5:20 PM Friday17 - May 2024
ಬ್ರೇಕಿಂಗ್ ನ್ಯೂಸ್
ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,…

ಇತ್ತೀಚಿನ ಸುದ್ದಿ

ಶಿಷ್ಟಾಚಾರ ಬದಿಗೊತ್ತಿ ಗೇಟಿನಡಿ ನುಸುಳಿದ ಸ್ಫೀಕರ್ ಖಾದರ್!!: ಜನರ ಬವಣೆ ಸ್ವಂತ ಅನುಭವಕ್ಕೆ!

20/01/2024, 21:03

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ರಾಜ್ಯದ ಎರಡನೇ ಅತ್ಯುನ್ನತ ಸ್ಥಾನವಾದ ವಿಧಾನ ಸಭೆ ಸ್ಫೀಕರ್ ಸ್ಥಾನವನ್ನು ಅಲಂಕರಿಸಿರುವ ಯು.ಟಿ. ಖಾದರ್ ಅವರು ತನ್ನೆಲ್ಲ ಶಿಷ್ಟಾಚಾರವನ್ನು ಬದಿಗೊತ್ತಿ ಜನಸಾಮಾನ್ಯರ ಕಷ್ಟವನ್ನು ಸ್ವತಃ ತಾನೇ ಅನುಭವಿಸಿದ ಪ್ರಸಂಗ ಅವರ ಸ್ವಕ್ಷೇತ್ರದಲ್ಲಿ ಶನಿವಾರ ನಡೆಯಿತು.



ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿಯಿಂದ ತೊಕ್ಕೊಟ್ಟು ಒಳಪೇಟೆಗೆ ಹೋಗುವ ಅಡ್ಡರಸ್ತೆಯನ್ನು ಅನೇಕ ವರ್ಷಗಳಿಂದ ಜನರು ಕಾಲುದಾರಿಯಾಗಿ ಉಪಯೋಗಿಸುತ್ತಿದ್ದರು. ರೈಲ್ವೆ ಟ್ರ್ಯಾಕ್ ನಿಂದಾಗಿ ಈ ರಸ್ತೆಯ ನ್ನು ಬಳಸಬೇಕಿತ್ತು. ಆದರೆ ಮೊನ್ನೆ ಮೊನ್ನೆ ಯಾವುದೇ ಸೂಚನೆ ನೀಡದೆ ರೈಲ್ವೆ ಇಲಾಖೆಯಿಂದ ಈ ದಾರಿಯನ್ನು ಮುಚ್ಚಲಾಗಿದೆ. ಇಲ್ಲೊಂದು ಕಬ್ಬಿಣದ ಸಲಾಕೆಗಳನ್ನು ಬಳಸಿ ಗೇಟ್ ಅಳವಡಿಸಲಾಗಿದೆ. ಗೇಟಿ ಅಡಿಯಿಂದ ಜನರು ಶ್ವಾನ ತರಹ ತೂರಿಕೊಂಡು ಆ ಕಡೆಯಿಂದ ಈ ಕಡೆಗೆ ಬರಬೇಕು. ಮಹಿಳೆಯರಿಗೆ ಹಾಗೂ ಕೈಯಲ್ಲಿ ಸಾಮಾಗ್ರಿಗಳನ್ನು ಹಿಡಿದುಕೊಂಡು ಹೋಗುವವರಿಗೆ ಗೇಟಿನಡಿಯಿಂದ ತೂರಲು ಸಾಧ್ಯವೇ ಇಲ್ಲ. ಈ ಕುರಿತು ಸಾರ್ವಜನಿಕರು ಜಿಲ್ಲಾಧಿಕಾರಿಯವರಿಗೆ ದೂರು ಕೂಡ ನೀಡಿ ರಸ್ತೆ ತೆರವಿಗೆ ಮನವಿ ಮಾಡಿದ್ದರು. ವಿಷಯ ಅರಿತ ಸ್ಪೀಕರ್ ಖಾದರ್ ಅವರು ಸ್ವತಃ ತಾನೇ ಫೀಲ್ಡಿಗಿಳಿದರು. ಗೇಟು ಅಳವಡಿಸಿದ ಜಾಗಕ್ಕೆ ಬಂದರು. ಜನಸಾಮಾನ್ಯರು ಗೇಟಿನಡಿ ತೂರಿದ ಹಾಗೆ ತಾನು ಕೂಡ ತೂರಿ ಈ ಕಡೆ ಬಂದು ಜನರು ಪಡುವ ಕಷ್ಟವನ್ನು ಸ್ವತಃ ತಾನೇ ಅನುಭವಿಸಿದರು. ಈ ಕುರಿತು ಸಭೆ ಕರೆದು ಕ್ರಮ ಕೈಗೊಳ್ಳಲು ಸ್ಫೀಕರ್ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು