9:08 AM Thursday2 - May 2024
ಬ್ರೇಕಿಂಗ್ ನ್ಯೂಸ್
ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ…

ಇತ್ತೀಚಿನ ಸುದ್ದಿ

ಉಚ್ಚಿಲ ದಸರಾಕ್ಕೆ ವಸ್ತು ಪ್ರದರ್ಶನದ ಮೆರುಗು: ಅಲ್ಲಿತ್ತು ಹೂವಿನ ಪಾರಿವಾಳ, ಪಂಜರ ಕೃಷಿ, 1.5 ಕೆಜಿ ತೂಕದ ಭಾರೀ ಏಡಿ!!

23/10/2023, 20:15

ಉಡುಪಿ(reporterkarnataka.com): ದಸರಾ ಅಂದ್ರೆ ಎಲ್ಲೆಡೆ ಸಡಗರ. ನಾಡಹಬ್ಬವಾದ ದಸರಾವನ್ನು ಕರಾವಳಿಯಲ್ಲೂ ಬಲು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ದಸರಾ ಅಂಗವಾಗಿ ವಿವಿಧ ವಿನೋದಾವಳಿಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅಂತಹದ್ದೊಂದು ಸಡಗರವನ್ನು
ಉಚ್ಚಿಲದಲ್ಲಿಯೂ ಹಮ್ಮಿಕೊಳ್ಳಲಾಗಿದೆ.
ಉಚ್ಚಿಲದಲ್ಲಿ ಈ ಬಾರಿ ದಸರಾ ಆಕರ್ಷಕವಾಗಿ ಮೂಡಿ ಬಂದಿದೆ. ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಕೇವಲ ಎರಡು ದಿನ ಮಾತ್ರ ಬಾಕಿ ಇದ್ದು ವಸ್ತುಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೀನುಗಾರಿಕಾ ಇಲಾಖೆಯ ಫಲಪುಷ್ಪ ಪ್ರದರ್ಶನ, ಐಟಿಡಿಸಿ, ವಾರ್ತಾ ಇಲಾಖೆ , ಪುಸ್ತಕ ಮಳಿಗಗಳು ಸೇರಿದಂತೆ ವಿವಿಧ ಪ್ರದರ್ಶನ ಗಳನ್ನು ನೋಡಲು ಜನರು ಆಗಮಿಸುತಿದ್ದಾರೆ
ಉಚ್ಚಿಲ ದಸರಾದಲ್ಲಿ ಈ ಬಾರಿ ವಿಶೇಷವಾಗಿ ಮೀನುಗಾರಿಕಾ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಸಮುದ್ರ ಮೀನು ಮತ್ತು ಆಹಾರಗಳು, ಸಿಹಿ ನೀರಿನ ಮೀನುಗಳು, ಪಚ್ಚಲ ಕೃಷಿ, ಪಂಜರ ಕೃಷಿ ಪ್ರಾತ್ಯಕ್ಷಿಕೆ, ಅಲಂಕಾರಿಕ ಮೀನುಗಳ ಬಗ್ಗೆ ವೀಕ್ಷಣೆಗೆ ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸಮುದ್ರದ ಮೀನುಗಳಾದ ಬಂಗುಡೆ, ತೊಂದೆ ಮೀನು, ಮಣ್ಣು ತೊರಕೆ, ಕಳ್ಳಿಗೋರೆ, ಟೈಗರ್ ಪ್ರಾನ್ಸ್, ಈಲ್ ಫೀಶ್ , ಏರಿ ಮೀನು, ಪೈಯ್ಯೆ , ಕಟ್ರಿ‌ ಮೀನು … ಕೆಂಬೇರಿ, ತೊರಕೆ, ಚಾಂದ್ ಮೀನ್ , ಕೊಕ್ಕರ್ , ವೀಕ್ಷಣೆಗೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
ಬೃಹತ್ ಏಡಿ ನೋಡಲು ಜನರ ದಂಡು: ಈ ಬಾರಿ ಮೀನುಗಳ ಪ್ರದರ್ಶನದಲ್ಲಿ ಒಂದೂವರೆ ಕೆ‌ಜಿ ತೂಕದ ಬೃಹತ್ ಗಾತ್ರದ ಏಡಿ ಆಕರ್ಷಣೀಯವಾಗಿದೆ. ಇದನ್ನು ನೋಡಲ ವಿದ್ಯಾರ್ಥಿಗಳು, ಮಕ್ಕಳು ಸೇರಿದಂತೆ ತಂಡೋಪ ತಂಡವಾಗಿ ನೋಡಿ ಮಂತ್ರಮುಗ್ದವಾಗಿಸಿದೆ.
ಬಂಗುಡೆ ಮೀನು: ಸಮುದ್ರದಲ್ಲಿ ಮಾತ್ರ ಕಾಣಸಿಗುತ್ತಿದ್ದು ಅದರ ವೀಕ್ಷಣೆ ಬಲು ಕಷ್ಟ. ಅದರಲ್ಲು ತುಳುನಾಡಿನಲ್ಲಿ ಬಲು ಜನಪ್ರಿಯವಾಗಿರುವ ಬಂಗುಡೆ ಮೀನು ನೋಡಲು ಜನರ ದಂಡೆ ಸೇರುತ್ತಿದೆ. ಉಪ್ಪುನೀರಿನ ಸಾಕಾಣಿಕೆಯು ಸವಾಲು ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದ್ದರು . ಮೀನುಗಾರಿಕಾ ಇಲಾಖೆ ಮಾತ್ರ ನೆರೆದ ಜನರಿಗೆ ಆಶ್ಚರ್ಯಚಕಿತರನ್ನಾಗಿಸಿದೆ.
ವಸ್ತು ಪ್ರದರ್ಶನ ವೆಂಬುದು ಹೊಸ ಹೊಸ ಪ್ರಯೋಗಗಳ ಪ್ರಯೋಗ ಶಾಲೆ. ಜನರಿಗೆ ಮೀನುಗಾರಿಕೆಯ ಪ್ರಯೋಜನಗಳು ಸೇರಿದಂತೆ ವಿವಿಧ ಸೇವೆಗಳು ಮಾಹಿತಿಗಳು, ಮೀನುಗಳ ಪರಿಚಯವಾಗಿಸುವ ವಿನೂತನ ಪ್ರಯತ್ನ ಇದಾಗಿದೆ. ಮೊದಲ ಬಾರಿ ಸಮುದ್ರ ಮೀನುಗಳ ಪ್ರದರ್ಶನ ಹೊಸ ಅಯೋಜಿಸಿದ್ದು ಹೊಸ‌ ಮೈಲಿಗಲ್ಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿ
ದಿವಾಕರ ಖಾರ್ವಿ ಹೇಳುತ್ತಾರೆ.
ಫಲಪುಷ್ಪ ಪ್ರದರ್ಶನ: ಹುಲಿಯ ಬಾಯಿಯೊಳಗಿನ ಸುರಂಗ ದಾರಿಯಲ್ಲಿ. ವಸ್ತು ಪ್ರದರ್ಶನದ ಪೆಂಡಾಲ್‌ನೊಳಗೆ ಪ್ರವೇಶಿಸುವ ದ್ವಾರ ಕೊಟ್ಟಿದೆ.
ಶಾಂತಿಯ ಸಂಕೇತವಾಗಿ ನಿರ್ಮಿಸಿದ ಹೂವಿನ ಪಾರಿವಾಳ, ವೀಣೆ, ದನಕರುಗಳು ಚೆಂಡೆ, ಮದ್ದಳೆ, ಮೃದಂಗ ಕಲಾವಿದರ ನೆನಪನ್ನು ಅದ್ಭುತ ಕೈಚಳಕದೊಂದಿಗೆ ಸಾದರಪಡಿಸಲಾಗಿದೆ. ತರಕಾರಿಯಲ್ಲಿ ಪುಸ್ತಕಗಳ ಮೂಡಿ ಬಂದಿರುವ ಉಚ್ಚಿಲ ದಸರಾದ ರೂವಾರಿ ಡಾ| ಜಿ. ಶಂಕರ್, ವಿವಿಧ ಹಿರಿಯ ಲೇಖ ದೇವರು, ಪ್ರಾಣಿ, ಪಕ್ಷಗಳ ಕೆತ್ತನೆಗಳು ಭಾರೀ ಗಮನ ಸೆಳೆಯುತ್ತಿವೆ.
ಪ್ರಾಣಿಗಳ ಕಲರವ ಹಕ್ಕಿಗಳ ಚಿಲಿಪಿಲಿ, ಮೊಲ, ಪಾರಿವಾಳ, ಗಿಳಿ, ಲವ್ ಬರ್ಡ್ ಗಳ ಮಣ್ಣಿನ ಕಲಾಕೃತಿ ಗಳು ಜನರ ಮನಸೂರೆಗೊಳಿಸಿವೆ.


ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಸ್ಥಳೀಯ ನರ್ಸರಿ ವತಿಯಿಂದ ಹಮ್ಮಿ ಕೊಂಡಿರುವ ವಿವಿಧ ಜಾತಿಯ ಹೂವಿನ ಗಿಡಗಳ ಪ್ರದರ್ಶನ ಮತ್ತು ಮಾರಾಟಕ್ಕೂ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ಅದ್ಭುತ ಕಲಾವಿದ ಯತೀಶ್ ಕಿದಿಯೂರು ನಿರ್ಮಿಸಿದ ಬಿಳಿ ನವಿಲು, ಪಾರಿವಾಳವನ್ನು ಜನರು ಮೊಬೈಲ್ ನಲ್ಲಿ ಕ್ಲಿಕ್ಕಿಸಿ ಸಂಭ್ರಮಿಸಿದರು.
ಕರಕುಶಲ ವಸ್ತುಗಳು, ಹಳೆ ನಾಣ್ಯಗಳ ಪ್ರದರ್ಶನ:
ಬುಟ್ಟಿ ಸೇರಿದಂತೆ ವಿವಿಧ ಮಾದರಿಯ ಬಳ್ಳಿಗಳಿಂದ ನಿರ್ಮಿತ ಕರಕುಶಲ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅದರಂತೆಯೇ ಹಳೆ ನಾಣ್ಯಗಳ ಪ್ರದರ್ಶನ ಮಾಡುವ ಮೂಲಕ ನಾಣ್ಯ ಸಂಗ್ರಹಕರು ಹಾಗೂ ಹವ್ಯಾಸಿಗಳಿಗೆ ಇತಿಹಾಸವನ್ನು ಮೆಲುಕು ಹಾಕಲು ಸಹಕಾರಿ ಯಾಗಿದೆ.
ವಸ್ತು ಪ್ರದರ್ಶನ ನಮಗೆ ನಮ್ಮ ಇತಿಹಾಸವನ್ನು ತಿಳಿಸುತ್ತವೆ. ನಮ್ಮ ಹಿರಿಯರ ಜೀವನ, ಪರಂಪರೆ, ಅವರು ಬಳಸುತ್ತಿದ್ದ ವಸ್ತು, ಕಲಾಕೃತಿ ಹೀಗೆ ಎಲ್ಲವೂ ನಮ್ಮನ್ನು ಸೆಳೆಯುವ ಜತೆಗೆ ಹೊಸದೊಂದು ಲೋಕಕ್ಕೆ ಕೊಂಡೊಯ್ಯುತ್ತದೆ ಎಂದು
ವಸ್ತು ಪ್ರದರ್ಶನ ಮೇಲ್ವಿಚಾರಕರು ಹಾಗೂ ಕಲಾವಿದರಾದ ಯತೀಶ್ ಕಿದಿಯೂರು ಅಭಿಪ್ರಾಯಪಡುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು