ಇತ್ತೀಚಿನ ಸುದ್ದಿ
‘ಅಂದು ಪದ್ಮಲತಾ ಇಂದು ಸೌಜನ್ಯ’ ಪೋಸ್ಟರ್ ಬಿಡುಗಡೆ: ಚಲೋ ಬೆಳ್ತಂಗಡಿಗೆ ಸಿಪಿಎಂ ಬೆಂಬಲ
23/08/2023, 10:57
ಮಂಗಳೂರು(reporterkarnataka.com):ಸೌಜನ್ಯ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಆಗಸ್ಟ್ 28 ರಂದು ನಡೆಯುವ “ಚಲೋ ಬೆಳ್ತಂಗಡಿ” ಮಹಾ ಧರಣಿಗೆ ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಬೆಂಬಲ ಸೂಚಿಸಿದೆ. ಚಲೋ ಬೆಳ್ತಂಗಡಿಯ ಪೋಸ್ಟರ್ ಅನಾವರಣ ಗೊಳಿಸಲಾಯಿತು.
ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ರಾಜ್ಯ ಸಮಿತಿ ಸದಸ್ಯರಾದ ವಸಂತ ಆಚಾರಿ, ಮುನೀರ್ ಕಾಟಿಪಳ್ಳ, ಜಿಲ್ಲಾ ಪ್ರಮುಖರಾದ ಡಾ. ಕೃಷ್ಣಪ್ಪ ಕೊಂಚಾಡಿ, ಸುಕುಮಾರ್ ತೊಕ್ಕೊಟು, ಜಯಂತಿ ಶೆಟ್ಟಿ, ರಮಣಿ ಮೂಡಬಿದ್ರೆ, ಜೆ ಬಾಲಕೃಷ್ಣ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.