ಇತ್ತೀಚಿನ ಸುದ್ದಿ
ತೆಲಂಗಾಣ ರಸ್ತೆ ಅಪಘಾತ: ಅಥಣಿ ಕುಟುಂಬದ ಮತ್ತೊಬ್ಬ ಗಾಯಾಳು ಸಾವು; ಮೃತರ ಸಂಖ್ಯೆ 7ಕ್ಕೇರಿಕೆ
26/09/2023, 19:53
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ತೆಲಂಗಾಣದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಇನ್ನೊರ್ವ ಗಾಯಾಳು ಸಾವನ್ನಪ್ಪುದರೊಂದಿಗೆ ಮೃತರ ಸಂಖ್ಯೆ 7ಕ್ಕೇರಿದೆ.
ಸೆಪ್ಟಂಬರ್ 15 ರಂದು ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಮಟ್ಟಮ್ ಪಲ್ಲಿ ಕಡಪಾ- ಚಿತ್ತೂರು ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಅಥಣಿ ತಾಲೂಕಿನ ಬಡಚಿ ಗ್ರಾಮದ 5 ಮಂದಿ ಸಾವನ್ನಪ್ಪಿದ್ದರು. ತಿರುಪತಿ ಪ್ರವಾಸಕ್ಕೆ ತೆರಳಿದ ಆಜೂರ್ ಕುಟುಂಬದ 14 ಜನರಲ್ಲಿ ನಾಲ್ವರು ಹಾಗೂ ವಾಹನ ಚಾಲಕ ಒಟ್ಟು ಐದು ಜನ ಸ್ಥಳದಲ್ಲೇ ಮೃತ ಪಟ್ಟಿದ್ದರು ಕಸ್ತೂರಿ ಆಜೂರ್ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಿಂದ – ಬೆಳಗಾವಿಗೆ ತರುವಾಗ ರಸ್ತೆ ಮದ್ಯದಲ್ಲೇ ಕೊನೆವುಸಿರೆಳೆದಿದ್ದರು.. ಇನ್ನುಳಿದ 7 ಜನರಲ್ಲಿ ಇಂದು ನಸುಕಿನ ಜಾವ ಮತ್ತೊರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೆಡಾಗಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸವರಾಜ್ ಗಿರಿಮಲ್ಲ ಆಜೂರ್ (32) ಮಹಾರಾಷ್ಟ್ರ ದ ಮಿರಜ್ ಆಸ್ಪತ್ರೆಗೆ ತರುವಾಗ ರಸ್ತೆ ಮದ್ಯ ಸಾವು ಸಂಭವಿಸಿದೆ.
ಬಸವರಾಜ ಸಾವಿನಿಂದ ಆಜೂರ ಕುಟುಂಬದ ಸಾವಿನ ಸಂಖ್ಯೆ 7ಕ್ಕೆ ಏರಿದೆ. ಇನ್ನುಳಿದ ತಿರುಪತಿ ತಿಮ್ಮಪ್ಪನ ಪ್ರವಾಸದಲ್ಲಿ ಕುಟುಂಬ ಕಳೆದುಕೊಂಡ ಆಜೂರ ಮನೆತನದಲ್ಲಿ ನೀರವ ಮೌನ ಅವರಿಸಿದೆ.