ಇತ್ತೀಚಿನ ಸುದ್ದಿ
ಕೊಟ್ಟಿಗೆಹಾರ: ಸಾರ್ವಜನಿಕ ಕುಡಿಯುವ ನೀರಿನ ಬಾವಿ ಸ್ವಚ್ಛತಾ ಕಾರ್ಯಕ್ರಮ
10/09/2023, 20:42
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೊಟ್ಟಿಗೆಹಾರ ಸಾರ್ವಜನಿಕ ಕುಡಿಯುವ ನೀರಿನ ಬಾವಿ ಸ್ವಚ್ಛತಾ ಕಾರ್ಯಕ್ರಮ ಜೆಸಿಐ ಬಣಕಲ್ ವಿಸ್ಮಯ ಟೀಮ್ ಸುಪ್ರೀಂ ಅವರು ಆಯೋಜಿಸುತ್ತಿರುವ ಸಪ್ತಾಹ ಕಾರ್ಯಕ್ರಮದ ಎರಡನೇ ದಿನದ ಕ್ಲೀನ್ ವಾಟರ್ ಅಂಡ್ ಸ್ಯಾನಿಟೇಶನ್ ಕಾರ್ಯಕ್ರಮವನ್ನು ಭಾರತಿ ಬೈಲಿನ ಸಾರ್ವಜನಿಕರು ಕುಡಿಯುವ ನೀರಿನ ಬಾವಿಯನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಳ್ಳಲಾಯಿತು.
ಈಗ ಕಾರ್ಯಕ್ರಮದಲ್ಲಿ ಜೇಸಿ ಅಧ್ಯಕ್ಷರಾದ ಕೃಷ್ಣೆಗೌಡ, ಸ್ಥಾಪಕ ಅಧ್ಯಕ್ಷರಾದ ಸುರೇಶ್ ಶೆಟ್ಟಿ , ಪೂರ್ವ ಅಧ್ಯಕ್ಷರಾದ ಜೆಸಿ ಗಜೇಂದ್ರ , ಜೆ ಸಿ ದಿನೇಶ್ ಏನ್ ಟಿ , ಜೆಸಿ ರವಿಶಂಕರ್ ಹಾಗೂ ಕಸ್ತೂರಬಾ ಟ್ರಸ್ಟ್ ನಿರ್ದೇಶಕರಾದ ಜಯರಾಮ್ ರವರು ಉಪಸ್ಥಿತರಿದ್ದರು.