7:29 AM Saturday27 - April 2024
ಬ್ರೇಕಿಂಗ್ ನ್ಯೂಸ್
ಚಳ್ಳಕೆರೆ ತಾಲೂಕಿನಲ್ಲಿ ಶಾಂತಿಯುತ ಮತದಾನ: ಚುನಾವಣೆ ಕರ್ತವ್ಯನಿರತ ಮಹಿಳಾ ಸಿಬ್ಬಂದಿ ಸಾವು ನಂಜನಗೂಡಿನಲ್ಲಿ ಶಾಂತಿಯುತ ಚುನಾವಣೆ: ಸಂಜೆ 4ಕ್ಕೆ ಸುಮಾರು ಶೇ.65 ಮತದಾನ ಸ್ಪೀಕರ್ ಖಾದರ್ ಆಪ್ತ ಸಹಾಯಕ ಮಹಮ್ಮದ್ ಲಿಬ್ಝೆತ್ ಮತದಾನ ; ಪದ್ಮರಾಜ್ ಗೆಲುವಿನ… ಜನಾರ್ದನ ಪೂಜಾರಿ ಮಾದರಿಯಲ್ಲಿ ಪದ್ಮರಾಜ್ ಪೂಜಾರಿ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ: ಲಿಬ್‌ಝಿತ್ ಅಭಿಮತ ನೈಟ್ ಸರ್ವಿಸ್ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ನಿವಾಸಿಯ ಬಂಧನ ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಕರಾವಳಿಯಲ್ಲಿ ಸಕಲ ಸಿದ್ದತೆ;… ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಮತಗಟ್ಟೆಯ ಅಧಿಕಾರಿಗಳಿಗೆ ಪಾಠ; ಜಾಗೃತಿಯಾಗಿ ಕರ್ತವ್ಯ… ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್…

ಇತ್ತೀಚಿನ ಸುದ್ದಿ

ಪುಟಾಣಿಗಳಿಂದಲೇ ಮಕರ ಸಂಕ್ರಮಣ ಆಚರಣೆ: ಶುಭ ಕೋರಿ ಸಾರ್ವಜನಿಕರ ಮನಗೆದ್ದ ಜಾಣೆಯರು

16/01/2022, 17:10

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಶ್ರೀಪೇಟೆಬಸವೇಶ್ವರ ನಗರದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು, ಮಕ್ಕಳು ತುಂಬಾ ವಿಶಿಷ್ಟವಾಗಿ ಆಚರಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರ‍ಾಗಿದ್ದಾರೆ.


ಬೆಳ್ಳಂಬೆಳಿಗ್ಗೆ ದೈನಂದಿನ ಕಾರ್ಯಗಳನ್ನು ಪೂರೈಸಿ ಶುಭ್ರವಾದ ಧಿರಿಸುಗಳನ್ನು ಧರಿಸಿದ ಮಕ್ಕಳು,ತಮ್ಮ ತಮ್ಮ ಮನೆಗಳಿಂದ ಸಕ್ಕರೆ ಉರಿದ ಕಡಲೆ ಹಾಗೂ ಎಳ್ಳು ಮಿಶ್ರಿತ ಅಥವಾ ಬೆಲ್ಲ ಎಳ್ಳು ಹಾಗೂ ಉರಿದಕಡಲೆ ಮಿಶ್ರಿತ ಪಾದಾರ್ಥವನ್ನು.ಬಟ್ಟಲಿನಲ್ಲಿ ತುಂಬಿಕೊಂಡು ಮನೆ ಮನೆಗೆ ತೆರಳಿ ಮೆನೆಯ ಮಂದಿಗೆಲ್ಲ ಸಿಹಿ ಹಂಚಿದ್ದಾರೆ. ಈ ಮೂಲಕ ಮಕ್ಕಳು ಸಾಮೂಹಿಕವಾಗಿ ಸಿಹಿ ಹಂಚಿ ಸರ್ವರಿಗೂ ಶುಭಕೋರಿದ್ದಾರೆ. ಶ್ರಿಪೇಟೆಬಸವೇಶ್ವರ ನಗರದ ಮಕ್ಕಳು ಈ ಮೂಲಕ ಪಟ್ಟಣದೆಲ್ಲೆಡೆಗಳಲ್ಲಿ, ಮಕರ ಸಂಕ್ರಾಂತಿ  ಸಿಹಿಯನ್ನು ಹಂಚುವ ಮೂಲಕ ಸರ್ವರಿಗೂ ಸಂಕ್ರಾಂತಿ ಶುಭಾಶಯಗಳನ್ನು ತಿಳಿಸಿದ್ದಾರೆ. ಗಲ್ಲಿಯ ಮಕ್ಕಳು ಪರಸ್ಪರ ಸಿಹಿ ವಿನಿಮಯ ಮಾಡಿಕೊಳ್ಳೋದರ ಮೂಲಕ ಪರಸ್ಪರ ಶುಭಕೋರಿ ಸೌಹಾರ್ಧತೆ ಮೆರೆದರು. ತಾವು ಮನೆಯಿಂದ ತಯಾರಿಸಿಕೊಂಡು ತಂದಿದ್ದ ಸಿಹಿಯನ್ನು ಎಲ್ಲರೂ ಒಟ್ಟಾಗಿ ಗಲ್ಲಿಯ ಪ್ರತಿಯೊಂದು ಮನೆ ಮನೆಗೆ ತೆರಳಿ ಸಿಹಿ ಹಂಚಿ ಶುಭ ಕೋರಿದ್ದಾರೆ. ದಾರಿಯಲ್ಲಿ ಎದುರಾದ ಪ್ರತಿಯೊಬ್ಬ ರಿಗೂ ಸಿಹಿ  ಸಂಕ್ರಾಂತಿ ಶುಭ ಕೋರಿ ವೈಶಿಷ್ಟ್ಯತೆ ಮೆರೆದರು.ಈ ಮೂಲಕ ಮಕ್ಕಳು ಪಟ್ಟಣ ಮಾತ್ರವಲ್ಲ,ತಾಲೂಕಿನ ಮಾಡಿನ ಸಮಸ್ತ ಯುವಪೀಳಿಗೆಗೆ ಮಾದರಿಯಾಗಿದದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು