12:09 AM Friday26 - April 2024
ಬ್ರೇಕಿಂಗ್ ನ್ಯೂಸ್
ಚಳ್ಳಕೆರೆ ತಾಲೂಕಿನಲ್ಲಿ ಶಾಂತಿಯುತ ಮತದಾನ: ಚುನಾವಣೆ ಕರ್ತವ್ಯನಿರತ ಮಹಿಳಾ ಸಿಬ್ಬಂದಿ ಸಾವು ನಂಜನಗೂಡಿನಲ್ಲಿ ಶಾಂತಿಯುತ ಚುನಾವಣೆ: ಸಂಜೆ 4ಕ್ಕೆ ಸುಮಾರು ಶೇ.65 ಮತದಾನ ಸ್ಪೀಕರ್ ಖಾದರ್ ಆಪ್ತ ಸಹಾಯಕ ಮಹಮ್ಮದ್ ಲಿಬ್ಝೆತ್ ಮತದಾನ ; ಪದ್ಮರಾಜ್ ಗೆಲುವಿನ… ಜನಾರ್ದನ ಪೂಜಾರಿ ಮಾದರಿಯಲ್ಲಿ ಪದ್ಮರಾಜ್ ಪೂಜಾರಿ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ: ಲಿಬ್‌ಝಿತ್ ಅಭಿಮತ ನೈಟ್ ಸರ್ವಿಸ್ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ನಿವಾಸಿಯ ಬಂಧನ ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಕರಾವಳಿಯಲ್ಲಿ ಸಕಲ ಸಿದ್ದತೆ;… ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಮತಗಟ್ಟೆಯ ಅಧಿಕಾರಿಗಳಿಗೆ ಪಾಠ; ಜಾಗೃತಿಯಾಗಿ ಕರ್ತವ್ಯ… ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್…

ಇತ್ತೀಚಿನ ಸುದ್ದಿ

ಮಸ್ಕಿ ಭ್ರಮರಾಂಬ ದೇವಿ ಉತ್ಸವ: ಮಹಿಳೆಯರಿಂದ ಮಹಾದೇವಿಗೆ ಮಹಾ ರಥೋತ್ಸವ

20/10/2021, 22:50

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ರಾಯಚೂರು ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮಸ್ಕಿಯ. ಶ್ರೀ ಭ್ರಮರಾಂಬ ದೇವಿಯ ಸನ್ನಿದಾನದಲ್ಲಿ ಮೈಸೂರು ದಸರಾ ಉತ್ಸವ ಮಾದರಿಯಲ್ಲಿ ಆಚರಿಸಲಾಯಿತು.


ಶ್ರೀ ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಮಂಗಳವಾರ ಬೆಳಗ್ಗೆ ಭ್ರಮರಾಂಬ ದೇವಿಗೆ ಪ್ರತಿ ವರ್ಷದ ಪದ್ದತಿಯಂತೆ ಈ ವರ್ಷವೂ ಕೂಡ ಕುಂಕುಮಾರ್ಚನೆ, ಕುಂಭಾಭಿಷೇಕ, ರುದ್ರಾಭಿಷೇಕ, ವಿಶೇಷ ಹೂವಿನ ಪೂಜೆ ಅಲಂಕಾರ ನೇರವೇರಿಲಾಯಿತು. ನಂತರ ಗಣಾರಾಧನೆ ಮಹಾಪ್ರಸಾದವಾದ ಬೂಂದಿ, ಅನ್ನ ಪ್ರಸಾದ ಕಾರ್ಯಕ್ರಮ ಭಕ್ತಾದಿಗಳು ಸವಿದರು. ಮಹಾದೇವಿಯ ಪಲ್ಲಕ್ಕಿ ಸೇವೆ ಜರುಗಿತು.ಸಂಜೆ 4.15ಕ್ಕೆ ಮಹಿಳೆಯರು ಸೇರಿ ತನು-ಮನ ಕಳಸ ಕನ್ನಡಿ ಭಜನಾ ಭಕ್ತಿಯೇ ಮೂಲ ಧನದಿಂದ ಭಕ್ತಿಯ ಮೂಲಕ ದೇವಿ ಕೃಪೆಗೆ ಪಾತ್ರರಾಗಿ ದರ್ಶನ ಪಡೆದರು.ಮಹಿಳೆಯರಿಂದಲೇ ಮಹಾ ರಥೋತ್ಸವ ಜರುಗುವುದು ಇಲ್ಲಿನ ವಿಶೇಷವಾಗಿದೆ.

ಮಹಾದೇವಿಯ ರಥವನ್ನು ಎಳೆಯುವ ಮೂಲಕ ತಮ್ಮಲ್ಲಿ ಭಕ್ತಿ ಭಾವವನ್ನು ಆನಂದಿಸಿದರು. ಮಸ್ಕಿ ಬಳಗಾನೂರ, ಸುಂಕನೂರ, ಕಡಬೂರ,ಗುಡದೂರ, ತುರ್ವಿಹಾಳ, ಹಸ್ಮಕಲ್,ಮೆದಿಕಿನಾಳ, ಸಂತೆಕೆಲ್ಲೂರ, ಅಂಕುಶದೂಡ್ಡಿ, ಅಂತರಗಂಗೆ, ನಾಗರಬೆಂಚಿ, ಬೈಲಗುಡ್ಡ, ಹಾಲಾಪೂರ ಹಾಗೂ ಇನ್ನಿತರ ಗ್ರಾಮದ ಭಕ್ತಾದಿಗಳು ಆಗಮಿಸಿ ಶ್ರೀ ಭ್ರಮರಾಂಬ ದೇವಿಯ ದರ್ಶನ ಪಡೆದರು.


ಕಾರ್ಯಕ್ರಮಕ್ಕೆ ಮಸ್ಕಿ ಶಾಸಕ ಬಸನಗೌಡ ತುರುವಿಹಾಳ, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್,  ಮಹಾದೇವಪ್ಪಗೌಡ, ಪೊಲೀಸ್ ಪಾಟೀಲ್ ಮುಂತಾದವರು ಆಗಮಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು