7:33 AM Friday17 - May 2024
ಬ್ರೇಕಿಂಗ್ ನ್ಯೂಸ್
ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,…

ಇತ್ತೀಚಿನ ಸುದ್ದಿ

ತೊಕ್ಕೊಟ್ಟು: ಜನವರಿ 13ರಂದು ಸಂಕ್ರಾಂತಿ ಕಾವ್ಯಧಾರೆ ಸಾಹಿತ್ಯ ಗೋಷ್ಠಿ ಮತ್ತು ಕೃತಿ ಲೋಕಾರ್ಪಣೆ

09/01/2024, 12:25

ಮಂಗಳೂರು(reporterkarnataka.com): ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಜನವರಿ 13ರಂದು ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿರುವ ಯುನಿಟಿ ಮಿನಿ ಹಾಲ್ ನಲ್ಲಿ ಸಂಕ್ರಾಂತಿ ಕಾವ್ಯಧಾರೆ ಸಾಹಿತ್ಯ ಗೋಷ್ಠಿ ಮತ್ತು ಕಡಲ‌ಹನಿ ಒಡಲ ಧ್ವನಿ ( ರತ್ನಾ ಭಟ್ ,ಹಾ .ಮ ಸತೀಶ, ಡಾ ಸುರೇಶ್ ನೆಗಳಗುಳಿ) ಗಜಲ್ ಸಂಕಲನದ ಲೋಕಾರ್ಪಣಾ ಸಮಾರಂಭ ಬೆಳಗ್ಗೆ ಗಂಟೆ 9ರಿಂದ ನಡೆಯಲಿದೆ.
ಈ ಸಮಾರಂಭದ ಉದ್ಘಾಟನೆ ಯನ್ನ ಕೊಟ್ರೇಶ ಉಪ್ಪಾರ ( ಕೇ.ಕ.ಸಾ.ವೇ ಸ್ಥಾಪಕಾಧ್ಯಕ್ಷರು ಬೆಂಗಳೂರು) ಇವರು ಮಾಡಲಿದ್ದಾರೆ. ವಾಸು ಸಮುದ್ರವಲ್ಲಿ ( ಕೇ.ಕ.ಸಾ.ವೇ ಮುಖ್ಯ ನಿರ್ವಾಹಕರು) ಅವರು ಆಶಯ ನುಡಿ ನುಡಿಯಲಿದ್ದಾರೆ.
ಇದೇ ವೇಳೆ ರತ್ನಾ ಭಟ್, ಹಾ.ಮ ಸತೀಶ ಮತ್ತು ಡಾ ಸುರೇಶ ನೆಗಳಗುಳಿ ಒಟ್ಟಾಗಿ ಸಂಕಲಿಸಿದ ಕಡಲ ಹನಿ ಒಡಲ ಧ್ವನಿ ಗಜಲ್ ಸಂಕಲನದ ಲೋಕಾರ್ಪಣೆಯನ್ನು ಮಹಮ್ಮದ್ ಬಡ್ಡೂರು( ಖ್ಯಾತ ಗಜಲ್ ಕವಿ, ನಟ, ಮಂಗಳೂರು) ಇವರು ಮಾಡಲಿದ್ದಾರೆ.
ಸಾಹಿತ್ಯ ಗೋಷ್ಠಿ ಅಧ್ಯಕ್ಷತೆಯನ್ನು ರತ್ನಾ ಕೆ. ಭಟ್ ತಲಂಜೇರಿ( ವಿಶ್ರಾಂತ ಮುಖ್ಯೋಪಾಧ್ಯಾಯಿನಿ, ಸಾಹಿತಿ, ಯಕ್ಷಗಾನ ಪಟು ಪುತ್ತೂರು) ವಹಿಸಲಿದ್ದಾರೆ.
ಗೋಷ್ಠಿ ಚಾಲನೆಯನ್ಮು ವೆಂಕಟ್ ಭಟ್ ಎಡನೀರು ( ಖ್ಯಾತ ವ್ಯಂಗ್ಯ ಚಿತ್ರಗಾರರು ಹಾಗೂ ನಗೆ ಚುಟುಕು ಕವಿಗಳು) ನಡೆಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಡಾ ಸುರೇಶ ನೆಗಳಗುಳಿ,( ದ.ಕ. ಜಿಲ್ಲಾ ವೇದಿಕೆ ಅಧ್ಯಕ್ಷರು ಮಂಗಳೂರು)ವಹಿಸಲಿದ್ದಾರೆ.
ಗಿರಿಜಾ ಎಂಟರ್ ಪ್ರೈಸಸ್ ನ ಲಯನ್ ಶ್ರೀನಾಥ್, ನವೀನ್ ನಾಯಕ್ ( ಉದ್ಯಮಿ ತೊಕ್ಕೊಟ್ಟು ಮಂಗಳೂರು)
ಕೊಳ್ಚಪ್ಪೆ ಗೋವಿಂದ ಭಟ್ ( ಸಾಹಿತಿ ಮಂಗಳೂರು)
ರೇಮಂಡ್ ಡಿ‌ಕುನ್ಹ ( ಪಿಂಗಾರ ಪತ್ರಿಕೆ ಮಂಗಳೂರು) ಪರಿಮಳಾ ಮಹೇಶ್ (ಉಪಾಧ್ಯಕ್ಷರು ಕೇ‌..ಕ.ಸಾ.ವೇ ದ.ಕ. ಸಮಿತಿ) ಮತ್ತು ಮನ್ಸೂರ್ ಮುಲ್ಕಿ (ಉಳ್ಳಾಲ ಎ‌ಎಸ್.ಐ) ಉಪಸ್ಥಿತರಿರುವರು. ಈ ಸಾಹಿತ್ಯ ಸಂಭ್ರಮಕ್ಕೆ ಸರ್ವ ಸಾಹಿತ್ಯಾಸಕ್ತರಿಗೆ ಸ್ವಾಗತ ಎಂದು ಅದ್ಯಕ್ಷ ಡಾ ಸುರೇಶ ನೆಗಳಗುಳಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು