8:48 PM Friday26 - April 2024
ಬ್ರೇಕಿಂಗ್ ನ್ಯೂಸ್
ನಂಜನಗೂಡಿನಲ್ಲಿ ಶಾಂತಿಯುತ ಚುನಾವಣೆ: ಸಂಜೆ 4ಕ್ಕೆ ಸುಮಾರು ಶೇ.65 ಮತದಾನ ಸ್ಪೀಕರ್ ಖಾದರ್ ಆಪ್ತ ಸಹಾಯಕ ಮಹಮ್ಮದ್ ಲಿಬ್ಝೆತ್ ಮತದಾನ ; ಪದ್ಮರಾಜ್ ಗೆಲುವಿನ… ಜನಾರ್ದನ ಪೂಜಾರಿ ಮಾದರಿಯಲ್ಲಿ ಪದ್ಮರಾಜ್ ಪೂಜಾರಿ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ: ಲಿಬ್‌ಝಿತ್ ಅಭಿಮತ ನೈಟ್ ಸರ್ವಿಸ್ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ನಿವಾಸಿಯ ಬಂಧನ ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಕರಾವಳಿಯಲ್ಲಿ ಸಕಲ ಸಿದ್ದತೆ;… ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಮತಗಟ್ಟೆಯ ಅಧಿಕಾರಿಗಳಿಗೆ ಪಾಠ; ಜಾಗೃತಿಯಾಗಿ ಕರ್ತವ್ಯ… ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್… ಬಹಿರಂಗ ಪ್ರಚಾರದ ಕೊನೆಯ ದಿನ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರಿಂದ ಪಂಪ್’ವೆಲ್’…

ಇತ್ತೀಚಿನ ಸುದ್ದಿ

ಡಿಸೆಂಬರ್ 3: ವಿಶ್ವ ವಿಶೇಷಚೇತನರ ದಿನ: ಅನುಕಂಪದ ಬದಲು ಸ್ವಾಭಿಮಾನದ ಬದುಕಿಗೆ ಪ್ರೋತ್ಸಾಹಿಸೋಣ

03/12/2021, 23:50

ಸಮಾಜದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯೂ ಅನನ್ಯ.. ಹಲವಾರು ರೀತಿಯ, ವಿವಿಧ ಮನೋಸ್ಥಿತಿಯ ವ್ಯಕ್ತಿಗಳನ್ನು ಸಮಾಜದಲ್ಲಿ ನಾವು ಕಾಣಬಹುದು. ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮ ಜೊತೆ ಇರುವ ಹಲವಾರು ವ್ಯಕ್ತಿಗಳಲ್ಲಿ ವಿಶೇಷಚೇತನರೂ ಸೇರಿದ್ದಾರೆ. ವಿವಿಧ ರೀತಿಯ ದೈಹಿಕ, ಮಾನಸಿಕ, ಬೌದ್ಧಿಕ ಸಾಮರ್ಥ್ಯಗಳಲ್ಲಿ ಸಾಮಾನ್ಯ ವ್ಯಕ್ತಿಗಿಂತ ವಿಭಿನ್ನವಾಗಿರುವವರನ್ನು ವಿಶೇಷಚೇತನ ವ್ಯಕ್ತಿಗಳೆಂದು  ಕರೆಯುತ್ತಾರೆ.. ಅಂಗವಿಕಲತೆಯಲ್ಲಿ ದೃಷ್ಟಿ ದೋಷ, ಶ್ರವಣ 

ದೋಷ, ದೈಹಿಕ, ಮಾತಿನ ವಿಕಲತೆ ಹೀಗೆ ಸುಮಾರು ಇಪ್ಪತ್ತು ವಿಧದ ವಿಕಲತೆಯನ್ನು ಕಾಣಬಹುದು..

ಇಂತಹ ವ್ಯಕ್ತಿಗಳಲ್ಲೂ ವಿಶೇಷ ಪ್ರತಿಭೆಗಳು ಸಾಮರ್ಥ್ಯಗಳು ಹುದುಗಿಕೊಂಡಿರುತ್ತದೆ. 

ಸಾಮಾನ್ಯ ವ್ಯಕ್ತಿಗಳಂತೆ ಭಾವನೆಗಳು ಭಾವನೆಗಳು ,ಆಸಕ್ತಿ ,ಆಸೆ, ಆಕಾಂಕ್ಷೆಗಳು ಇರುತ್ತವೆ ಇಂಥವರಿಗೆ ಅನುಕಂಪವನ್ನು ತೋರಿಸುವ ಬದಲು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಹಾಗೂ ಸ್ವಸಾಮರ್ಥ್ಯದ ಮೇಲೆ ಬರಲು ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡಬೇಕು.

ಇಂತಹ ಮಕ್ಕಳಿಗೆ ಬಾಲ್ಯದಲ್ಲಿ ಮನೆಯಲ್ಲಿ ತಂದೆ-ತಾಯಿ , ಶಾಲೆಗಳಲ್ಲಿ ಶಿಕ್ಷಕರು  ಸರಿಯಾದ ರೀತಿಯಲ್ಲಿ ಪ್ರೋತ್ಸಾಹ, ಸಹಾಯ-ಸಹಕಾರ ನೀಡಿದರೆ,ಈ ಮಕ್ಕಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ,ರಾಜಕೀಯವಾಗಿ, ಉದ್ಯೋಗ ,ಕ್ರೀಡೆ ,ಸಂಗೀತ ,ತಾಂತ್ರಿಕ ,ಮನೋರಂಜನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವಲ್ಲಿ ಎರಡು ಮಾತೇ ಇಲ್ಲ.

ಈ ನಿಟ್ಟಿನಲ್ಲಿ 1992 ರಲ್ಲಿ ವಿಶ್ವಸಂಸ್ಥೆಯು ಅಂಗವಿಕಲರ ಏಳಿಗೆಗಾಗಿ ಹಾಗೂ ಸ್ವಾಭಿಮಾನದ ಬದುಕಿಗಾಗಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿಶ್ವ 

ವಿಶೇಷ ಚೇತನರ ದಿನಾಚರಣೆಯನ್ನು ಪ್ರತಿವರ್ಷ ಡಿಸೆಂಬರ್ 3ರಂದು ಆಚರಿಸಲು ಪ್ರಾರಂಭಿಸಿತು. ಈ ದಿನದಂದು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಮೂಲಕ ಅಂಗವಿಕಲರು ಕೂಡ ಈ ಸಮಾಜದ ಎಲ್ಲರೊಂದಿಗೆ ಬೆರೆತು ಸ್ವಾಭಿಮಾನಿಗಳಾಗಿ ಬದುಕಬಹುದು ಎಂಬುದನ್ನು ಮನವರಿಕೆ ಮಾಡಲಾಗುತ್ತದೆ.

ಅಂಗವಿಕಲತೆ ಶಾಪವಲ್ಲ, ಅಂಗವಿಕಲರು ಕೂಡ ಎಲ್ಲರಂತೆ ಸಾಧನೆಯನ್ನು ಮಾಡಬಲ್ಲರು, ಅಂಗವಿಕಲರು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಅಸಾಮಾನ್ಯ  ವ್ಯಕ್ತಿಗಳಾಗಿ ಬೆಳೆಯಬೇಕೆಂಬುದೇ ನಮ್ಮ ಆಶಯ…

✍️

ಇತ್ತೀಚಿನ ಸುದ್ದಿ

ಜಾಹೀರಾತು