಂ ಕೆಫೆ ವಿರುದ್ಧದ ಪ್ರಕರಣದಲ್ಲಿ ಹೆಚ್ಚಿನ ತನಿಖೆಗೆ ಕರ್ನಾಟಕ ಹೈಕೋರ್ಟ್ ವತಿಯಿಂದ ತಡೆಯಾಜ್ಞೆ;… ಅಟಲ್ ಜೀ ವೃಕ್ಷ ಯೋಜನೆಯಡಿ 2240 ಸಸಿ ಸಂರಕ್ಷಣೆ: ವರ್ಷಪೂರ್ತಿ ಅಟಲ್ ಜನ್ಮ… ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ

ಇತ್ತೀಚಿನ ಸುದ್ದಿ

ಸಂತ ಆಗ್ನೇಸ್ ಕಾಲೇಜಿನಲ್ಲಿ ವಾರ್ಷಿಕ ಕ್ರಿಸ್ಮಸ್ ದತ್ತಿ ಕಾರ್ಯಕ್ರಮ “ನವಿದಾದ್”: ಕ್ಯಾರೋಲ್ಸ್ , ನೃತ್ಯಗಳು, ಲೈವ್ ಬ್ಯಾಂಡ್ ಪ್ರದರ್ಶನ

24/12/2025, 16:01

ಮಂಗಳೂರು(reporterkarnataka.com): ಸಂತ ಆಗ್ನೇಸ್ ಕಾಲೇಜಿನ (ಸ್ವಾಯತ್ತ) ವಾರ್ಷಿಕ ಕ್ರಿಸ್ಮಸ್ ದತ್ತಿ ಕಾರ್ಯಕ್ರಮವಾದ ನವಿದಾದ್ ಜರಗಿತು.
ಕಾಲೇಜು ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಂತರ ಜಿಲ್ಲಾ ಮಟ್ಟದ ಕ್ಯಾರಲ್ಸ್ ಗಾಯನ ಸ್ಪರ್ಧೆಯಾದ ‘ಕ್ಯಾರೋಲ್ ಕ್ಲಾಶ್’ ನಡೆಯಿತು. ಈ ಗಾಯನ ಸ್ಪರ್ಧೆಗೆ ಮೂರು ವಿಭಾಗಗಳು ಇದ್ದವು. ೩ – ೧೦ ವರ್ಷಗಳು, ೧೧ – ೧೫ ವರ್ಷಗಳು ಮತ್ತು ೧೫ ವರ್ಷಕ್ಕಿಂತ ಮೇಲ್ಪಟ್ಟವರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಲ್ವಿನ್ ಮ್ಯೂಸಿಕಲ್ ನ ಸಂಸ್ಥಾಪಕ ಮತ್ತು ಬ್ಯಾಂಡ್ ಚರಿತ್ರದ ಸ್ಥಾಪಕ ಸದಸ್ಯ ಲಾಯ್ ಸಲ್ಡಾನಾ ಆಗಮಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ಅವರು ಕಾಲೇಜಿನ ಹಿರಿಮೆಯನ್ನು ಶ್ಲಾಘಿಸಿದರು ಮತ್ತು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ನಿಧಿ ಸಂಗ್ರಹಿಸಿ ನಿರ್ಗತಿಕ ಕುಟುಂಬಕ್ಕೆ ಮನೆ ನಿರ್ಮಿಸಲು ಸಹಾಯ ಮಾಡುವ ಕಾರ್ಯವನ್ನು ಕೊಂಡಾಡಿದರು.
ಪ್ರಾಂಶುಪಾಲರಾದ ಸಿಸ್ಟರ್ ಡಾ. ವೆನಿಸ್ಸಾ ಎ.ಸಿ ತಮ್ಮ ಸಂದೇಶದಲ್ಲಿ ದತ್ತಿ ನಿಧಿಗೆ ಉದಾರವಾಗಿ ದಾನ ನೀಡಿದ ಸರ್ವರಿಗೂ ಅಭಿನಂದನೆ ಸಲ್ಲಿಸಿದರು ಮತ್ತು ೨೦೨೫ ರ ಸಾಲಿನ ಫಲಾನುಭವಿಯಾಗಿ ಸಂತ ಆಗ್ನೇಸ್ ಕಾಲೇಜಿನ ಒಂಟಿ ಪೋಷಕ ಮತ್ತು ಬೋಧಕೇತರ ಸಿಬ್ಬಂದಿಯಾದ ಶ್ರೀಮತಿ ಅನುಷಾ ಅವರು ಆಯ್ಕೆ ಆಗಿರುವುದನ್ನು ಘೋಷಿಸಿದರು.
ಕಾರ್ಯಕ್ರಮದ ಅಂಗವಾಗಿ ಕ್ಯಾರೋಲ್ಸ್ , ನೃತ್ಯಗಳು, ಲೈವ್ ಬ್ಯಾಂಡ್ ಪ್ರದರ್ಶನ , ಸಾಮರಸ್ಯ ಕ್ರಿಸ್ಮಸ್ ಪ್ಲೇ ಮುಂತಾದ ನಾನಾ ಮನೋರಂಜನಾ ಕಾರ್ಯಕ್ರಮಗಳು, ನಾನಾ ರೀತಿಯ ಆಟಗಳು, ಕರಕುಶಲ ವಸ್ತುಗಳ ಮಳಿಗೆಗಳು , ರುಚಿಕರವಾದ ಆಹಾರ ಮಳಿಗೆಗಳು ಗಮನ ಸೆಳೆಯಿತು. ವಿದ್ಯಾರ್ಥಿಗಳಾದ ದಿಯಾ ಶಂಕರ್, ಸಾನ್ವಿ ಮತ್ತು ಆಗ್ನಸ್ ಪ್ರಿನ್ಸ್ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು