12:23 PM Friday17 - May 2024
ಬ್ರೇಕಿಂಗ್ ನ್ಯೂಸ್
ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,…

ಇತ್ತೀಚಿನ ಸುದ್ದಿ

ಜಂಗಮರೆಂದರೆ ಯಾರು?

08/10/2023, 20:32

ಜಂಗಮರೆಂದರೆ ಯಾರು? ಯಾರು??
ಯಾರು? ಯಾರು?? ಜಂಗಮರೆಂದರೆ!! ಪ!!
ಎಲ್ಲವನ ಕೊಟ್ಟು ಇಹದೆಲ್ಲವನ ಬಿಟ್ಟು
ಬಲ್ಲಿದನ ಜೋಳಿಗೆಯ ಕರದಲಿ ಪಿಡಿದು
ಕಲ್ಲು ಮನಸುಗಳ ಹೂವಾಗಿಸುವದೆಡೆಗೆ
ಮಲ್ಲಿನಾಥನ ಮಗನಾಗಿ ಯೋಗಿಯಾದವರೆ!! ಜಂಗಮ!!

ಬಣ್ಣ ಬಣ್ಣಗಳ ಕನಸುಗಳನೆಲ್ಲ ತೊರೆದು
ಬಿನ್ನಹದಿಂದಲೆ ಜೀವನದ ಸಾರವ ಸಾರೊ
ಕಣ್ಣು ಕಣ್ಣುಗಳ ತೆರೆಸೊ ಜ್ಞಾನ ಭಂಡಾರವು
ಹುಣ್ಣುಮೆಯ ತಂಪನೇ ಚೆಲ್ಲೊ ಕಾಂತಿಯೆ!! ಜಂಗಮ!!

ಬದುಕಿನ ತಿರುಳನ್ನು ವಚನದಲಿ ಸಾರುತ್ತ
ಹೃದಯಗಳಲಿ ಅಮೃತವನೆ ಧಾರೆಯೆರೆವ
ಹದಿಬದೆಯ ಧರ್ಮದ ತಿರುಳನೆ ಬಿತ್ತುವ
ವಿಧಿತದಲಿ ಸರ್ವರಾ ಬಾಳನೆ ಬೆಳಗುವವರೆ!! ಜಂಗಮ!!

ಕಾಮ ಕ್ರೋಧ ಲೋಭ ಮೋಹ ಮತ್ಸರವ
ಯಾಮದಿಂದಲೆ ತೊರೆದು ಸಾಧುವಾಗಿಹ
ಸೋಮ ಸೂರ್ಯರಂತೆಯೆ ಜಗ ಕಾಯುವ
ನಾಮ ನಿರ್ದೇಶಿತ ಕಾವಿಯ ಕಾರ್ಮಿಕರೆ!! ಜಂಗಮ!!

– ಅನಿತಾ ಸಾಲಿಮಠ ಅಂತರಗಂಗೆ
(ವಿದ್ಯಾ ಚೇತನ ಪದವಿ ಪೂರ್ವ ಕಾಲೇಜು ಲಿಂಗಸೂರ್)

ಇತ್ತೀಚಿನ ಸುದ್ದಿ

ಜಾಹೀರಾತು