3:02 PM Sunday19 - May 2024
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ…

ಇತ್ತೀಚಿನ ಸುದ್ದಿ

ಚಳ್ಳಕೆರೆ: ಶೂನ್ಯದ ಮಾರಮ್ಮ ದೇವರಿಗೆ ಅದ್ದೂರಿಯ ಎತ್ತಿನ ಗೂಡು ಕಾರ್ಯಕ್ರಮ

27/01/2022, 13:13

ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com

ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ತೋಡ್ಲರಹಟ್ಟಿ ಬಳಿ ದೇವರ ಎತ್ತುಗಳನ್ನು ಮೆರೆಸುವ ಮೂಲಕ ಶ್ರೀ ಶೂನ್ಯದ ಮಾರಮ್ಮ ದೇವರ ಎತ್ತಿನ ಗೂಡು ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಬುಡಕಟ್ಟು ಮ್ಯಾಸನಾಯಕರ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ಶೂನ್ಯ ಮಾರಮ್ಮ ದೇವರ ಎತ್ತಿನಗೂಡು ಕಾರ್ಯಕ್ರವು ಮಂಗಳವಾರ ತೋಡ್ಲರಹಟ್ಟಿ ಬಳಿ ದೇವರ ಪದಿಗಳನ್ನು ತಂಗಟೆ, ಪುವಲಿ, ಬಂದರಕಳ್ಳೆಗಳಿಂದ ದೇವರ ಪದಿಗಳ ನಿರ್ಮಾಣ ಮಾಡುವ ಮೂಲಕ ಆರಂಭವಾಗುತ್ತದೆ. ಅಂದು ಸಂಜೆ ನೂರಾರು ಭಕ್ತಾಧಿಗಳು ದೇವರ ಪದಿಗಳ ಬಳಿ ದೇವರ ಎತ್ತುಗಳ ಜೊತೆಯಲ್ಲಿ ವಾಸ್ತವ್ಯ ಮಾಡುತ್ತಾರೆ. ಭಕ್ತಾಧಿಗಳು ತಂದಂತ ರೊಟ್ಟಿಯನ್ನು ಎತ್ತುಗಳಿಗೆ ನೀಡಿ ಭಕ್ತಿಯನ್ನು ಸಮರ್ಪಣೆ ಮಾಡುತ್ತಾರೆ.

ಇನ್ನು ಮಂಗಳಾವರ ರಾತ್ರಿ ಶೂನ್ಯದ ಮಾರಮ್ಮ ದೇವಿಯನ್ನು ಕಿಲಾರಿಗಳು ಕಟ್ಟಿದ ಹುಲ್ಲಿನ ಗುಡಿಯಲ್ಲಿ ಪ್ರತಿಷ್ಠಾಪಿಸಲಾಯಿತು.

 ಇನ್ನು ಬುಧವಾರ ಬೆಳಿಗ್ಗೆಯಿಂದ ಶೂನ್ಯದ ಮಾರಮ್ಮ ದೇವಿ ಗುಡಿಯಲ್ಲಿ ಪ್ರತಿಷ್ಠಾಪಿಸಿದ್ದ ಮಾರಮ್ಮ ಮೂರ್ತಿಗೆ ಭಕ್ತಾಧಿಗಳು ಹೂ ಹಣ್ಣು ಕಾಯಿ ಇಟ್ಟು ಪೂಜೆ ಸಲ್ಲಿಸಲಾಯಿತು.

ನಂತರ ಸೂರ್ಯನು ಸ್ವಲ್ಪ ಇಳಿಮುಖವಾದಗ ಮೇಯಲು ಹೋದ ದೇವರ ಎತ್ತುಗಳನ್ನು ಹೊಡೆದಂದು ದೇವರ ಪದಿಗಳ ಮುಂದೆ ಅಯಾ ಬೆಡಿಗಿನವರು ಎತ್ತುಗಳನ್ನು ಪ್ರತ್ಯೇಕ ಮಾಡಿಕೊಂಡು ಮೂರು ಬಾರಿ ಮರೆಸಿ, ಆಯಾ ದೇವರ ಪದಿಗಗಳ ಹಮುಂದೆ ಭಕ್ತಾಧಿಗಳ ತಮ್ಮ ಮನೆಯ ದೇವರ ಎತ್ತುಗಳಿಗೆ ಮಂಡಕ್ಕಿ ತೂರಿ ಹಾರಕುತ್ತಾರೆ.

ಎತ್ತುಗಳಿಗೆ, ತದನಂತರ ಕಿಲಾರಿಗಳು ತಮ್ಮ ಪದಿಗಳ ಮುಂದೆ ಕರಿ ಕಂಬಳಿ ಹಾಕಿದಾಗ ಭಕ್ತಾದಿಗಳು ಹೂವು, ಹಣ್ಣು, ಕಾಯಿ ಕಾಸು ಇಟ್ಟು ಪೂಜೆ ಸಲ್ಲಿಸುತ್ತಾರೆ.

ದೇವರ ಎತ್ತುಗಳ ಗೂಡಿನ ಸನ್ನಿಧಿಯಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಜೃಂಭಣೆಯಿಂದ ಜಾತ್ರೆ ಆಚರಿಸುತ್ತಾರೆ. ಇತ್ತೀಚೆಗೆ ನಮ್ಮ ಮ್ಯಾಸ ಬೇಡರ ಸಂಪ್ರದಾಯ ನಶಿಸಿ ಹೋಗ್ತಿದೆ. ಅಂತದ್ರಲ್ಲಿ ನಮ್ಮ ಸಮುದಾಯದವರು ಕೆಲವು ಕಡೆ ಈ ರೀತಿಯ ಹಬ್ಬ ಆಚರಣೆಗಳನ್ನು ಮಾಡೋದ್ರಿಂದ ನಮ್ಮ ಮ್ಯಾಸ ನಾಯಕರ ಸಂಪ್ರದಾಯ ಉಳಿಯಲಿದೆ.

ವಿಶೇಷ ಪೂಜೆನಂತರ ದಾಸಯ್ಯರಿಂದ ಮಣೇವು ಕಾರ್ಯಕ್ರಮ ಜರುಗುತ್ತದೆ, ನಂತರ ಶೂನ್ಯದ ಮಾರಮ್ಮ ದೇವಿಯ ಮೂರ್ತಿಯನ್ನು ಸೂರ್ಯ ಉದಯಿಸುವ ಕಡೆ ಸಾಗಿಹಾಕಿದ ನಂತರ ಅನ್ನದಾಸೋಹ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

.

ಇತ್ತೀಚಿನ ಸುದ್ದಿ

ಜಾಹೀರಾತು