2:02 AM Thursday2 - May 2024
ಬ್ರೇಕಿಂಗ್ ನ್ಯೂಸ್
ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಇತ್ತೀಚಿನ ಸುದ್ದಿ

ಚಿನಗುಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಐಡಬ್ಲ್ಯುಸಿಯಿಂದ 50 ಕುರ್ಚಿ, 4 ಟೇಬಲ್ ಕೊಡುಗೆ

18/12/2023, 22:34

ಜಮಖಂಡಿ(reporterkarnataka.com): ಜಮಖಂಡಿ ತಾಲೂಕಿನ ಚಿನಗುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಇಂದು IWC of HBR ಬೆಂಗಳೂರಿನವರು ನಲಿಕಲಿ ತರಗತಿಗೆ 10 ಕುರ್ಚಿ ಹಾಗೂ 4 ಟೇಬಲ್ ಗಳನ್ನು , IWC ಬಾಗಲಕೋಟನವರು ನವರು 10 ಕುರ್ಚಿ, ˌIWC ಹಾವೇರಿಯವರು 10 ಕುರ್ಚಿ ˌ IWC ರಬಕವಿಯವರು 10 ಕುರ್ಚಿ, ˌIWC ಜಮಖಂಡಿ ಯವರು 10 ಕುರ್ಚಿಗಳನ್ನು ಶಾಲೆಗೆ ದೇಣಿಗೆಯಾಗಿ ನೀಡಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಸಮಿತಿಯ ಆಶಾ ಶಂ .ಕಾಂಬಳೆ ಅವರು ವಹಿಸಿಕೊಂಡಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ CRP ಮಾಲಗಾರ ಅವರು IWC ಯವರ ಕಾರ್ಯ ಶ್ಲಾಘನೀಯವಾದದ್ದು ಅವರು ಚಿನಗುಂಡಿ ಶಾಲೆಯನ್ನು ಆಯ್ಕೆ ಮಾಡಿಕೊಂಡದ್ದು ತುಂಬಾ ಸಂತೋಷದ ವಿಷಯ ಎಂದು ಹೇಳಿದರು. ಮುಖ್ಯಗುರುಗಳಾದ ಕುಂಬಾರ ಅವರು ಮಾತನಾಡಿ ದೇಣಿಗೆಯ ಮಹತ್ವವನ್ನು ಸರ್ವಜ್ಞನ ವಚನದ ಮೂಲಕ ವಿವರಿಸಿ ನಮ್ಮ ಶಾಲೆಗೆ ದೇಣಿಗೆ ನೀಡಿದಕ್ಕೆ IWC ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜ್ಯೋತಿ ಕಿರಣ್ ದಾಸ್ ಅವರು ಚಿನಗುಂಡಿಯ ಶಾಲೆಗೆ ಕುರ್ಚಿಗಳನ್ನು ಹಾಗೂ ಟೇಬಲ್ ಗಳನ್ನು ನೀಡಲು ಖುಷಿ ಆಗುತ್ತಿದೆ. ಮಕ್ಕಳು ಚೆನ್ನಾಗಿ ಓದಿ ಶಾಲೆಯ ಹೆಸರನ್ನು ಹಾಗೂ ಚಿನ್ನದಂತೆ ಇರುವ ಚಿನಗುಂಡಿ ಗ್ರಾಮದ ಹೆಸರನ್ನು ತರಬೇಕು ಎಂದು ಹೇಳಿದರು.
ನಂತರ ಮಾತನಾಡಿದ ವೀಣಾ ಪ್ರಮೋದ್ ಅವರು ಇಲ್ಲಿಯ ಶಾಲಾ ವಾತಾವರಣ ಕಂಡು ಹರ್ಷ ವ್ಯಕ್ತಪಡಿಸಿ ಕುರ್ಚಿಗಳನ್ನು ನೀಡಲು ಅವಕಾಶ ಮಾಡಿಕೊಟ್ಟ ಮುಖ್ಯಗುರುಗಳಿಗೂ ಹಾಗೂ ನಮ್ಮ ನಡುವೆ ಹಾಗೂ ಶಾಲೆಯ ನಡುವೆ ಸಂಪರ್ಕ ಸೇತುವೆಯಂತೆ ಕೆಲಸ ಮಾಡಿದ ಪರಮಾನಂದ ಸ. ಶಿ. ಅವರ ಕಾರ್ಯವನ್ನು ಸ್ಮರಿಸಿದರು. ವಿರಾಜ್ ಕೋಟಕ್ ಅವರು ಮಾತನಾಡಿ, ಮುಂದಿನ ದಿನಗಳಲ್ಲಿಯೂ ತಮ್ಮ ಶಾಲೆಗೆ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು. ಬೀಳಗಿಯ IWC ಯವರು ಎಲ್ಲಾ ಮಕ್ಕಳಿಗೆ ಹಣ್ಣು ಹಾಗೂ ಬಿಸ್ಕೇಟ್ ಗಳನ್ನು ನೀಡಿದರು. ನಂತರ ಶಾಲೆಯಲ್ಲಿ ಸಸಿಗಳನ್ನು ನೆಡಲಾಯಿತು. ಇದೇ ವೇಳೆ ಅತಿಥಿಗಳಿಗೆ ಸತ್ಕರಿಸಲಾಯಿತು. ಹಾಗೂ ಇದೇ ವೇಳೆ ಎಸ್ ಡಿಎಂಸಿ ಸಮಿತಿ ಚಿನಗುಂಡಿಯವರು ಶಾಲೆಗೆ 2 ನಲಿಕಲಿ ಟೇಬಲ್ ಗಳನ್ನು ನೀಡಿದರು. IWC ಯ ರಶಿತ ಬೆಂಗಳೂರದಿಂದ ˌ ಮಂಜುಳಾ ಬಾಗಲಕೋಟದಿಂದ,ˌಮಮತಾ ಹಾವೇರಿಯಿಂದ,ˌಅನನ್ಯಾ ಬೀಳಗಿಯಿಂದˌ, ದೀಪಾಲಿ ರಬಕವಿಯಿಂದ,ˌಲತಾ ಜಮಖಂಡಿಯಿಂದ ಭಾಗವಹಿಸಿದ್ದರು ಹಾಗೂ ಎಲ್ಲಾ ಪದಾಧಿಕಾರಿಗಳು ˌ ಸದಸ್ಯರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್ ಸದಸ್ಯರಾದ ರಾಮಣ್ಣ ಕಳ್ಯಾಡ್ರ ಹಾಗೂ ಊರಿನ ಪ್ರಮುಖರಾದ ನಿಂಗಪ್ಪ ತುಬಚಿ ˌ ತಿಮ್ಮಣ್ಣ ಲೆಂಡಿˌ ಶಂಕರ ಕಾಂಬಳೆˌ ಲಕ್ಷ್ಮಣ ನಾಯಕ ˌ ಮಾಳಪ್ಪ ತುಬಚಿ ˌ ಸುಧಾ ಲೆಂಡಿ ˌಹೊಳಬಸಯ್ಯ ಮಠಪತಿ ˌ ಶ್ರೀಶೈಲ್ ಮಠಪತಿ ಉಪಸ್ಥಿತರಿದ್ದರು .
ಶಿಕ್ಷಕ ಅಮರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಬಡಿಗೇರ ಅವರು ಸ್ವಾಗತಿಸಿದರು. ಶಿಕ್ಷಕ ಪರಮಾನಂದ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು