9:26 AM Saturday18 - May 2024
ಬ್ರೇಕಿಂಗ್ ನ್ಯೂಸ್
ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,…

ಇತ್ತೀಚಿನ ಸುದ್ದಿ

ಮುಧೋಳ: ಬೇಡಜಂಗಮ ಬೃಹತ್ ಸಮಾವೇಶ ಸಂವಿಧಾನಬದ್ಧ ಹಕ್ಕಿಗೆ ಆಗ್ರಹ

19/02/2022, 22:26

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ 

info.reporter@gmail.com

ಮುಧೋಳದಲ್ಲಿ ಇಂದು ನಡೆದ ಬೇಡಜಂಗಮ ಬೃಹತ್ ಸಮಾವೇಶ ಇಂದು ಮುಧೋಳದಲ್ಲಿ ನಡೆಯಿತು. ಸುಮಾರು 20 ಸಾವಿರ ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಚಳಿಗೇರಿ ಶ್ರೀಗಳು ಮಾತನಾಡಿ, ಬೇಡ ಜಂಗಮರಿಗೆ ಸಂವಿಧಾನಬದ್ಧವಾದ ಹಕ್ಕನ್ನು ನೀಡಬೇಕೆಂದು ಒತ್ತಾಯಿಸಿದರು. 

ಒಕ್ಕೂಟದ ಅಧ್ಯಕ್ಷ ಬಿಡಿ ಹಿರೇಮಠ ಅವರು ಮಾತನಾಡಿ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 19ನೇ ಕಾಲದಲ್ಲಿ ಬರುವ ಬೇಡಜಂಗಮ ಜಾತಿಯು ಈಗಾಗಲೇ ಸಂವಿಧಾನಾತ್ಮಕವಾಗಿದ್ದು, ಜಾತಿ ಸರ್ಟಿಫಿಕೇಟ್ ಕೇಳಿದರೆ ವೀರಶೈವ-ಲಿಂಗಾಯತ ಎಂದು ನೀಡುತ್ತಿರುವುದು ಅವೈಜ್ಞಾನಿಕ. ವೀರಶೈವ ಲಿಂಗಾಯತ ವು ಒಂದು ಪಂಥವಾಗಿದ್ದು ಅದು ಜಾತಿ ಆಗಿರುವುದಿಲ್ಲ ಎಂದು ಹೇಳಿದ ಅವರು ಮುಂದಿನ ಹೋರಾಟ ಬೆಂಗಳೂರಿನಲ್ಲಿ ಉಗ್ರವಾಗಿ ಮಾಡಲಾಗುವುದು ಎಂದು ಹೇಳಿದರು.
ರಾಜ್ಯಾಧ್ಯಕ್ಷ ದ್ವಾರಕೀಶ್ ಮಾತನಾಡಿ, ಸಮಾಜದಲ್ಲಿ ಜಂಗಮ ಸಮಾಜಕ್ಕೆ ದೊಡ್ಡ ಗೌರವ ಇದೆ.
ದಲಿತ ಸಂಘಟನೆಯ ರಾಜಾಧ್ಯಕ್ಷ ವೆಂಕಟೇಶ್ ಅವರ  ಬೆಂಬಲವಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಆದೇಶ ಮೇರಿಗೆ ಇನ್ನು ಎರಡು ತಿಂಗಳಲ್ಲಿ ಎಲ್ಲ ಜಂಗಮರಿಗೆ ಬೇಡ ಜಂಗಮ ಪ್ರಮಾಣಪತ್ರ ಸಿಗಲಿದೆ ಎಂದು ಹೇಳಿದರು.

ಕೆಲವು ಶಾಸಕರು ಜಂಗಮರಿಗೆ ಸಿಗಬೇಕು ಪ್ರಮಾಣ ಪತ್ರಕೆ ಅಡ್ಡಿ ಮಾಡಿದರು ಎಂದರು.

ಬೃಹತ್ ಪ್ರತಿಭಟನಾ ಮೆರವಣಿಗೆ ಮುಧೋಳ ಪಟ್ಟದಿಂದ ರನ್ನ ಕ್ರೀಡಾಂಗಣಕ್ಕೆ ಬಂದು ತಲುಪಿತು. 

ರಾಜ್ಯ ದಲಿತ ಸಂಘರ್ಷ ಸಮಿತಿಯ ವೆಂಕಟೇಶ್ ಅವರು ಮಾತನಾಡಿ, ಬೇಡ ಜಂಗಮರ ಹೋರಾಟ ನ್ಯಾಯಯುತವಾಗಿದ್ದು ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಹೇಳಿದರು.

ಸಮಾವೇಶದಲ್ಲಿ ರಾಯಚೂರು ಜಿಲ್ಲಾ ಬೇಡಜಂಗಮ ಸಮಾಜದ ಮುಖಂಡರಾದ ಆದಿ ಬಸವರಾಜ್ ಸಿಂಧನೂರು, ಸಂಪಾದಕರಾದ
ವಿರುಪಾಕ್ಷಯ್ಯ ಸಾಲಿಮಠ, ರಾಯಚೂರು ಬಸವರಾಜ್ ಹಿರೇಮಠ, ಮುಸ್ಲಿಂ ಕಾರಲಕುಂಟೆ ಮಲ್ಲಿಕಾರ್ಜುನ್ ಲಿಂಗಸ್ಗೂರು ರಮೇಶ್ ಸಿಂಗ ಪತ್ರಕರ್ತ  ಬಸವರಾಜ್ ಸಿದ್ದಲಿಂಗಯ್ಯ ಸಿದ್ದಲಿಂಗಯ್ಯ ಸ್ವಾಮಿ ಮಠ ಗಣ ಮಠದಯ್ಯ ಸ್ವಾಮಿ ಶಿವಕುಮಾರ್ ಮುಂತಾದವರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು