ಇತ್ತೀಚಿನ ಸುದ್ದಿ
ಮಸ್ಕಿ ಕ್ಷೇತ್ರದ ಬೆಳ್ಳಿಗನೂರು ಗ್ರಾಮದಲ್ಲಿ ತಡೆಗೋಡೆ ಇಲ್ಲದ ನೂತನ ಸೇತುವೆ: ಅಪಾಯಕ್ಕೆ ಭಾರಿ ಆಹ್ವಾನ
10/10/2021, 11:26
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ಕ್ಷೇತ್ರದ ಬೆಳ್ಳಿಗನೂರು ಗ್ರಾಮದಲ್ಲಿ ಉಟಕನೂರು ಹೋಗುವ ರಸ್ತೆಗೆ ನೂತವಾಗಿ ನಿರ್ಮಿಸಿದ ಸೇತುವೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಪಕ್ಕದಲ್ಲೇ ಶಾಲೆ ಇರುವ ಈ ಸೇತುವೆಗೆ ತಡೆಗೋಡೆ ಅಥವಾ ಗಾರ್ಡ್ ನಿರ್ಮಿಸದೇ ಇರುವುದೇ ಡೇಂಜರ್ ಸನ್ನಿವೇಶವನ್ನು ಸೃಷ್ಟಿಸಿದೆ.
ನೂತನ ಸೇತುವೆಯ ಕಾಮಗಾರಿ ಮುಗಿದು ಬಿಲ್ ಪಾವತಿಯೂ ನಡೆದಿದ್ದರೂ ಸೇತುವೆಗೆ ತಡೆಗೋಡೆ ಮಾತ್ರ ನಿರ್ಮಿಸಿಲ್ಲ. ಇಲ್ಲೇ ಪಕ್ಕದಲ್ಲಿ ಸರಕಾರಿ ಶಾಲೆ ಇದ್ದು, ನೂರಾರು ಮಕ್ಕಳು ದಿನಾಲೂ ಇಲ್ಲಿ ಅಡ್ಡಾಡುತ್ತಾರೆ. ಸಣ್ಣ ಮಕ್ಕಳು ಸೇತುವೆ ಬದಿಯಿಂದ ಕುತೂಹಲದಿಂದ ಕೆಳಗೆ ಇಣುಕುವ ಸಾಧ್ಯತೆಗಳಿವೆ. ಆದರೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಏನೂ ನಡೆಯದಂತೆ ಮೌನವ್ರತಕ್ಕೆ ಶರಣಾಗಿದ್ದಾರೆ. ಗ್ರಾಮಸ್ಥರು ಹಲವು ಬಾರಿ ಗುತ್ತಿಗೆದಾರರಿಗೆ ಕೂಡ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ಯಾವುದೇ ಸ್ಪಂದನೆ ಕಂಡು ಬಂದಿಲ್ಲ.ಈ ಹಿನ್ನೆಲೆಯಲ್ಲಿ
ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ್ ಮಧ್ಯಪ್ರೇಶಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.