ಇತ್ತೀಚಿನ ಸುದ್ದಿ
ಆನೆ ದಾಳಿ ನಿಯಂತ್ರಿಸಲು ವಿಫಲ: ಆಕ್ರೋಶಿತ ಗ್ರಾಮಸ್ಥರಿಂದ ಫಾರೆಸ್ಟ್ ಕಚೇರಿ ಮೇಲೆ ದಾಳಿ
26/11/2022, 20:04
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka.com
ಆನೆ ಹಾವಳಿಯನ್ನು ನಿಯಂತ್ರಿಸಲು ವಿಫಲವಾಗಿರುವುದನ್ನು ಪ್ರತಿಭಟಿಸಿ ಗ್ರಾಮಸ್ಥರು ಕಳ್ಳ ಬೇಟೆ ನಿಗ್ರಹ ಶಿಬಿರವನ್ನ ಧ್ವಂಸ ಮಾಡಿದ ಘಟನೆ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.
ಆಕ್ರೋಶಗೊಂಡ ಯುವಕರ ತಂಡ ಫಾರೆಸ್ಟ್ ಕಚೇರಿಯಲ್ಲಿ
ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಪುಡಿ ಮಾಡಿದ ಆಕ್ರೋಶ ವ್ಯಕ್ತಪಡಿಸಿದರು.
ಆನೆಯನ್ನು ಓಡಿಸಲು ನಿಮಗೆ ಪಟಾಕಿ ಕೊಡುವ ಯೋಗ್ಯತೆ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಆನೆ ನಿಯಂತ್ರಿಸಕ್ಕೆ ಆಗಲ್ಲ, ತಿನ್ನೋಕೆ ಸೋನಾ ಮುಸುರಿ ಅಕ್ಕಿ ಬೇಕು ಎಂದು ಕಿಡಿ ಕಾರಿದರು. ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು. ಅರಣ್ಯ ಇಲಾಖೆ ಸಿಬ್ಬಂದಿ ವೀಡಿಯೋ ಮಾಡುತ್ತಿದ್ದಾಗ ಮುಖ ತೋರಿಸಿ…ತೋರಿಸಿ ಯುವಕರು ಹೆಸರು ಹೇಳಿದರು.
ಆನೆಗಳವ ನಿರಂತರ ದಾಳಿಯಿಂದ ಮಲೆನಾಡಿಗರು ಕಂಗಟ್ಟಿ ಹೋಗಿದ್ದಾರೆ. ನಾಲ್ಕು ದಿನದ ಹಿಂದೆ ಆನೆ ದಾಳಿಗೆ 35 ವರ್ಷದ ಮಹಿಳೆ ಸಾವನ್ನಪ್ಪಿದ್ದಳು.