ಇತ್ತೀಚಿನ ಸುದ್ದಿ
ಜಮೀನಿಗಾಗಿ ವಿಧವೆಯ ಅರೆ ಬೆತ್ತಲೆಗೊಳಿಸಿ ಹಲ್ಲೆ: ಕ್ರಮ ಕೈಗೊಳ್ಳದ ಪೊಲೀಸರು!; ಆರೋಪಿ ಪರ ನಿಂತ್ರಾ ಖಾಕಿ ಅಧಿಕಾರಿಗಳು..?
25/02/2023, 09:58
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.ಕಾಂ
ಓರ್ವ ವಿಧವೆ ಹಾಗೂ ಮಗಳನ್ನ ಜಮೀನಿನ ವ್ಯಾಜ್ಯದ ಸಲುವಾಗಿ ಸಂಬಂಧಿಕರೇ ಅರೆಬೆತ್ತಲಾಗಿ ಥಳಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ, ಅವರ ವಿರುದ್ದ ದೂರು ನೀಡಿದ್ರೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದೆ ಅವರ ಬೆಂಬಲವಾಗಿ ನಿಂತಿದೆ ಎಂದು ಶಾಂತವ್ವ ನಾಗಪ್ಪ ಮಾಂಗ ಎಂಬ ಮಹಿಳೆ ಆರೋಪಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ ಶಾಂತವ್ವ ನಾಗಪ್ಪ ಮಾಂಗ್ ಎಂಬ ವಿಧವೆಯ ಜಮೀನು ವಶಪಡಿಸಿಕೊಳ್ಳಲು ಗಂಡನ ಅಣ್ಣತಮ್ಮಂದಿರಾದ ಲಕ್ಕಪ್ಪ ಬಾಬು ಮಾಂಗ, ಭೀಮಪ್ಪ ಲಕ್ಕಪ್ಪ ಮಾಂಗ, ಹಣಮಂತ ಲಕ್ಕಪ್ಪ ಮಾಂಗ ಎಂಬುವವರು ಸಂತ್ರಸ್ತೆ ಶಾಂತವ್ವ ಹಾಗೂ ಅವಳ ಅಪ್ರಾಪ್ತ ಮಗಳ ಎದೆಗೆ ಕೈ ಹಾಕಿ, ಜಡೆ ಹಿಡಿದು ಬಡಿಗೆಯಿಂದು ಬಡಿದು ಹಲ್ಲೆ ಮಾಡಿದ್ದರಿಂದ ಕಳೆದ ಮೂರು ದಿನದಿಂದ ಪ್ರಜ್ಞೆ ತಪ್ಪಿದ್ದಾಳೆ. ಈ ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮೂರು ದಿನಗಳಾಗಿದೆ. ಆರೋಪಿತರು ಪೋಲಿಸ್ ಠಾಣೆ ಸುತ್ತಮುತ್ತ ತಿರುಗುತ್ತಿದ್ದರೂ ಸಹ ಬಂಧನ ಮಾಡದೆ ಅವರನ್ನು ಪರಾರಿಯಾಗಲು ಬಿಟ್ಟಿದ್ದಾರೆ ಎಂದು ಸಂತ್ರಸ್ತ ಮಹಿಳೆ ಪೊಲೀಸ್ ಇಲಾಖೆ ಕಾರ್ಯವೈಖರಿ ಪ್ರಶ್ನಿಸುವಂತಹ ಗಂಭೀರ ಆರೋಪ ಮಾಡಿದ್ದಾಳೆ.
ಹಲ್ಲೆಗೊಳಗಾದ ಅಪ್ರಾಪ್ತ ಯುವತಿ ಹಾಗೂ ಸಂತ್ರಸ್ತೆಯ ಆರೋಗ್ಯ ಪರಿಸ್ಥಿತಿ ಗಂಭಿರವಾಗಿದ್ದು, ಅಥಣಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಜವಾಗಿಯೂ ಪೊಲೀಸ್ ಇಲಾಖೆ ಆರೋಪಿತರನ್ನು ರಕ್ಷಿಸುತ್ತಿದೆಯಾ ? ಹಾಗೂ ಮಹಿಳಾ ಆಯೋಗ ಏನ್ಮಾಡ್ತಿದೆ ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.