ಇತ್ತೀಚಿನ ಸುದ್ದಿ
ಪಂಜಿಮೊಗರು ವಿದ್ಯಾನಗರ ಅಂಗನವಾಡಿ ಕೇಂದ್ರದ ಉದ್ಯಾನವನಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಗುದ್ದಲಿಪೂಜೆ
19/09/2022, 10:45
ಮಂಗಳೂರು(reporterkarnataka.com:
16.5 ಲಕ್ಷ ರೂಪಾಯಿ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಪಂಜಿಮೊಗರು 12 ನೇ ವಾರ್ಡಿನ ವಿದ್ಯಾನಗರದ ಅಂಗನವಾಡಿ ಕೇಂದ್ರದ ಉದ್ಯಾನವನಕ್ಕೆ ಶಾಸಕ ಡಾ.ಭರತ್ ಶೆಟ್ಟಿ
ಗುದ್ದಲಿಪೂಜೆ ನೆರವೇರಿಸಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಧಿಕಾರಿ ಆರತಿ, ಕಾವೂರು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸೀತೇಶ್ ಕೊಂಡೆ, ಮಹಾಶಕ್ತಿ ಪ್ರಮುಖ್ ವಿವೇಕಾನಂದ ಸುವರ್ಣ, ಸಹ ಪ್ರಮುಖ್ ಸಂದೀಪ್ ಪೂಜಾರಿ, ಬೂತ್ ಅಧ್ಯಕ್ಷರಾದ ಲತಾ ಸುಧಾಕರ್, ಹಿರಿಯ ಮುಖಂಡರಾದ ಗಣೇಶ್ ಶೆಟ್ಟಿ, ರಮೇಶ ಶೆಟ್ಟಿ, ಉಮೇಶ ಪೂಜಾರಿ, ಶಿಕ್ಷಕಿಯರಾದ ವಾಣಿತಾ, ಸವಿತಾ ಹಾಗೂ ಕಾರ್ಯಕರ್ತರು ಉಪಸ್ಥಿತರಿದರು.