9:24 AM Friday3 - May 2024
ಬ್ರೇಕಿಂಗ್ ನ್ಯೂಸ್
ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಇತ್ತೀಚಿನ ಸುದ್ದಿ

ಮಸ್ಕಿ: ಸತ್ಯಧ್ವನಿ ಪತ್ರಿಕೆ 4ನೇ ವರ್ಷದ ವಿಶೇಷಾಂಕ ಅನಾವರಣ; ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಶುಭ ಹಾರೈಕೆ

28/11/2021, 09:35

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗಿ ರಾಯಚೂರು

info.reporterkarnataka@gmail.com 

ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕಾ ರಂಗಕ್ಕೆ ತನ್ನದೆಯಾದ ಇತಿಹಾಸವಿದೆ. ಸಮಾಜದಲ್ಲಿ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಪತ್ರಿಕೆಗಳು  ಮಾಡುತ್ತಿವೆ. ಸಮಾಜದಲ್ಲಿ ಪತ್ರಿಕಾರಂಗಕ್ಕೆ ದೊಡ್ಡ ಗೌರವ ಇದೆ ಮತ್ತು ಪತ್ರಿಕೆಯು ನೊಂದವರ ಧ್ವನಿಯಾಗಬೇಕು ಎಂದು ಮಸ್ಕಿಯ ಶ್ರೀ ಷಟಸ್ಥಲ ಬ್ರಹ್ಮ ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.


ಅವರು ಅಂತರಗಂಗೆ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ್ ಸಾರಥ್ಯದಲ್ಲಿ ಮೂಡಿಬರುವ ಸತ್ಯಧ್ವನಿ ಪತ್ರಿಕೆ 4ನೇ ವರ್ಷದ ವಿಶೇಷಾಂಕ ಅನಾವರಣಗೊಳಿಸಿ ಮಾತನಾಡಿದರು.

ಸಮಾಜ ಮೆಚ್ಚುವಂತಹ ಸತ್ಯ ಅಂಶಗಳ ಸುದ್ದಿಗಳು ಪತ್ರಿಕೆಯಿಂದ ಹೊರ ಬಂದಾಗ ಪತ್ರಿಕೆಗೆ ಗೌರವ ಸಿಗುತ್ತದೆ. ಅಂತಹ ನಿಟ್ಟಿನಲ್ಲಿ ಅಂತರಗಂಗೆ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ್ ಸಾರಥ್ಯದಲ್ಲಿ ಮೂಡಿಬರುವ ಸತ್ಯ ಧ್ವನಿ ಪತ್ರಿಕೆ ಕೆಲಸ ಮಾಡುತ್ತಿದೆ. ಸಾಲಿಮಠ ಅವರಿಂದ ಒಳ್ಳೆಯ ಸುದ್ದಿಗಳು ಸಮಾಜದಲ್ಲಿ ಬಿತ್ತರವಾಗಲಿ. ಸಮಾಜದಲ್ಲಿ ಒಳ್ಳೆಯ ಹೆಸರು ಪಡೆದುಕೊಳ್ಳಲಿ ಎಂದು ಹಾರೈಸಿದರು.

ಸಮಾಜದ ಅಧ್ಯಕ್ಷ ಸಿದ್ದಲಿಂಗಯ್ಯ ಸ್ವಾಮಿ ಸತ್ಯ ಮಠ ಮಾತನಾಡಿ, ನಮ್ಮ ಸಮಾಜದ ಪತ್ರಿಕೆಯ ಸಂಪಾದಕರಿಗೆ ಶುಭವಾಗಲಿ. ಸಮಾಜ ಮೆಚ್ಚುವಂತ ವರದಿಗಳು ಸತ್ಯ ಧ್ವನಿ ದಿನಪತ್ರಿಕೆಯಿಂದ ಹೊರಬರಲಿ ಎಂದರು.

ಸಮಾಜ ಹಾಗೂ ಪತ್ರಿಕೆಯ ಪರವಾಗಿ ಗಣ ಮಠದಯ್ಯ ಸ್ವಾಮಿ ಸಾಲಿಮಠ ಮಾತನಾಡಿ,ಪತ್ರಿಕಾರಂಗವೂ ತನ್ನದೆಯಾದ ಇತಿಹಾಸವನ್ನು ಒಳಗೊಂಡಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೆಗಳಲ್ಲಿ ನಿಖರ ಮತ್ತು ನೈಜ ಸುದ್ದಿಗಳು ಮೂಡಿದಾಗ ಸಮಾಜದಲ್ಲಿ ಪತ್ರಿಕೆಗಳಿಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಂಗಮ ಸಮಾಜ ಯುವ ಮುಖಂಡರು, ಸದಸ್ಯರು, ವೀರಶೈವ ಧರ್ಮದ ಮಸ್ಕಿಯ ಮುಖಂಡರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು