ಇತ್ತೀಚಿನ ಸುದ್ದಿ
ಕುಲಶೇಖರ ಹೋಲಿ ಕ್ರಾಸ್ ಚರ್ಚ್ ನಲ್ಲಿ 75 ಮಕ್ಕಳಿಗೆ ದೃಢೀಕರಣ ಸಂಸ್ಕಾರ: ಬಿಷಪ್ ಉಪಸ್ಥಿತಿ
31/10/2023, 20:53
ಮಂಗಳೂರು(reporterkarnataka.com): ನಗರದ ಕುಲಶೇಖರ ಹೋಲಿ ಕ್ರಾಸ್ ಚರ್ಚ್ ನಲ್ಲಿ ದೃಢೀಕರಣ ಸಂಸ್ಕಾರವನ್ನು 75 ಮಕ್ಕಳಿಗೆ ನೀಡಲಾಯಿತು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಷಪ್ ಡಾ. ಪೀಟರ್ ಪೌಲ್ ಸಲ್ದಾನ್ಹಾ ಅವರು ಸಂಸ್ಕಾರದ ಮಹತ್ವವನ್ನು ವಿವರಿಸಿದರು. ಈ ಸಂದರ್ಭದಲ್ಲಿ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ವಂ.ಫಾ. ಕ್ಲಿಪರ್ಡ್ ಫೆರ್ನಾಂಡಿಸ್, ಸಹಾಯಕ ಗುರುಗಳಾದ ವಂ.ಫಾ. ಪೌಲ್ ಡಿಸೋಜ, ವಂ. ಫಾ. ಐವನ್ ಕೊರ್ಡೆರೋ, ಉಪಾಧ್ಯಕ್ಷೆ ರೂತ್ ಕ್ಯಾಸ್ಟೊಲಿನೊ, ಕಾರ್ಯದರ್ಶಿ ಅನಿಲ್ ಡೇಸಾ, ಸರ್ವ ಆಯೋಗದ ಅಧ್ಯಕ್ಷ ಡೋಲ್ಫಿ ಡಿಸೋಜ, ಡಿಯಕೋನ್ ನೊರ್ ಮನ್, ಜಾನ್ ಮಥಾಯಿಸ್ ಮುಂತಾದವರು ಉಪಸ್ಥಿತರಿದ್ದರು.