4:43 PM Friday26 - April 2024
ಬ್ರೇಕಿಂಗ್ ನ್ಯೂಸ್
ಸ್ಪೀಕರ್ ಖಾದರ್ ಆಪ್ತ ಸಹಾಯಕ ಮಹಮ್ಮದ್ ಲಿಬ್ಝೆತ್ ಮತದಾನ ; ಪದ್ಮರಾಜ್ ಗೆಲುವಿನ… ಜನಾರ್ದನ ಪೂಜಾರಿ ಮಾದರಿಯಲ್ಲಿ ಪದ್ಮರಾಜ್ ಪೂಜಾರಿ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ: ಲಿಬ್‌ಝಿತ್ ಅಭಿಮತ ನೈಟ್ ಸರ್ವಿಸ್ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ನಿವಾಸಿಯ ಬಂಧನ ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಕರಾವಳಿಯಲ್ಲಿ ಸಕಲ ಸಿದ್ದತೆ;… ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಮತಗಟ್ಟೆಯ ಅಧಿಕಾರಿಗಳಿಗೆ ಪಾಠ; ಜಾಗೃತಿಯಾಗಿ ಕರ್ತವ್ಯ… ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್… ಬಹಿರಂಗ ಪ್ರಚಾರದ ಕೊನೆಯ ದಿನ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರಿಂದ ಪಂಪ್’ವೆಲ್’… ಪಂಪ್ ವೆಲ್ ನಿಂದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಉರಿ…

ಇತ್ತೀಚಿನ ಸುದ್ದಿ

ಮೊರಬ ಶ್ರೀವೀರಭದ್ರೇಶ್ವರ ಸ್ವಾಮಿ ದೇಗುಲದಲ್ಲಿ ಹೆಜ್ಜೇನು ಗೂಡು: ಶುಭ ಅಶುಭದ ಲೆಕ್ಕಾಚಾರ; ಹೂ ಫಲ ಕೇಳಿದ ಗ್ರಾಮದ ದೈವಸ್ಥರು!!

08/09/2021, 09:54

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಜಿಲ್ಲೆಯ ಕೂಡ್ಲಿಗಿ ತಾಲೂಕು ಮೊರಬ ಗ್ರಾಮದಲ್ಲಿ, ಶ್ರೀವೀರಭದ್ರೇಶ್ವರ ದೇವಸ್ಥಾನದ ಟರಾಸಿನ್ನಲ್ಲಿ ಹೆಜ್ಜೇನು ಹುಳುಗಳು ಗೂಡು ಕಟ್ಟಿವೆ. ಬೃಹದಾಕಾರದಲ್ಲಿ ನಿರ್ಮಿಸಲಾಗಿರುವ ಹೆಜ್ಜೇನು ಗೂಡು ದೇವರ ದರ್ಶನಕ್ಕೆ ಬರುವ ಭಕ್ತರನ್ನ ಸ್ವಾಗತಿಸುತ್ತಿವೆ. ಅಸಂಖ್ಯಾತ ಹೆಜ್ಜೇನು ಹುಳುಗಳು ಬೃಹತ್ ಗೂಡು(ಹುಟ್ಟು)ಕಟ್ಟಿದ್ದು ಶುಭವೋ ಅಶುಭವೋ ಭಕ್ತರಿಗೆ ತೊಂದರೆ ಕೊಡುತ್ತವೆಯೋ..!?ಎಂಬ ಆತಂಕ ಗ್ರಾಮದ ದೈವಸ್ಥರಲ್ಲಿ ಮನೆ ಮಾಡಿತ್ತು.ಅದಕ್ಕಾಗಿ ಪ್ರಾರಂಭದಲ್ಲಿಯೇ ಈ ಬಗ್ಗೆ ಗ್ರಾಮದ ದೈವಸ್ಥರು, ಶ್ರೀ ವೀರಭದ್ರ ದೇವರಲ್ಲಿ ಶುಭ ಅಶುಭ ಕುರಿತು ಮತ್ತು ಜೇನು ಹುಟ್ಟು ತೆರವು ಗೊಳಿಸಲು ಅನುಮತಿ ಕೋರಿ ಹೂ ಫಲ ಕೇಳಿದ್ದಾರೆ. ಶ್ರೀವೀರಭದ್ರೇಶ್ವರ ಸ್ವಾಮಿ ಎಡಭಾಗದ ಹೂ ಕೊಡೋ ಮೂಲಕ, ಭಕ್ತರಿಗೆ ಅಭಯ ನೀಡಿದ್ದು ಹಾಗೂ ಜೇನು ಹುಳುಗಳಿಗೂ ಆಶ್ರಯ ಹಸ್ತ ನೀಡಿದ್ದಾರೆ.

ಈ ಹೆಜ್ಜೇನು ಕಳೆದ ಆರು ತಿಂಗಳಿಂದ ದೇವಸ್ಥಾನದ ಮಧ್ಯ ಭಾಗದಲ್ಲಿ ನಿರ್ಮಾಣವಾಗಿದೆ.

ದೇವಸ್ಥಾನದ ಪ್ರಾಂಗಣದಲ್ಲಿ ಸದಾ ಬೃಹತ್ ಗಾತ್ರದ ಹೆಜ್ಜೇನು ಹುಳುಗಳು ಹಾರಾಡುತ್ತಿರುತ್ತವೆ. ದೇವರ ದರ್ಶನಕ್ಕೆ ಬರುವ ಭಕ್ತರನ್ನ ನಯವಾಗಿ ಸ್ಪರ್ಶಿಸುವ ನಿರುಪದ್ರವಿಗಳಾಗಿದ್ದು, ಹೆಜ್ಜೇನು ಹುಳುಗಳು ಭಕ್ತರನ್ನು ಸ್ವಾಗತಿಸಿ ಕೊಳ್ಳುತ್ತಿವೆ ಎಂಬಂತೆ  ಸನ್ನಿವೇಶ ಸೃಷ್ಠಿಯಾಗಿದೆ. ಕಳೆದ ಆರು ತಿಂಗಳಿಂದ ನಿರ್ಮಾಣವಾಗಿರುವ ಹೆಜ್ಜೇನಿನ ಬೃಹತ್ ಗೂಡು ಬಲು ಆಕರ್ಷಕವಾಗಿದ್ದು, ಹುಳುಗಳಿಂದ ಯಾರಿಗೂ ಯಾವೂದೇ ಕಾರಣಕ್ಕೂ ತೊಂದರೆ ಆಗಿಲ್ಲ. ಹೆಜ್ಜೆನು ಗೂಡು ನಿರ್ಮಾಣದಿಂದ ಶ್ರೀವೀರಭದ್ರೇಶ್ವರ ಭಕ್ತರ ಪಾಲಿಗೂ ಶುಭ ಶಕುನವಾಗಿ ಪರಿಣಮಿಸಿದೆ ಯಂತೆ, ದೇವಸ್ಥಾನದಲ್ಲಿ ಹೆಜ್ಜೇನು ವಾಸ ಮಾಡಿರುವುದರಿಂದಾಗಿ ಸಕಲರಿಗೂ ಹಿತವಾಗಲಿದೆ ಎಂದು ಆಸ್ತಿಕರು ಆಶಾಮನೋಭಾವ ಹೊಂದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು