ಇತ್ತೀಚಿನ ಸುದ್ದಿ
ಕೊರೊನಾ ಸೋಂಕು: ಉಡುಪಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಸೋಮಶೇಖರ್ ಇನ್ನಿಲ್ಲ
07/06/2021, 17:41
ಉಡುಪಿ(reporterkarnataka news): ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಬನವಾಸಿ ಸೋಮಶೇಖರ್(50) ಅವರು ಕೊರೊನಾ ಸೋಂಕಿನಿಂದ ಸೋಮವಾರ ನಿಧನರಾದರು.
ಕೊರೊನಾ ಸೋಂಕಿಗೊಳಗಾದ ಸೋಮಶೇಖರ್ ಅವರನ್ನು 6 ದಿನಗಳ ಹಿಂದೆ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ನಿಧನರಾದರು. ಸೋಮಶೇಖರ್ ಅವರು ಪತ್ನಿ ಶಿಲ್ಪಾ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ.
ಸೋಮಶೇಖರ್ ಅವರು ಸರಳ, ಸಜ್ಜನ ಅಧಿಕಾರಿಯಾಗಿದ್ದರು. ಅವರು ಉಡುಪಿಗೆ ಆಗಮಿಸಿದ ಬಳಿಕ ಇಲ್ಲಿನ ಪ್ರವಾಸೋದ್ಯಮ ಇಲಾಖೆ ವೇಗ ಪಡೆದುಕೊಂಡಿತ್ತು. ಕದಂಬ ರತ್ನ ಪ್ರಶಸ್ತಿ ಅವರನ್ನು ಅರಸಿ ಬಂದಿತ್ತು.