7:11 AM Sunday19 - May 2024
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ…

ಇತ್ತೀಚಿನ ಸುದ್ದಿ

ಹೇಸಿಗೆ ಹುಟ್ಟಿಸುವ ಪಕ್ಷಾಂತರ ರಾಜಕೀಯ: ಅಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ; ಇಲ್ಲಿ ಕಾಂಗ್ರೆಸ್ ಬಿಟ್ಟು ಜನತಾದಳಕ್ಕೆ!!

20/04/2023, 23:09

ಅಶೋಕ್ ಕಲ್ಲಡ್ಕ ಮಂಗಳೂರು
info.reporterkarnataka@gmail.com

ಉತ್ತರ ಕರ್ನಾಟಕದಲ್ಲಿ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕಾಂಗ್ರೆಸ್ ಸೇರಿದ್ದಾರೆ. ಕರಾವಳಿಯಲ್ಲಿ ಟಿಕೆಟ್ ಮಿಸ್ ಆಗಿರುವುದಕ್ಕೆ ಮಾಜಿ ಶಾಸಕರೊಬ್ಬರು ಅತ್ತು ರಂಪ ಮಾಡಿ ಕಾಂಗ್ರೆಸ್ ಬಿಟ್ಟು ಜನತಾದಳ ಸೇರ್ಕೊಂಡಿದ್ದಾರೆ. ಇವರಿಗೂ ಬೆಂಬಲಿಗರಿದ್ದಾರೆ. ಬಹು ಪರಾಕ್ ಹೇಳುವವರಿದ್ದಾರೆ.!

ಹುಬ್ಬಳ್ಳಿಯಲ್ಲಿ ಟಿಕೆಟ್ ಮಿಸ್ ಆಗಿರುವುದಕ್ಕೆ ಮಾಜಿ ಸಿಎಂ ಜಗದೀಶ ಶೆಟ್ಡರ್ , ಅಥಣಿಯಲ್ಲಿ ಟಿಕೆಟ್ ಕೈಗೆಟಕದಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಶೆಟ್ಟರ್ ಅವರು ಬಿಜೆಪಿ ಮೂಲ ನಿವಾಸಿ. ಅವರೇನು ವಲಸಿಗ ಬಿಜೆಪಿಗನಲ್ಲ. ಆರೆಸ್ಸೆಸ್ ಮೂಲದಿಂದ ಬಂದ ಕಟ್ಟಾ ಬಿಜೆಪಿಗ. ಸುಮಾರು 40 ವರ್ಷಗಳ ಬಿಜೆಪಿಯೊಂದಿಗಿನ ಕರುಳು ಬಳ್ಳಿ ಸಂಬಂಧವನ್ನು ಕಡಿದು ಅವರು ಹೊರಗೆ ಬಂದಿದ್ದಾರೆ.
ಶೆಟ್ಟರ್ ವೈಯಕ್ತಿಕವಾಗಿ ತುಂಬಾ ಒಳ್ಳೆಯ ಮನುಷ್ಯ, ಸಜ್ಜನ ರಾಜಕಾರಣಿ. ಯಾವುದೇ ಹಗರಣ, ವಿವಾದದಲ್ಲಿ ಸಿಲುಕಿಹಾಕಿಕೊಂಡವರಲ್ಲ. ಆದರೆ ಮೇಲಿನಿಂದ ಹೇರುವ ಬಿಜೆಪಿಯ ಹೈಕಮಾಂಡ್ ಸಂಸ್ಕೃತಿ ವಿರುದ್ಧ ಶೆಟ್ಟರ್ ಬಂಡಾಯವೆದ್ದಿದ್ದಾರೆ.

ಮೃದು ಸ್ವಭಾವದ ಶೆಟ್ಟರ್ ಅವರು ಯಾವತ್ತೂ ಪಕ್ಷದ ಸಿದ್ದಾಂತದ ವಿರುದ್ಧ ಹೋದವರಲ್ಲ ಆದರೆ ಈ ಬಾರಿ ಅವರ ಸ್ವಾಭಿಮಾನಕ್ಕೆ ಸಿಕ್ಕಾಪಟ್ಟೆ ಘಾಸಿಯಾಗಿರುವುದು ಅವರು ಬಂಡಾಯ ಏಳಲು ಕಾರಣವಾಗಿದೆ. ಸ್ವಾಭಿಮಾನಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ಶೆಟ್ಟರ್ ಬಿಜೆಪಿಯಿಂದ ಹೊರ ಬಂದರೂ ಅವರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದಿತ್ತು. ಆದರೆ ಶೆಟ್ಟರ್ ತನ್ನ ರಾಜಕೀಯ ಜೀವನದುದ್ದಕ್ಕೂ ವಿರೋಧಿಸುತ್ತಲೇ ಬಂದ ಕಾಂಗ್ರೆಸ್ ಸೇರಿದರು. ಇನ್ನು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದ ಆರೋಪಕ್ಕೊಳಗಾದವರು. ವಿಶೇಷವೆಂದರೆ ಕಾಂಗ್ರೆಸಿಗರು ಮೊನ್ನೆ ಮೊನ್ನೆಯವರೆಗೂ ಸವದಿ ಅವರಿಗೆ ಬ್ಲೂಫಿಲಂ ನೋಡಿದವರು ಎಂದು ಹಂಗಿಸುತ್ತಲೇ ಇದ್ದರು. ರಾಜಕೀಯದಲ್ಲಿ ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಎಂಬಂತೆ ಇದೀಗ ಲಕ್ಷ್ಮಣ ಸವದಿ ಕಾಂಗ್ರೆಸಿಗರಿಗೆ ಬಹಳ ನೆಂಟಸ್ಥರಾಗಿದ್ದಾರೆ. ಅದೇ ರೀತಿ ಬಿಜೆಪಿ ಕೂಡ ಕಾಂಗ್ರೆಸ್ ಮತ್ತು ಜನತಾ ದಳ ಶಾಸಕರನ್ನು ಆಪರೇಶನ್ ಕಮಲಕ್ಕೊಳಪಡಿಸಿ ಅಧಿಕಾರಕ್ಕೆ ಬಂದಿದೆ. ಜನಸಂಘದಿಂದ ರೂಪಾಂತರಗೊಂಡ ಬಿಜೆಪಿ ಈ ಹಿಂದಿನ ಜನಸಂಘದ ಹಾದಿಯಲ್ಲೇ ಸಾಗುತ್ತಿದ್ದರೆ ಖಂಡಿತವಾಗಿಯೂ ರಾಜ್ಯದಲ್ಲಿ ಆಪರೇಶನ್ ಕಮಲಕ್ಕೆ ಜಾಗ ಇರುತ್ತಿರಲಿಲ್ಲ.

ಇದೀಗ ಉತ್ತರ ಕರ್ನಾಟಕದ ಪಕ್ಷಾಂತರದ
ಕಥೆ ಈ ರೀತಿಯಾದರೆ ಕರಾವಳಿ ಕರ್ನಾಟಕದ ಮಂಗಳೂರು ಉತ್ತರ ಕ್ಷೇತ್ರದ ಕಥೆ ಕೂಡ ಒಂದು ರೀತಿಯಲ್ಲಿ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ತರಹವೇ ಇದೆ. ಇಲ್ಲಿ ಪಕ್ಷಾಂತರಕ್ಕೆ ಟಿಕೆಟ್ ಒಂದೇ ಕಾರಣ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ 11 ಮಂದಿ ಆಕಾಂಕ್ಷಿಗಳಿದ್ದರು. ಅವರಲ್ಲಿ ಮಾಜಿ ಶಾಸಕ ಮೊಯ್ದೀನ್ ಬಾವಾ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಅವರ ನಡುವೆ ಭಾರೀ ಪೈಪೋಟಿ ನಡೆದಿತ್ತು. ಈ ಜಿದ್ದಾಜಿದ್ದಿನಲ್ಲಿ ಮೊಯ್ದೀನ್ ಬಾವಾ ಸೋಲು ಅನುಭವಿಸಿದ್ದಾರೆ. ಟಿಕೆಟ್ ಸಿಗದ ಜಿದ್ದಿನಲ್ಲಿ ಬಾವಾ ಅವರು ಮರುಕ್ಷಣವೇ ಜನತಾದಳ ಸೇರಿ ನಾಮಪತ್ರ ಸಲ್ಲಿಸಿದ್ದಾರೆ. ಬಾವಾ ಅವರ ಸಹೋದರ ಬಿ.ಎಂ. ಫಾರೂಕ್ ಅವರು ಜನತಾದಳದಿಂದ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಅಣ್ಣ- ತಮ್ಮ ಒಂದೇ ಪಕ್ಷದಡಿಗೆ ಬಂದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು