10:03 PM Saturday18 - May 2024
ಬ್ರೇಕಿಂಗ್ ನ್ಯೂಸ್
ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ…

ಇತ್ತೀಚಿನ ಸುದ್ದಿ

ಸರಕಾರದ ಯೋಜನೆಗಳನ್ನು ತಾಯಂದಿರು ಸಮರ್ಪಕವಾಗಿ ಬಳಸಿಕೊಳ್ಳಬೇಕು: ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವ

08/08/2023, 22:13

ಮಂಗಳೂರು(reporterkarnataka.com): ನಗರದ ಬಜಾಲ್ ಪಕ್ಕಲಡ್ಕ ಯುವಕ ಮಂಡಲದ ಅಂಗನವಾಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಕಣ್ಣೂರು ವಲಯ ಅಂಗನವಾಡಿ ಕಾರ್ಯ ಕರ್ತೆಯರಿಂದ ‘ಆತಿಡೊಂಜಿ ದಿನ ಹಾಗೂ ವಿಶ್ವ ಸ್ತನ್ಯ ಪಾನ್ಯ ಸಪ್ತಾಹ’ ಕಾರ್ಯಕ್ರಮ ಜರುಗಿತು.





ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾಧಿಕಾರಿ ರಶ್ಮಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,ಎದೆ ಹಾಲು ಉಣಿಸುವ ತಾಯಂದಿರಲ್ಲಿ ಸೌಂದರ್ಯ ಹೆಚ್ಚುತ್ತದೆ.



ಎದೆಹಾಲು ಕುಡಿಸುವಂತ ತಾಯಿಯಂದಿರಲ್ಲಿ ಬ್ರೆಸ್ಟ್ ಕ್ಯಾನ್ಸರ್ ತುಂಬಾ ಕಡಿಮೆಯಾಗಿರುತ್ತದೆ, ತಾಯಿ ಮಗುವಿನ ಬಾಂಧವ್ಯ ಜಾಸ್ತಿಯಾಗುತ್ತದೆ. ಈಗಿನವರು ಒಂದು ಕೈಯಲ್ಲಿ ಮೊಬೈಲ್ ನಲ್ಲಿ ಮಗ್ನ ರಾಗಿ ಮಗು ಸರಿಯಾಗಿ ಹಾಲು ಕುಡಿಯುತ್ತಿದೆಯೋ ಇಲ್ಲ ಆನ್ನೋದರ ಗಮನ ಇಲ್ಲದೆ, ಮಗುವಿಗೆ ತಾಯಿಯ ಸ್ಪರ್ಶ ಕಡಿಮೆಯಾಗುತ್ತಿದೆ ಎಂದರು.

ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವ ಮಾತನಾಡಿ,
ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ನಮ್ಮಲ್ಲಿ ಹಳೆ ಕಾಲದ ಆಹಾರ ಪದ್ಧತಿ ವಿರಳವಾಗಿದೆ.


ಸರಕಾರದ ಎಲ್ಲ ಯೋಜನೆಗಳನ್ನು ತಾಯಿಯಂದಿರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ತಾಯಿ ಹಾಲು ಉಣಿಸುವಾಗ ಆದಷ್ಟು ಮೊಬೈಲ್ ನಿಂದ ದೂರವಿದ್ದು ಪುಸ್ತಕಗಳ ಪ್ರೀತಿ ಬೆಳೆಸಬೇಕು. ಆಗ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಆರೋಗ್ಯವಂತ ಮನಸ್ಥಿತಿಯಿಂದ ಬೆಳೆಯಲು ಸಾಧ್ಯ ಎಂದು ಅವರು ನುಡಿದರು.

ಎಕ್ಕೂರು ಪ್ರಾಥಮಿಕ ಕೇಂದ್ರದ ಡಾ.ರೆಹನ ಮಾತನಾಡಿ, ತಾಯಿ ಎದೆ ಹಾಲು ಉಣಿಸುವ ವಿಧಾನ ಹಾಗೂ ಮಗುವಿನ ಜೊತೆ ಹಾಲು ಉಣಿಸುವ ಸಂದರ್ಭದಲ್ಲಿ ಮೊಬೈಲ್ ಇನ್ನಿತರ ವಿಷಯಗಳಲ್ಲಿ ನಮ್ಮನ್ನು ವಿಚಲಿತಗೊಳಿಸದೇ ಮಗುವಿನ ಜೊತೆಗೆ ಮನಪೂರ್ವಕವಾಗಿ ಸಮಯ ನೀಡಿದಾಗ ಮಾತ್ರ ಮಗು ಉತ್ತಮವಾಗಿ ಬೆಳೆಯಲು ಸಾಧ್ಯ. ಸರಿಯಾಗಿ ಬ್ರೆಸ್ಟ್ ಫೀಡ್ ಮಾಡಿ ಅವಾಗ ತಾಯಿ ಕೂಡ ಆರೋಗ್ಯ ವಾಗಿರುತ್ತಾರೆ. ಹಾಲು ಉಣಿಸುವುದು ದೇವರು ಕೊಟ್ಟ ಅತ್ಯಂತ ದೊಡ್ಡ ವರ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಿಡಿಪಿಒ ಶ್ವೇತಾ,ಕಣ್ಣೂರು ವಲಯ ಅಂಗನವಾಡಿ ಮೇಲ್ವಿಚಾರಕಿ ಅನುಪಮಾ, ಬಜಾಲ್ ಪಕಲಡ್ಕ ಯುವಕ ಮಂಡಲ ಶಿಕ್ಷಕಿ ಆಶಾ, ಸಹಾಯಕಿ ತುಳಸಿ, ಜಪ್ಪಿನ ಮೊಗರು ಯುವಕ ಮಂಡಲ ಅಂಗನವಾಡಿ ಶಿಕ್ಷಕಿ ಪವಿತ್ರ,ಗೀತಾ ಚೌಟ ಹಾಗೂ ಇತರ ಅಂಗನವಾಡಿ ಶಿಕ್ಷಕರು ಉಪಸ್ಥಿತರಿದ್ದರು.




ಕಾರ್ಯಕ್ರಮದಲ್ಲಿ ವಿವಿಧ ಆಟಿದ ಖಾದ್ಯಗಳು, ಆಟಿ ಕಲೆಂಜದ ವೇಷದಾರಿ ಬಾಲಕ ಭವಿಷ್ ನೃತ್ಯ ನಡೆಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು