7:24 AM Saturday27 - April 2024
ಬ್ರೇಕಿಂಗ್ ನ್ಯೂಸ್
ಚಳ್ಳಕೆರೆ ತಾಲೂಕಿನಲ್ಲಿ ಶಾಂತಿಯುತ ಮತದಾನ: ಚುನಾವಣೆ ಕರ್ತವ್ಯನಿರತ ಮಹಿಳಾ ಸಿಬ್ಬಂದಿ ಸಾವು ನಂಜನಗೂಡಿನಲ್ಲಿ ಶಾಂತಿಯುತ ಚುನಾವಣೆ: ಸಂಜೆ 4ಕ್ಕೆ ಸುಮಾರು ಶೇ.65 ಮತದಾನ ಸ್ಪೀಕರ್ ಖಾದರ್ ಆಪ್ತ ಸಹಾಯಕ ಮಹಮ್ಮದ್ ಲಿಬ್ಝೆತ್ ಮತದಾನ ; ಪದ್ಮರಾಜ್ ಗೆಲುವಿನ… ಜನಾರ್ದನ ಪೂಜಾರಿ ಮಾದರಿಯಲ್ಲಿ ಪದ್ಮರಾಜ್ ಪೂಜಾರಿ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ: ಲಿಬ್‌ಝಿತ್ ಅಭಿಮತ ನೈಟ್ ಸರ್ವಿಸ್ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ನಿವಾಸಿಯ ಬಂಧನ ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಕರಾವಳಿಯಲ್ಲಿ ಸಕಲ ಸಿದ್ದತೆ;… ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಮತಗಟ್ಟೆಯ ಅಧಿಕಾರಿಗಳಿಗೆ ಪಾಠ; ಜಾಗೃತಿಯಾಗಿ ಕರ್ತವ್ಯ… ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್…

ಇತ್ತೀಚಿನ ಸುದ್ದಿ

ಬುಟ್ಟಿ ಮೀನು ಬದುಕು ಕಟ್ಟಿಕೊಟ್ಟಿತು!: ಇಂದು ಇಬ್ಬರು ಆಳುಗಳೊಂದಿಗೆ ಭರ್ಜರಿ ವ್ಯಾಪಾರ!!

24/06/2021, 21:10

ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com

ಸುಮಾರು 200 ರೂಪಾಯಿ ಬಂಡವಾಳದಿಂದ ಆರಂಭಿಸಿದ ಆ ಮೀನಿನ ವ್ಯಾಪಾರ ಇಂದು ಸಣ್ಣ ಫಿಶ್ ಶಾಪ್ ಇಡುವವರೆಗೆ ಸಾಗಿದೆ. ಬುಟ್ಟಿಯನ್ನು ತಲೆಯಲ್ಲಿಟ್ಟು ಮೀನು ಮಾರಾಟ ಮಾಡುತ್ತಿದ್ದ. ಇಂದು ಟೆಂಪೋದಲ್ಲಿ ನಡೆಯುತ್ತಿದೆ. ಛಲವೊಂದಿದ್ದರೆ ಬದುಕುವ ಕಲೆ ತನ್ನಿಂದ ತಾನಾಗಿಯೇ ಬರುತ್ತದೆ ಎನ್ನುವುದಕ್ಕೆ ಇದೊಂದು ತಾಜಾ ಮೀನಿನಂತಹ ತಾಜಾ ನಿದರ್ಶನ.

ಇದೇನು ಪರವೂರಿನ ಕತೆಯಲ್ಲ. ನಮ್ಮ ಕಡಲನಗರಿಯ ಮಡಿಲಿನಲ್ಲಿರುವ ಮೀನು ವ್ಯಾಪಾರಿಯ ರೋಚಕ ಕಥೆ. ಝಯಿನುದ್ದೀನ್ ಎಂ.ಬಿ. ಅವರ ಜೀವನ ಕಥೆ.

Click Here To Visit Our FB Page

ಝಯಿನುದ್ದೀನ್ ಅವರು ಕಲಿತದ್ದು ಬರೇ ನಾಲ್ಕನೆ ಕ್ಲಾಸ್. ನಂತರ ಜೀವನ ಪಯಣ ಕೆಲಸದತ್ತ ಸಾಗಿತು. ನಾಲ್ಕನೇ ತರಗತಿಯ ಹುಡ್ಗ ಏನು ಕೆಲಸ ಮಾಡಿಯಾನು ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ.

ಎಲ್ಲ ಮಕ್ಕಳು ಆಟವಾಡುತ್ತಾ ಶಾಲೆಗೆ ಹೋಗುತ್ತಿದ್ದರೆ ಬಾಲಕ ಝಯಿನುದ್ದೀನ್ ಮನೆ ಮನೆಗೆ ಹಾಲು ವಿತರಿಸುತ್ತಿದ್ದರು. ಬಾಲ್ಯದ ದಿನಗಳಲ್ಲಿ ಅವರ ಮನೆಯಲ್ಲಿ 15 ದನಗಳಿದ್ದವು. ಹಾಲು ಮಾರಿ ಜೀವನ ನಡೆಸಬೇಕಿತ್ತು. ದಿನಕ್ಕೆ 40 ಲೀಟರ್ ಹಾಲು ಬರುತ್ತಿತ್ತು. ಹಾಗೆ ಸ್ವಲ್ಪ ದೊಡ್ಡವನಾಗುತ್ತಿದ್ದಂತೆ ಝಯಿನುದ್ದೀನ್ ವೆಲ್ಡಿಂಗ್ ಕೆಲಸಕ್ಕೆ ಸೇರಿಕೊಂಡರು. ಅಲ್ಲಿಂದ ಮೇಸ್ತ್ರಿಯಾಗಿ ಪರಿವರ್ತನೆಗೊಂಡರು. ಆದರೆ ಮೇಸ್ತ್ರಿ ಕೆಲಸ ಅವರ ಕೈಹಿಡಿಯಲಿಲ್ಲ. ಈ ನಡುವೆ ದುಬೈಯಿಂದ ಅವಕಾಶಗಳು ಬಂದವು. ಆದರೆ ಊರು ಬಿಟ್ಟು ಹೊರದೇಶಕ್ಕೆ ಹೋಗಲು ಇಚ್ಚಿಸದ ಅವರು ಊರಲ್ಲೇ ಇದ್ದುಕೊಂಡು ಸಾಧಿಸಬೇಕೆಂದು ತೀರ್ಮಾನಿಸಿದರು. ಇವೆಲ್ಲದರ ಫಲಶ್ರುತಿ ಎನ್ನುವಂತೆ ಮತ್ತೆ ವೃತ್ತಿ ಬದಲಾಯಿಸಿದ ಝಯಿನುದ್ದೀನ್ ಮೀನು ಮಾರುವ ವೃತ್ತಿಯನ್ನು ಆರಿಸಿಕೊಂಡರು.

ಆರಂಭದಲ್ಲಿ ದಿನಕ್ಕೆ 200 ರೂ. ಬಂಡವಾಳ ಹಾಕಿ ಬುಟ್ಟಿಯನ್ನು ತಲೆಯಲ್ಲಿಟ್ಟುಕೊಂಡು ಮನೆ ಮನೆ ಸುತ್ತಿ ಮೀನು ಮಾರುತ್ತಿದ್ದರು. ಇಡೀ ದಿನ ಮೀನು ಮಾರಿದರೆ ಬರೇ 30 ರೂ. ಲಾಭ ಬರುತ್ತಿತ್ತು.

ಮೊಯಿದಿನಬ್ಬ- ಖತೀಜಾ ದಂಪತಿಯ ಪುತ್ರನಾದ ಝಯಿನುದ್ದೀನ್ ಅವರಿಗೆ ಒಟ್ಟು 10 ಮಂದಿ ಸಹೋದರ ಹಾಗೂ ಸಹೋದರಿಯರಿದ್ದರು.


ಝಯಿನುದ್ದೀನ್ ಸುಮಾರು 10 ವರ್ಷಗಳ ಕಾಲ ಬುಟ್ಟಿಯನ್ನು ತಲೆಯಲ್ಲಿಟ್ಟು ಬೀದಿ ಬೀದಿ ಅಲೆದಾಡಿ ಮೀನು ಮಾರುತ್ತಿದ್ದರು. ಶ್ರಮಕ್ಕೆ ತಕ್ಕ ಪ್ರತಿಫಲ ಎಂಬಂತೆ ವ್ಯಾಪಾರದಲ್ಲಿ ವೃದ್ಧಿ ಕಾಣಲಾರಂಭಿಸಿತು. ಸಣ್ಣ ಟೆಂಪೊ ತೆಗೆದುಕೊಂಡು ಅದರಲ್ಲಿ ವ್ಯಾಪಾರ ಮಾಡಲು ಶುರು ಮಾಡಿದರು. ಜತೆಗೆ ಸಣ್ಣ ಮೀನಿನ ಅಂಗಡಿಯನ್ನೂ ನಗರದ ಬಜಾಲ್ ಪಕಲಡ್ಕ ದಲ್ಲಿ ತೆರೆದರು. ಈಗ ಇಬ್ಬರನ್ನು ಕೆಲಸಕ್ಕಿಟ್ಟುಕೊಂಡು ಝಯಿನುದ್ದೀನ್ ಮೀನಿನ ವ್ಯಾಪಾರ ಮಾಡುತ್ತಾರೆ. ಹೆಂಡತಿ ಅತಿಕಾ ಮತ್ತು ಐವರು ಪುತ್ರಿಯರು ಹಾಗೂ ಇಬ್ಬರು ಪುತ್ರರೊಂದಿಗೆ ತುಂಬು ಸಂಸಾರದ ಜೀವನ ನಡೆಸುತ್ತಿದ್ದಾರೆ.

ನಾನು ಶಿಕ್ಷಣದಿಂದ ವಂಚಿತನಾಗಿದ್ದೇನೆ. ನನ್ನಂತೆ ನನ್ನ ಮಕ್ಕಳು ಕಷ್ಟಪಡಬಾರದು. ನನ್ನ ಮಕ್ಕಳು ಎಷ್ಟು ಕಲಿಯಬೇಕು ಅಂತ ಇಷ್ಟಪಡುತ್ತಾರೋ ಅಷ್ಟು ಕಲಿಸಬೇಕೆಂಬ ಆಸೆ. ಒಳ್ಳೆಯ ಶಿಕ್ಷಣ ಜೋಡಿಸಬೇಕು.

-ಝಯಿನುದ್ದೀನ್ ಎಂ.ಬಿ. ಮೀನಿನ ವ್ಯಾಪಾರಿ, ಮಂಗಳೂರು

ಇತ್ತೀಚಿನ ಸುದ್ದಿ

ಜಾಹೀರಾತು