ಇತ್ತೀಚಿನ ಸುದ್ದಿ
ಕುದ್ರೋಳಿ ದೇಗುಲ: ಬರೋಬ್ಬರಿ 900 ಕೆಜಿ ದವಸ ಧಾನ್ಯಗಳಿಂದ ಅರಳಿದ ಬೃಹತ್ ತಿರಂಗ!!
14/08/2022, 21:35
ಮಂಗಳೂರು(reporterkarnataka.com): ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಗರದ ಕುದ್ರೋಳಿ ಗೋಕರ್ಣನಾಥ ದೇವಾಲಯ ಮುಂಭಾಗದ ಅಂಗಣದಲ್ಲಿ 900 ಕೆಜಿ ಧವಸ ಧಾನ್ಯಗಳನ್ನು ಬಳಸಿ ಬೃಹತ್ ತಿರಂಗ ರಚಿಸಲಾಯಿತು.
ಮೈಸೂರು ಬೇಳೆ, ಸಾಗು ಹಾಗೂ ಹೆಸರು ತಲಾ 300 ಕೆಜಿ ಬಳಸಲಾಯಿತು. ದಿನನಿತ್ಯದ ಬಳಕೆಯ ಧಾನ್ಯಗಳನ್ನು ಬಳಸಿರುವುದು ಇಲ್ಲಿನ ವಿಶೇಷ.