7:38 AM Saturday27 - April 2024
ಬ್ರೇಕಿಂಗ್ ನ್ಯೂಸ್
ಚಳ್ಳಕೆರೆ ತಾಲೂಕಿನಲ್ಲಿ ಶಾಂತಿಯುತ ಮತದಾನ: ಚುನಾವಣೆ ಕರ್ತವ್ಯನಿರತ ಮಹಿಳಾ ಸಿಬ್ಬಂದಿ ಸಾವು ನಂಜನಗೂಡಿನಲ್ಲಿ ಶಾಂತಿಯುತ ಚುನಾವಣೆ: ಸಂಜೆ 4ಕ್ಕೆ ಸುಮಾರು ಶೇ.65 ಮತದಾನ ಸ್ಪೀಕರ್ ಖಾದರ್ ಆಪ್ತ ಸಹಾಯಕ ಮಹಮ್ಮದ್ ಲಿಬ್ಝೆತ್ ಮತದಾನ ; ಪದ್ಮರಾಜ್ ಗೆಲುವಿನ… ಜನಾರ್ದನ ಪೂಜಾರಿ ಮಾದರಿಯಲ್ಲಿ ಪದ್ಮರಾಜ್ ಪೂಜಾರಿ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ: ಲಿಬ್‌ಝಿತ್ ಅಭಿಮತ ನೈಟ್ ಸರ್ವಿಸ್ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ನಿವಾಸಿಯ ಬಂಧನ ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಕರಾವಳಿಯಲ್ಲಿ ಸಕಲ ಸಿದ್ದತೆ;… ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಮತಗಟ್ಟೆಯ ಅಧಿಕಾರಿಗಳಿಗೆ ಪಾಠ; ಜಾಗೃತಿಯಾಗಿ ಕರ್ತವ್ಯ… ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್…

ಇತ್ತೀಚಿನ ಸುದ್ದಿ

ದರೂರ ಗ್ರಾಪಂ: ಅಧ್ಯಕ್ಷ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮಹೇಶ್ ಬಾಬು ಕಾಂಬಳೆ  ಹಾಗೂ ತಂಗೆವ್ವ ಶಂಕರ್ ಐಗಳಿ ಆಯ್ಕೆ

02/07/2021, 17:42

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮ ಪಂಚಾಯತಿಗೆ  ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮಹೇಶ್ ಬಾಬು ಕಾಂಬಳೆ  ಹಾಗೂ ತಂಗೆವ್ವ ಶಂಕರ್ ಐಗಳಿ   ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಮಹೇಶ್ ಬಾಬು ಕಾಂಬಳೆ, ನಾವು ಗ್ರಾಮದ ಅಭಿವೃದ್ಧಿಗಾಗಿ ಪಕ್ಷದ ಬೇಧ ಮರೆತು ಜನರ ಹಿತದೃಷ್ಟಿಯಿಂದ ಗ್ರಾಮದ ಜನರ ಕಷ್ಟಗಳಿಗೆ ಸರ್ವ ಸದಸ್ಯರೆಲ್ಲರೂ ಕೂಡಿ ಸ್ಪಂದಿಸುತ್ತೇವೆ  ಎಂದು ಹೇಳಿದರು. 

ತಮ್ಮನ್ನು  ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ ಇನ್ನುಳಿದ ಸದಸ್ಯರಿಗೆ  ಹಾಗೂ ಗ್ರಾಮದ ಜನತೆಗೆ ಕೃತಜ್ಞತೆ ಸಮರ್ಪಿಸಿದರು.

ಚುನಾವಣಾ ಅಧಿಕಾರಿ ಉದಯ್ ಪಾಟೀಲ್, ರವೀಂದ್ರ ಬಂಗಾರಪ್ಪ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಸ್. ಎಂ. ಬರಬರೇ, ಸದಸ್ಯರುಗಳಾದ ಮಹೇಶ್ ಡವಳೇಶ್ವರ್, ಶಾಂತಾ ಅಶೋಕ್ ಖುರ್ದ್, ಸುರೇಖಾ ಮಹೇಶ್ ಬೇನಾಡಿ, ವೃಷಭ ನಾಯಿಕ್, ಪ್ರೇಮಾ ಕಾಂಬಳೆ, ಸಿದ್ದಪ್ಪ ದಳವಾಯಿ, ಅಪ್ಪಸಾಬ ಸದಾಶಿವ ಹಳ್ಳೂರ್, ಶೋಭಾ ನೇಮಿನಾಥ್ ಅಸ್ಕಿ, ಹೌಸವ್ವ ಶಂಕರ್ ಕಾಂಬಳೆ, ಅಸ್ಮಾ ಆರ್ ಬಿಜಾಪುರ್, ಆಯಿಷಾ ಮುಲ್ಲಾ, ರಾಜಶ್ರೀ ಎಮ್ ಬಾಳಿಗೇರಿ, ಮಹದೇವ್ ಮಲ್ಲಪ್ಪ ಕಲ್ಲೋಳಿ ಮತ್ತು ಬಿಜೆಪಿ ಅಥಣಿ ಮಂಡಲ ಅಧ್ಯಕ್ಷ ಅಣ್ಣಾಸಾಬ ನಾಯಿಕ್, ಗ್ರಾಮದ ಹಿರಿಯರಾದ ಜಗದೀಶ್ ದಳವಾಯಿ, ಗುರುನಿಂಗ್ ಗುಮತಾಜ. ಗುರುರಾಜ ಗಳತಗಿ,ಪ್ರಕಾಶ ತೇಲಿ,ಪುಟ್ಟು ಹಿರೇಮಠ,ಧರಿಗೌಡ ಬಸಗೌಡರ್, ಅಮೂಲ ನಾಯಿಕ  ಕೂಡ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು