11:38 AM Saturday18 - May 2024
ಬ್ರೇಕಿಂಗ್ ನ್ಯೂಸ್
ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,…

ಇತ್ತೀಚಿನ ಸುದ್ದಿ

ಜಪ್ಪು ಸಂತ ಅಂತೋನಿ ಆಶ್ರಮದ ವಾರ್ಷಿಕ ಹಬ್ಬ ಮತ್ತು ಶತಮಾನೋತ್ತರ ಬೆಳ್ಳಿ ಹಬ್ಬದ ಸಮಾರೋಪ

14/06/2023, 10:39

ಮಂಗಳೂರು(reporterlarnataka.com): ನಗರದ ಜಪ್ಪು ಸಂತ ಅಂತೋನಿ ಆಶ್ರಮದ ವಾರ್ಷಿಕ ಹಬ್ಬ ಮತ್ತು ಶತಮಾನೋತ್ತರ ಬೆಳ್ಳಿಹಬ್ಬ ಆಚರಣೆಯ ಸಮಾರೋಪ ಮಂಗಳವಾರ ನಡೆಯಿತು. ಇದರ ಅಂಗವಾಗಿ ಸಂಜೆ 6 ಗಂಟೆಗೆ ಸಂಭ್ರಮದ ಬಲಿ ಪೂಜೆಯನ್ನು ಮಂಗಳೂರಿನ ಬಿಷಪ್ ರೈ.ರೆ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಮಿಲಾಗ್ರಿಸ್ ಚರ್ಚ್ ನಲ್ಲಿ ನಡೆಸಿಕೊಟ್ಟರು.
ವಿಕಾರ್ ಜನರಲ್ ಮೊ. ಮ್ಯಾಕ್ಸಿಮ್ ಎಲ್. ನೋರೋನ್ಹಾ, ಸಂತ ಅಂತೋನಿ ಆಶ್ರಮದ ನಿರ್ದೇಶಕ ಫಾ. ಜೆ. ಬಿ. ಕ್ರಾಸ್ತಾ, ಮಿಲಾಗ್ರಿಸ್ ಚರ್ಚ್ ನ ಪ್ರಧಾನ ಗುರು ಫಾ. ಬೊನವೆಂಚರ್ ನಜರೆತ್ ಮತ್ತು ಮಂಗಳೂರು ನಗರ ಸುತ್ತಮುತ್ತಲ ವಿವಿಧ ಚರ್ಚ್ ಗಳ ಧರ್ಮಗುರುಗಳು ಉಪಸ್ಥಿತರಿದ್ದರು.
ಬಲಿ ಪೂಜೆ ಸಂದರ್ಭದಲ್ಲಿ ಪ್ರವಚನ ನೀಡಿದ ಬಿಷಪ್ ರೈ.ರೆ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು, ಸಂತ ಅಂತೋನಿ ಅವರದು ಆಕರ್ಷಕ ವ್ಯಕ್ತಿತ್ವ. ಅವರ ಪವಿತ್ರ ಸ್ಮರಣಿಕೆಯು ಅವರ ಸಮಗ್ರ ಬದುಕಿನ ಪ್ರತಿಬಿಂಬ. ಅವರು ಮರಣ ಹೊಂದಿ ಹಲವು ವರ್ಷ ಕಳೆದರೂ ಇಂದಿಗೂ ಅವರನ್ನು ಸ್ಮರಿಸುತ್ತಾರೆ. ಅವರಲ್ಲಿ ಪ್ರಾರ್ಥಿಸುವ ಮೂಲಕ ದೇವರ ಸಾಮಿಪ್ಯ ಪಡೆಯುತ್ತಾರೆ. ಅವರ ಬದುಕು ನಮಗೆಲ್ಲರಿಗೂ ಆದರ್ಶ ಹಾಗೂ ಪ್ರೇರಣೆಯಾಗಿದೆ. ಮಂಗಳೂರಿನಲ್ಲಿ 125 ವರ್ಷಗಳ ಹಿಂದೆ ಆರಂಭವಾದ ಸಂತ ಅಂತೋನಿ ಅವರ ಭಕ್ತಿಯ ಆಚರಣೆ ನೂರಾರು ಜನರ ಉತ್ತಮ ಬದುಕಿಗೆ ಸಹಾಯಕ ವಾಗಿದೆ. ದೇವರ ವಾಕ್ಯದ ಪ್ರಕಾರ ಜೀವಿಸಿದರೆ ಶಕ್ತಿಯುತರಾಗ ಬಹುದೆಂಬುದಕ್ಕೆ ಸಂತ ಅಂತೋನಿ ಅವರು ಸಾಕ್ಷಿ ಎಂದರು.
ಸಂತ ಅಂತೋನಿ ಆಶ್ರಮದ ನಿರ್ದೇಶಕ ಫಾ. ಜೆ. ಬಿ. ಕ್ರಾಸ್ತಾ ಅವರು ವಂದನಾರ್ಪಣೆ ಸಲ್ಲಿಸಿದರು.
ಆಶ್ರಮದ 125 ನೇ ವರ್ಷಾಚರಣೆ ಅಂಗವಾಗಿ 12 ತಿಂಗಳು ಕಾಲ ವಿವಿಧ ಕಾರ್ಯಕ್ರಮಗಳು ಜರಗಿದ್ದು, ಇಂದು ಇವೆಲ್ಲವುಗಳ ಸಮಾರೋಪದ ಪ್ರಯುಕ್ತ ಶತಮಾನೋತ್ತರ ಬೆಳ್ಳಿಹಬ್ಬದ ಲಾಂಚನಕ್ಕೆ ಬೆಳಗಿಸಿದ್ದ ದೀಪಗಳನ್ನು ಆರಿಸಲಾಯಿತು.
ಹಬ್ಬದ ಪ್ರಯುಕ್ತ ಇಂದು ಬೆಳಗ್ಗೆ 6 ಗಂಟೆಗೆ ವಿಕಾರ್ ಜನರಲ್ ಮೊ. ಮ್ಯಾಕ್ಸಿಮ್ ಎಲ್. ನೋರೋನ್ಹಾ ಅವರು ಜಪ್ಪು ಆಶ್ರಮದಲ್ಲಿ ಬಲಿಪೂಜೆ ಮತ್ತು ಆರಾಧನೆ, 8.15ಕ್ಕೆ ಎಪಿಸ್ಕೋಪಲ್ ವಲಯ ಮುಖ್ಯಸ್ಥ ಫಾ. ವಿನ್ಸೆಂಟ್ ಮೊಂತೇರೊ ಅವರಿಂದ ಮಿಲಾಗ್ರಿಸ್ ಚರ್ಚ್ ನಲ್ಲಿ ಬಲಿ ಪೂಜೆ, 11 ಗಂಟೆಗೆ ಬರೇಲಿ ಧರ್ಮ ಪ್ರಾಂತ್ಯದ ಬಿಷಪ್ ರೈ.ರೆ. ಇಗ್ನೇಷಿಯಸ್ ಡಿ ಸೋಜಾ ಅವರು ಜಪ್ಪು ಆಶ್ರಮದಲ್ಲಿ ಬಲಿ ಪೂಜೆ ನೇವೇರಿಸಿದರು. ಮಧ್ಯಾಹ್ನ 12.30 ಗಂಟೆಗೆ ಸಹ ಮಿಲನ ಕಾರ್ಯಕ್ರಮ ನಡೆಯಿತು.
ಮಿಲಾಗ್ರಿಸ್ ಚರ್ಚ್ ನ ಪ್ರಧಾನ ಗುರು ಫಾ. ಬೊನವೆಂಚರ್ ನಜರೆತ್ ಮತ್ತು ಮಂಗಳೂರು ನಗರ ಸುತ್ತಮುತ್ತಲ ವಿವಿಧ ಚರ್ಚ್ ಗಳ ಧರ್ಮಗುರುಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು