12:00 PM Saturday18 - May 2024
ಬ್ರೇಕಿಂಗ್ ನ್ಯೂಸ್
ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,…

ಇತ್ತೀಚಿನ ಸುದ್ದಿ

ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದು ಬಾಹ್ಯ ಗೂಂಡಾವೇ? ಅಲ್ಲ, ಸ್ವತಃ ಕಾಲೇಜಿನ ಡೀನೇ?: ಇದು ಯಾವ ಸಂಸ್ಥೆಯಲ್ಲಿ ನಡೆದದ್ದು? ಪೊಲೀಸರೇ ಉತ್ತರಿಸಿ

16/06/2023, 22:28

ಮಂಗಳೂರು(reporterkarnataka.com):
ಕಾಲೇಜೊಂದರ ವಿದ್ಯಾರ್ಥಿಯ ಮೇಲೆ ತರಗತಿಯಲ್ಲೇ ಗಟ್ಟಿಮುಟ್ಟಾದ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ ಸಿಸಿ ಟಿವಿ ಫೂಟೇಜ್ ಇದೀಗ ವೈರಲ್ ಆಗುತ್ತಿದೆ. ಹಲ್ಲೆ ನಡೆಸಿದ ವ್ಯಕ್ತಿ ಹೊರಗಿನಿಂದ ಬಂದ ಗೂಂಡಾವೇ? ಅಲ್ಲ ಅದೇ ಕಾಲೇಜಿನ ಉಪನ್ಯಾಸಕ/ಸಿಬ್ಬಂದಿ ವರ್ಗದವರೇ? ಹಾಗಾದರೆ ಇದು ಯಾವ ಕಾಲೇಜಿನಲ್ಲಿ ನಡೆದದ್ದು?

ಪೊಲೀಸ್ ಇಲಾಖೆ ಸ್ವಯಂ ನೆಲೆಯಲ್ಲಿ ಕೇಸು ದಾಖಲಿಸಿ ತಕ್ಷಣ ತನಿಖೆ ನಡೆಸುವ ಅಗತ್ಯವಿದೆ.
ಇದು ಮೂಡುಬಿದರೆ ಪರಿಸರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ. ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಹೊರಗಿನಿಂದ ಬಂದ ಗೂಂಡಾ ಅಲ್ಲ, ಬದಲಿಗೆ ಕಾಲೇಜಿನ ಡೀನ್ ಎಂಬ ಮಾಹಿತಿಯೂ ರಿಪೋರ್ಟರ್ ಕರ್ನಾಟಕಕ್ಕೆ ಲಭ್ಯವಾಗಿದೆ. ಆದರೆ ಅಧಿಕೃತ ಸ್ಪಷ್ಟನೆ ಎಲ್ಲಿಂದಲೂ ಹೊರಬಂದಿಲ್ಲ.
ವಿದ್ಯಾರ್ಥಿ ಚಪ್ಪಲಿ ಧರಿಸಿದ್ದಾನೆ ಎಂಬ ಕಾರಣಕ್ಕೆ ಕಾಲೇಜಿನ ಡೀನ್ ವಿದ್ಯಾರ್ಥಿಯ ಕಾಲೆಳೆದು ಆತನನ್ನು ನೆಲಕ್ಕೆ ಕೆಡಹಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸುಮಾರು 18ರಿಂದ 20 ವರ್ಷದೊಳಗಿನ ಕೃಶ ಕಾಯದ ವಿದ್ಯಾರ್ಥಿಯ ಕಾಲನ್ನು ಅಮಾನುಷವಾಗಿ ಆ ಗಟ್ಟಿ ಶರೀರದ ವ್ಯಕ್ತಿ
ಎಳೆದು ಹಾಕಿ ನೆಲಕ್ಕೆ ಕೆಡಹಿ ಹಲ್ಲೆ ನಡೆಸಿರುವುದು ಸಿಸಿ ಕ್ಯಾಮೆರಾ ತುಣುಕಿನಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಈ ಘಟನೆ ನಡೆದಾಗ ತರಗತಿಯಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿರುವುದು ಕಂಡು ಬರುತ್ತದೆ. ಆದರೆ ಅವರು ಭಯದಿಂದ ಯಾವುದೇ ವಿರೋಧ ವ್ಯಕ್ತಪಡಿಸದೆ ಮೂಕ ಸಾಕ್ಷಿಯಾಗಿರುವುದು ಕಂಡು ಬರುತ್ತದೆ. ಹಲ್ಲೆಗೊಳಗಾದ ವಿದ್ಯಾರ್ಥಿ ಮೂಳೆ ಮುರಿತಕ್ಕೊಳಗಾಗಿದ್ದಾನೆ ಎನ್ನಲಾಗಿದೆ.
ಪ್ರಸಕ್ತ ಶಿಕ್ಷಣ ನೀತಿ ಪ್ರಕಾರ ಎಲ್ ಕೆಜಿಯಿಂದ ಆರಂಭಗೊಂಡು ಪಿಜಿ ವರೆಗಿನ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೆ ಹೊಡೆಯುವಂತಿಲ್ಲ. ಅಪ್ಪ- ಅಮ್ಮ ಕೂಡ ಹೊಡೆಯುವಂತಿಲ್ಲ. ಕಾನೂನು ಈ ರೀತಿ ಇರುವಾಗ ಹರೆಯಕ್ಕೆ ಕಾಲಿಟ್ಟ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲು ಡೀನ್ ಎನ್ನಲಾದ ಈ ವ್ಯಕ್ತಿಗೆ ಹಕ್ಕು ಕೊಟ್ಟವರು ಯಾರು? ಈ ಹಿನ್ನೆಲೆಯಲ್ಲಿ ಮೂಡುಬಿದ್ರೆ ಸುತ್ತಮುತ್ತ ನಡೆದ ಘಟನೆ ಇದಾದರೆ ಮೂಡುಬಿದ್ರೆ ಪೊಲೀಸರು ಸ್ವಯಂ ನೆಲೆಯಲ್ಲಿ ಕೇಸು ದಾಖಲಿಸಿ ಇದು ಯಾವ ಕಾಲೇಜಿನಲ್ಲಿ ಆದ ಘಟನೆ ಎನ್ನುವುದನ್ನು ತನಿಖೆ ನಡೆಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು