ಇತ್ತೀಚಿನ ಸುದ್ದಿ
ಕುಳಾಯಿ: 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಬಸ್ ತಂಗುದಾಣ; ಶಾಸಕ ಡಾ. ಭರತ್ ಶೆಟ್ಟಿ ಉದ್ಘಾಟನೆ
10/11/2023, 18:55
ಸುರತ್ಕಲ್(reporterkarnataka.com):ಕುಳಾಯಿ ವಾರ್ಡ್ ನಂಬ್ರ 9ರ ಚಿತ್ರಾಪುರ ಮಾಸ್ಟರ್ ಐಸ್ ಪ್ಲಾಂಟ್ ಬಳಿ ನಿರ್ಮಾಣ ಗೊಂಡ ಸಾರ್ವಜನಿಕ ಬಸ್ ತಂಗುದಾಣವನ್ನು ಶಾಸಕ ಡಾ.ಭರತ್ ಶೆಟ್ಟಿ ವೈ.ಉದ್ಘಾಟಿಸಿದರು.
ಜೈ ಮಾತಾ ಸ್ಪೋರ್ಟ್ಸ್ ಕುಳಾಯಿ ನೀಡಿದ ಮನವಿ ಮೇರೆಗೆ 7 ಲಕ್ಷ ರೂ.ವೆಚ್ಚದಲ್ಲಿ ಸಾರ್ವಜನಿಕ ಬಸ್ ತಂಗುದಾಣವನ್ನು ನಿರ್ಮಿಸಲಾಗಿತ್ತು.
ಈ ಸಂದರ್ಭ ಮನಪಾ ಸದಸ್ಯೆ ವೇದಾವತಿ, ಸಂಸ್ಥೆಯ ಪದಾಧಿಕಾರಿಗಳು, ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.