6:01 AM Thursday7 - December 2023
ಬ್ರೇಕಿಂಗ್ ನ್ಯೂಸ್
ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ ಇಂದಿನಿಂದ ತರಗತಿ… ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣ: ಚೈತ್ರಾ ಸೇರಿದಂತೆ… ವಾಹನ ಕಳ್ಳತನ ಪ್ರಕರಣದ ಕುಖ್ಯಾತ ಆರೋಪಿಯ ಸೆರೆ: 68,000/- ಮೌಲ್ಯದ ಸೊತ್ತು ವಶಕ್ಕೆ ಮಂಗಳೂರು: 4 ತಿಂಗಳ ಹಸುಗೂಸಿನ ಕೊಂದು ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ… ಚಿಕ್ಕಮಗಳೂರು: ಅಮಾನತುಗೊಂಡ ಪೊಲೀಸರ ಕುಟುಂಬದಿಂದ ಠಾಣೆ ಮುಂಭಾಗ ಪ್ರೊಟೆಸ್ಟ್ ಬೆಳಗಾವಿ ಸುವರ್ಣಸೌಧಕ್ಕೆ ಬೆಳಕಿನ ಖದರ್: ವೀಕೆಂಡ್ ನಲ್ಲಿ ಬಣ್ಣದ ಬೆಳಕಿನಲ್ಲಿ ಬೆಳಗುವ ಯೋಜನೆಗೆ… ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಡಿ. 9ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ ಭಾಗಿ ಯುವ ನ್ಯಾಯವಾದಿ ಮೇಲೆ ಪೊಲೀಸರ ಅಮಾನುಷ ಹಲ್ಲೆ: ವಕೀಲರಿಂದ ಭಾರೀ ಪ್ರತಿಭಟನೆ; ಎಸ್ಪಿ… ದಕ್ಷಿಣ ಕನ್ನಡ ಜಿಲ್ಲಾ ಬಲ್ಯಾಯ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಉಮಾಲಕ್ಷ್ಮೀ ಕುಡುಪು… ಪುತ್ತೂರು: ಚೆನ್ನರಾಯಪಟ್ಟಣದ ಮಹಿಳೆಗೆ ಮದ್ಯ ಕುಡಿಸಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ; ಆರೋಪಿ ಬಂಧನ

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ ಇನ್ನರ್ ವೀಲ್ ಜಿಲ್ಲೆ 318 ರ District Rally ‘ಸ್ವರ್ಣ ಪರ್ಬ’

02/10/2023, 21:05

ಮಂಗಳೂರು(reporterkarnataka.com): ಇನ್ನರ್ ವೀಲ್ ಜಿಲ್ಲೆ 318 ರ ಜಿಲ್ಲಾ ರ್ಯಾಲಿ ‘ ಸ್ವರ್ಣ ಪರ್ಬ’ ‘ ಭಾನುವಾರ ನಗರದ ಟಿ. ವಿ. ರಮಣ ಪೈ ಹಾಲಿನಲ್ಲಿ ಜಿಲ್ಲಾ ಚೇರ್ಮನ್ ಪೂರ್ಣಿಮಾ ರವಿ ಅವರ ನೇತೃತ್ವದಲ್ಲಿ ನಡೆಯಿತು.
ಇನ್ನರ್ ವೀಲ್ ಮಂಗಳೂರು ಉತ್ತರದ ಚಾರ್ಟರ್ ಸದಸ್ಯೆ
ಉಷಾ ರವಿರಾಜ್ ಅವರು ಇನ್ನರ್ ವೀಲ್ ಪ್ರಾರ್ಥನೆ ಮಾಡಿದರು. ಕ್ಲಬ್ ನ ಅಧ್ಯಕ್ಷೆ ಗೀತಾ ಬಿ. ರೈ ಅವರು ಸ್ವಾಗತಿಸಿದರು. ರ್ಯಾಲಿ ಚೇರ್ಮನ್ ಚಿತ್ರಾ ವಿ. ರಾವ್ ಅವರು ರ್ಯಾಲಿ ಸ್ವರ್ಣ ಪರ್ಬದ ಬಗ್ಗೆ ಪ್ರಸ್ತಾವಿಕ ಮಾತುಗಳನ್ನು ಹಾಡಿನ ಮೂಲಕ ವಿವರಿಸಿದರು. ಕಾರ್ಯದರ್ಶಿ ಶಬರಿ ಕಡಿದಾಲ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಕೆ ಕಳುಹಿಸಿದವರ ವಿವರ ನೀಡಿದರು. ಚೇರ್ಮನ್ ಪೂರ್ಣಿಮಾ ರವಿ ಅವರು 2023-24ನೇ ಸಾಲಿನಲ್ಲಿ ಜಿಲ್ಲೆ 318 ರಲ್ಲಿ ನಡೆದ ಪ್ರಾಜೆಕ್ಟ್, ಅದರ ಪ್ರಯೋಜನ ಪಡೆದವರ ಹಾಗೂ ವಿನಿಯೋಗ ಮಾಡಿದ ಹಣದ ವಿವರಗಳನ್ನು ತಿಳಿಸಿ, ಕಾರ್ಯ ಕ್ರಮದ ಬಗ್ಗೆ ಮೆಚ್ಚುಗೆ ಮಾತನ್ನು ವ್ಯಕ್ತಪಡಿಸಿದರು. ಇತರ ಕ್ಲಬ್ ಗಳಿಂದ ಬಂದ ಮಾಜಿ ಜಿಲ್ಲಾ ಚೇರ್ ಮೆನ್ ರವರನ್ನು ಗೌರವಿಸಲಾಯಿತು.
ಉಪ ಚೇರ್ಮನ್ ವೈಶಾಲಿ ಕುಡ್ವ ವಂದಿಸಿದರು. ಜಿಲ್ಲಾ ಖಜಾಂಚಿ ರಜನಿ ಭಟ್ ಹಾಗೂ ಜಿಲ್ಲಾ ಎಡಿಟರ್ ಉಮಾ ಮಹೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ನಡೆಸಿಕೊಟ್ಟ ಇನ್ನರ್ ವೀಲ್ ಕ್ಲಬ್ ಮಂಗಳೂರು ಉತ್ತರ ದ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಾಲಿನಿ ಹೆಬ್ಬಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು