12:55 PM Friday26 - April 2024
ಬ್ರೇಕಿಂಗ್ ನ್ಯೂಸ್
ಸ್ಪೀಕರ್ ಖಾದರ್ ಆಪ್ತ ಸಹಾಯಕ ಮಹಮ್ಮದ್ ಲಿಬ್ಝೆತ್ ಮತದಾನ ; ಪದ್ಮರಾಜ್ ಗೆಲುವಿನ… ಜನಾರ್ದನ ಪೂಜಾರಿ ಮಾದರಿಯಲ್ಲಿ ಪದ್ಮರಾಜ್ ಪೂಜಾರಿ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ: ಲಿಬ್‌ಝಿತ್ ಅಭಿಮತ ನೈಟ್ ಸರ್ವಿಸ್ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ನಿವಾಸಿಯ ಬಂಧನ ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಕರಾವಳಿಯಲ್ಲಿ ಸಕಲ ಸಿದ್ದತೆ;… ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಮತಗಟ್ಟೆಯ ಅಧಿಕಾರಿಗಳಿಗೆ ಪಾಠ; ಜಾಗೃತಿಯಾಗಿ ಕರ್ತವ್ಯ… ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್… ಬಹಿರಂಗ ಪ್ರಚಾರದ ಕೊನೆಯ ದಿನ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರಿಂದ ಪಂಪ್’ವೆಲ್’… ಪಂಪ್ ವೆಲ್ ನಿಂದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಉರಿ…

ಇತ್ತೀಚಿನ ಸುದ್ದಿ

ಪೊಲೀಸ್ ಇಲಾಖೆಯಲ್ಲಿ ದಕ್ಷತೆಗೆ ಇನ್ನೊಂದು ಹೆಸರು ಮಸ್ಕಿಯ ಪಿಎಸ್ ಐ ಭೀಮದಾಸ್: ಸಾರ್ವಜನಿಕರಿಂದಲೂ ಶಹಬಾಸ್ ಗಿರಿ!!

14/07/2021, 09:41

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ರಾಯಚೂರು ಜಿಲ್ಲೆಯ ಮಸ್ಕಿ ಪೊಲೀಸ್ ಠಾಣೆಗೆ ಮುಂಬಡ್ತಿ ಪಡೆದು ಕ್ರೈಂ ವಿಭಾಗಕ್ಕೆ ಪಿಎಸ್ಐ ನೂತನ ಆಯ್ಕೆಯಾದ ಭೀಮದಾಸ್ ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಕ್ಕುತ್ತಿದ್ದಾರೆ.

ಮಾನ್ವಿ ತಾಲೂಕಿನ ಆರೋಲಿ ಗ್ರಾಮದವರಾದ ಅವರು1969 ಜೂನ್ 1ರಂದು ಜನಿಸಿದರು. ಅವರ ತಂದೆ ವೆಂಕೋಬ, ತಾಯಿ ಲಕ್ಷ್ಮಮ್ಮ. ಭೀಮದಾಸ್ ಅವರು ಪ್ರಾಥಮಿಕ ಶಿಕ್ಷಣವನ್ನು ಆರೋಲಿ ಯಲ್ಲಿ ಮುಗಿಸಿದರು. ಪ್ರೌಢ ಶಿಕ್ಷಣವನ್ನು ಮಟಮಾರಿ ಮಹಾಂತೇಶ ಶಿಕ್ಷಣ ಸಂಸ್ಥೆಯಲ್ಲಿ ನಡೆಸಿದರು. ನಂತರ ಪಿಯುಸಿ ರಾಯಚೂರಿನ ಸೈನ್ಸ್ ಎಲ್ವಿಡಿ ಕಾಲೇಜಿನ ಪೂರೈಸಿದರು. ಬಿಎ ಮಾಡುವುದರ ಒಳಗಾಗಿ ಎಂಪ್ಲಾಮೆಂಟ್ ಕಡೆಯಿಂದ ಪೊಲೀಸ್ ಇಲಾಖೆಗೆ ಪಾದರ್ಪಣೆ ಮಾಡಿದರು.

ಬಡ ಕುಟುಂಬದಲ್ಲಿ ಜನಿಸಿದ ಅವರು ಇಂದು ಮಸ್ಕಿ ಪಿಎಸ್ಐ ಆಯ್ಕೆಯಾಗಿರುವ ಸಮಾಜಕ್ಕೆ ಮಾದರಿಯಾದ ವಿಷಯವಾಗಿದೆ. ಇವರು ಚೆನ್ನೈನಲ್ಲಿ ಟ್ರೈನಿಂಗ್ ಪಡೆದು ಎಸ್ಪಿ ಆಫೀಸ್, ನಂತರ ತುರುವಿಹಾಳ, ಮುದಗಲ್ಲು, ಮಸ್ಕಿ, ಯಾಪಲದಿನ್ನಿ ಸೇರಿದಂತೆ

ರಾಯಚೂರು ನಾನಾ ಕಡೆಗೆ ಸೇವೆ ಸಲ್ಲಿಸಿದರು. ಅಲ್ಲಿಂದ ಹೆಡ್ ಕಾನ್ ಸ್ಟೇಬಲ್ ಆಗಿ ಮುಂಬಡ್ತಿ ಪಡೆದು ಜಮಾದಾರ್ ಆಗಿ ರಾಯಚೂರು ಜಿಲ್ಲೆಯ ಎಲ್ಲ  ಪೊಲೀಸ್ ಇಲಾಖೆ ಠಾಣೆಯಲ್ಲಿ ಸೇವೆ ಸಲ್ಲಿಸಿದರು. ಮಸ್ಕಿ ಪೊಲೀಸ್ ಠಾಣೆಗೆ ಕ್ರೈಂ ಪೊಲೀಸ್ ಅಧಿಕಾರಿಯಾಗಿ ಸೇವೆಸಲ್ಲಿಸುತ್ತಿರುವ ಅವರು ರಾಯಚೂರಿನ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್ ಬಿಂದು ಅವರ ಮೆಚ್ಚಿಗೆ ಪಡೆದಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಪೊಲೀಸ್ ವರಿಷ್ಠ ಅ ಸಿಬಿ ವೇದಮೂರ್ತಿಕೂಡ ಮೆಚ್ಚಿಗೆ ಪಟ್ಟಿದ್ದಾರೆ.

ಅವರು ಯಾದಗಿರಿ ಜಿಲ್ಲಾ ಎಸ್ಬಿ ಆಗಿ ಸೇವೆ ಸಲ್ಲಿಸುತ್ತಿರುವಾಗ ಅವರ ಕರ್ತವ್ಯವನ್ನು ಗುರುತಿಸಿ ಮೆಚ್ಚಿಗೆ ಪಟ್ಟಿದ್ದಾರೆ. ಅದರಂತೆ ಬಡಕುಟುಂಬದಿಂದ ಬಂದ ಭೀಮ ದಾಸ್ ಅವರ ಜೀವನ ಇತರರಿಗೆ ಮಾದರಿ ಎಂದರೆ ತಪ್ಪಾಗಲಿಕ್ಕಿಲ್ಲ.

ಇವರ 35 ವರ್ಷಗಳ ಪೊಲೀಸ್ ಇಲಾಖೆಯ ಸೇವೆಯಲ್ಲಿ ಯಾವುದೇ ಚ್ಯುತಿ ಬಂದಿಲ್ಲ. ಇವರು ನಿಜವಾಗಿಯೂ ಪೊಲೀಸ್ ಇಲಾಖೆಯಲ್ಲಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವ ವ್ಯಕ್ತಿ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಾರೆ.

ಅವರು ಹೆಡ್ ಕಾನ್ಸ್ಟೇಬಲ್ ಇದ್ದಾಗ ಹಳ್ಳಿಗಳಲ್ಲಿ ಸೈಕಲ್ ಮೇಲೆ ತಿರುಗಾಡುತ್ತಿರುವುದು ಸಾಮಾನ್ಯವಾಗಿತ್ತು. ಒಟ್ಟಿನಲ್ಲಿ ಭೀಮದಾಸ್ ಅವರು ಒಬ್ಬ ಉತ್ತಮ ಅಧಿಕಾರಿ.

ಇತ್ತೀಚಿನ ಸುದ್ದಿ

ಜಾಹೀರಾತು