9:45 PM Saturday18 - May 2024
ಬ್ರೇಕಿಂಗ್ ನ್ಯೂಸ್
ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ…

ಇತ್ತೀಚಿನ ಸುದ್ದಿ

ವಿದ್ಯಾರ್ಥಿನಿಯರಲ್ಲಿ ಸಮಯ ಪರಿಪಾಲನೆ, ನಾಯಕತ್ವದ ಗುಣಗಳು ಜನ್ಮದತ್ತ: ಡಾ. ನಾಗರತ್ನ ಕೆ. ಎ .

01/02/2022, 00:01

ಮಂಗಳೂರು(reporterkarnataka.com): ವಿದ್ಯಾರ್ಥಿನಿಯರಲ್ಲಿ ಸಮಯ ಪರಿಪಾಲನೆ ಹಾಗೂ ನಾಯಕತ್ವದ ಗುಣಗಳು ಜನ್ಮದತ್ತವಾಗಿ ಬಂದಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ. ಹೇಳಿದರು.

ಅವರು ನಗರದ ಬೆಸೆಂಟ್  ಮಹಿಳಾ  ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾಮಿ ವಿವೇಕಾನಂದರು ಯುವ ಶಕ್ತಿಗಳಿಗೆ ಪ್ರೇರಣೆ.  ಯುವಕರಲ್ಲಿ ಹಿಂದೆಯೂ ಸಮಸ್ಯೆಗಳಿದ್ದವು ಈಗಲೂ ಸಮಸ್ಯೆಗಳಿವೆ . ಆದ್ದರಿಂದ ಸಮಸ್ಯೆಗಳಿಂದ ದೂರ ಸರಿಯದೆ ತಮ್ಮೊಳಗಿನ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸ್ವಾಮಿವಿವೇಕಾನಂದರ ತತ್ವ-ಆದರ್ಶ ಗಳನ್ನು ಪಾಲಿಸಿ, ಅದರಿಂದ ರಾಷ್ಟ್ರೀಯತೆ,ಮಾನವೀಯ ಸಂಬಂಧಗಳು ಉತ್ತಮವಾಗಿ ಬೆಳೆಯಲು ಸಹಕಾರಿ ಎಂದುರಾ. ಸೇ. ಯೋ. ಸ್ವಯಂ ಸೇವಕಿಯರಿಗೆ ಕಿವಿ ಮಾತು ಹೇಳಿದರು.


ವಿದ್ಯಾರ್ಥಿನಿಯರಲ್ಲಿ ಸಮಯಪಾಲನೆ, ನಾಯಕತ್ವದ ಗುಣಗಳು ಜನ್ಮದತ್ತವಾಗಿ ಇರುತ್ತದೆ, ಎಂದರು.

ಬೆಸೆಂಟ್ ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಸಿಂಪತಿ ಗಿಟ್ಟಿಸಿಕೊಳ್ಳಲು ಸೇವೆ ಮಾಡಬೇಡಿ. ಅದರಿಂದ ಏನೂ ಪ್ರಯೋಜನವಿಲ್ಲ. ನಿಷ್ಕಲ್ಮಶ ಸೇವೆ ಮಾಡಿ ಅದರಲ್ಲಿರುವ ಕಷ್ಟ-ಸುಖಗಳನ್ನು ಅನುಭವಿಸಿದಾಗ ಮಾತ್ರ ಜೀವನ ಏನು ಎಂಬುದು ಅರಿವಾಗುತ್ತದೆ.





ರಾ.ಸೆ.ಯೋ ಯೋಜನಾಧಿಕಾರಿ  ರವಿಪ್ರಭಾ,  ರಾ. ಸೇ. ಯೋ ಕಾರ್ಯದರ್ಶಿಗಳಾದ ಸ್ಮಿತಾ, ಪೂಜಾ,ಉಪನ್ಯಾಸಕರಾದ ಡಾ. ಸತೀಶ್.ಕೆ ಅರುಣ್, ರಕ್ಷಿತ್, ಸ್ವಾತಿ, ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು