10:27 AM Tuesday3 - October 2023
ಬ್ರೇಕಿಂಗ್ ನ್ಯೂಸ್
ಅನಧಿಕೃತ ಕೃಷಿ ಕೀಟ ನಾಶಕ ಮಾರಾಟ: ಕೆಮಿಕಲ್ ಮಳಿಗೆಗೆ ಕೃಷಿ ಅಧಿಕಾರಿಗಳ ದಿಢೀರ್… ಹೈಕೋರ್ಟ್ ಆದೇಶ ಉಲ್ಲಂಘಿಸಿ ವಿದ್ಯಾರ್ಥಿಗಳ ಮರುಹಂಚಿಕೆಗೆ ಕ್ರಮ? ವೈದ್ಯಕೀಯ ಶಿಕ್ಷಣ ಸಚಿವ ಶರಣ್… ಕೆಜೆ ಹಳ್ಳಿ-ಡಿಜೆಹಳ್ಳಿ-ಹುಬ್ಬಳ್ಳಿ ಕೇಸ್ ಸಂದರ್ಭದಲ್ಲಿ ಕಾಂಗ್ರೆಸ್ ದೇಶದ್ರೋಹಿಗಳ ಪರ ನಿಂತಿತ್ತು: ಕೇಂದ್ರ ಸಚಿವೆ… ಜೆಡಿಎಸ್- ಬಿಜೆಪಿ ಸಖ್ಯ: ಕೇಸರಿ ಪಾಳಯ ತೊರೆದು ದಳ ಸೇರಿದ್ದ ಮೂಡಿಗೆರೆ ಮಾಜಿ… ಕೊಟ್ಟಿಗೆಹಾರ ಸುತ್ತಮುತ್ತ 3 ದಿನಗಳಿಂದ ನಿರಂತರ ಧಾರಾಕಾರ ಮಳೆ: ಆತಂಕಕ್ಕೀಡಾದ ಕಾಫಿ ಬೆಳೆಗಾರರು ಮೆಸ್ಕಾಂ ನಿರ್ಲಕ್ಷ್ಯ: ಹೆಮ್ಮಾಡಿ ಕಾಲು ದಾರಿಯಲ್ಲಿ ವಿದ್ಯುತ್ ಶಾಕ್ ತಗುಲಿ ದಂಪತಿ ದಾರುಣ… ಬೆಳಗಾವಿಯಲ್ಲಿ 2 ದಿನಗಳ ಮೋಡ ಬಿತ್ತನೆಗೆ ಚಾಲನೆ: 20 ಸಾವಿರ ಅಡಿ ಎತ್ತದರದಲ್ಲಿರುವ… ಶೃಂಗೇರಿ: ತುಂಗಾ ನದಿಯ ನಡುಗಡ್ಡೆಯಲ್ಲಿ ಪ್ರವಾಹಕ್ಕೆ ಸಿಲುಕಿದ ಇಬ್ಬರ ರಕ್ಷಣೆ; ಅಗ್ನಿ ಶಾಮಕ… ಕಾವೇರಿ ನದಿ ನೀರು ಹಂಚಿಕೆ ವಿವಾದ: ಅಥಣಿಯಲ್ಲಿ ಪ್ರತಿಭಟನೆ; ಮಾನವ ಸರಪಳಿ ಮಂಗಳೂರಿನಲ್ಲಿ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಬಸ್ ಶೆಲ್ಟರ್ ಇಲ್ಲ!: ಆದ್ಯತೆ ಮೇರೆಗೆ ನಿರ್ಮಾಣ…

ಇತ್ತೀಚಿನ ಸುದ್ದಿ

ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು ಭೀಕರ ಬೆಂಕಿ ಅನಾಹುತ; ಗೋದಾಮು ಮತ್ತು 8 ಮನೆಗಳು ಭಸ್ಮ

18/09/2023, 17:16

ಬೆಂಗಳೂರು(reporterkarnataka.com): ನಗರದ ಚಾಮರಾಜಪೇಟೆಯ ಅನಂತಪುರದ ಬಳಿ
ಸಿಲಿಂಡರ್ ಸ್ಫೋಟಗೊಂಡು ಗೋದಾಮು ಮತ್ತು 8 ಮನೆಗಳು ಭಸ್ಮಗೊಂಡಿರುವ ಘಟನೆ ನಡೆದಿದ್ದು, ಒಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಬೆಂಗಳೂರಿನ ವಿನಾಯಕ ಸಿನೆಮಾ ಥಿಯೇಟರ್ ಬಳಿ ಈ ದುರ್ಘಟನೆ ನಡೆದಿದ್ದು,
ಸಿಲಿಂಡರ್‌ ಸ್ಪೋಟದ ಭೀಕರತೆಗೆ ಅಲಂಕಾರಿಕ ವಸ್ತುಗಳ ಗೋದಾಮು ಮತ್ತು 8 ತಗಡಿನ ಶೀಟ್ ಮನೆಗಳು ಭಸ್ಮವಾಗಿವೆ. ಒಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಗ್ನಿಶಾಮಕ ದಳ ಬೆಂಕಿ ನದಿಸುವ ಕಾರ್ಯ ಮಾಡಿದ್ದಾರೆ. ಈ ಅವಘಡದಲ್ಲಿ ಗೋದಾಮು ಸೇರಿದಂತೆ ಪಕ್ಕದಲ್ಲಿರುವ 8 ಮನೆಗಳಿಗೂ ಬೆಂಕಿ ತಗುಲಿದ್ದು, ಈ ವೇಳೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ವಿನಾಯಕ ಸಿನಿಮಾ ಥಿಯೇಟರ್‌ ಎದುರುಗಡೆ ಇರುವ ಗೋದಾಮಿಗೆ ಬೆಂಕಿ ತಲುಗಿದ ಹಿನ್ನೆಲೆ ಸಿಲಿಂಡರ್‌ಗಳು ಬ್ಲಾಸ್ಟ್ ಆಗಿರಬಹುದು ಎಂದು ಶಂಕಿಸಲಾಗುತ್ತಿದೆ. ಅಲ್ಲದೆ ಮನೆಯ ಅಲಂಕಾರಿಕ ವಸ್ತುಗಳ ಗೋದಾಮಿಗೆ ಬೆಂಕಿ ತಗುಲಿದ್ದು, ಬೆಂಕಿ ತಗಲುತ್ತಿದ್ದಂತೆ ಅದರ ಪಕ್ಕದಲ್ಲಿರುವ ಸುಮಾರು 8 ಶೀಟ್ ಮನೆಗಳಿಗೂ ಬೆಂಕಿ ಆವರಿಸಿದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು