12:56 AM Tuesday23 - April 2024
ಬ್ರೇಕಿಂಗ್ ನ್ಯೂಸ್
ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಪ್ರಣಾಳಿಕೆ ಬಿಡುಗಡೆ ಹಿಂದೂ ಧರ್ಮ ಸಾಮರಸ್ಯದ ಬದುಕು ಹೇಳಿಕೊಟ್ಟಿದೆ: ಬೈಕಂಪಾಡಿ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ… ಮೋರ್ಗನ್ಸ್ ಗೇಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಮತ… ಪ್ರಿಯಾಂಕಾ ಗಾಂಧಿ ಇಂದು ರಾಜ್ಯಕ್ಕೆ: ಚಿತ್ರದುರ್ಗದಲ್ಲಿ ಬಹಿರಂಗ ಸಭೆ; ಹಗರಿಬೊಮ್ಮನಹಳ್ಳಿಯಲ್ಲಿ ಸೌಮ್ಯಾ ರೆಡ್ಡಿ… ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏ.26ರಂದು ವಿಜಯಪುರಕ್ಕೆ: ರಾಜು ಆಲಗೂರ ಪರ ಚುನಾವಣಾ… ಬರ ಪರಿಹಾರ ನೀಡದಿದ್ದರೆ ಪ್ರಧಾನಿ ಹಾಗೂ ಗೃಹ ಸಚಿವರಿಗೆ ರಾಜ್ಯಕ್ಕೆ ಬರಲು ಜನತೆ… ತಂತ್ರಜ್ಞಾನ ಅಭಿವೃದ್ಧಿಯಾಗಿದ್ದರೂ ಚುನಾವಣೆ 60 ದಿನಗಳ ಕಾಲ ನಡೆಯುತ್ತಿರುವುದು ಅನುಮಾನಾಸ್ಪದ: ಮಾಜಿ ಸಿಎಂ… ಸಿದ್ದರಾಮಯ್ಯ ಸರಕಾರದಲ್ಲಿ ಬದುಕಿನ ಗ್ಯಾರಂಟಿ ಕಳೆದುಕೊಂಡ ಕನ್ನಡಿಗರು: ಶಾಸಕ ಡಾ. ವೈ ಭರತ್… ನಮ್ಮ ಕೆಲಸವೇ ಅಪಪ್ರಚಾರ ನಡೆಸುವವರಿಗೆ ತಕ್ಕ ಉತ್ತರ: ಸರಪಾಡಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ… ಗಾಳಿ ಮಳೆಗೆ ಮರ ಬಿದ್ದು ತಂಡಾದ ಪವರ್ ಲೈನ್: ವಿದ್ಯುತ್ ಶಾಕ್ ಹೊಡೆದು…

ಇತ್ತೀಚಿನ ಸುದ್ದಿ

ಉತ್ತರ ಕರ್ನಾಟಕದಲ್ಲಿ ಕಾರಹುಣ್ಣಿಮೆ ಸಂಭ್ರಮ: ಗಡಿ ಭಾಗದಲ್ಲಿ ಮಣ್ಣೆತ್ತಿನ ಖರೀದಿ ಜೋರು; ಹಸುಗಳಿಗೆ ಬಣ್ಣದ ಹಗ್ಗ ಗೊಂಡೆಗೆ ಮುಗಿಬಿದ್ದ ರೈತರು

03/06/2023, 21:14

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ರಾಜ್ಯದಲ್ಲಿ ಕಾರ ಹುಣ್ಣಿಮೆಯನ್ನ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಅದರಲ್ಲು ಉತ್ತರ ಕರ್ನಾಟಕದಲ್ಲಿ ತನ್ನದೇ ವಿಶೇಷತೆಯಿಂದ ಆಚರಿಸಲ್ಪಡುತ್ತದೆ. ಇದರಂಗವಾಗಿ ಮಣ್ಣೆತ್ತಿನ ಖರೀದಿಯು ಜೋರಾಗಿಯೇ ನಡೆಯಿತು.
ಬೆಳಗಾವಿಯ ಕಾಗವಾಡ ವಿಧಾನ ಸಭಾ ಕ್ಷೇತ್ರದ ಸಂಬರಗಿ ಗ್ರಾಮದಲ್ಲಿ ಕಾರಹುಣ್ಣಿಮೆ ನಿಮಿತ್ಯ ಬಣ್ಣ ಬಣ್ಣದ ಹಗ್ಗ ಗೊಂಡೆಗಳನ್ನ ತೆಗೆದುಕೊಳ್ಳಲು ರೈತರು ಅಂಗಡಿ ಮುಂಗ್ಗಟ್ಟಿಗೆ ಮುಗಿ ಬಿದಿದ್ದರು. ಗ್ರಾಮದ ಕುಂಬಾರರ ಮನೆಯಲ್ಲಿನ ಮಣ್ಣೆತ್ತಿನ ಪೂಜೆ ಮಾಡುವುದು ವಾಡಿಕೆ ಇದೆ ಅದರಂತೆ ಮಣ್ಣೆತ್ತಿನ ಖರೀದಿಯು ಜೋರಾಗಿ ಇತ್ತು.

ಸುಮಾರು ಮೂರು ದಿನಗಳ ಕಾಲ ಆಚರಿಸುವ ಕಾರಹುಣ್ಣಿಮೆ ಮಳೆಗಾಲದ ಮೊದಲ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮೊದಲನೆ ದಿನ ಹೊನ್ನಹುಗ್ಗಿ, ಎರಡನೆ ದಿನ ಕಾರ ಹುಣ್ಣಿಮೆ ಹಾಗೂ ಮೂರನೇ ದಿನ ಕರಿ ಹರಿಯುವಿಕೆ ಅಂತಾ ಆಚರಿಸಲ್ಪಡುತ್ತದೆ. ಕಾರ ಹುಣ್ಣಿಮೆ ಆಚರಣೆಗೆ ತನ್ನದೇ ಪುರಾತನ ಹಿನ್ನೆಲೆಯು ಇದೆ.
ಒಮ್ಮೆ ಕೈಲಾಸದಲ್ಲಿ ಪಾರ್ವತಿ ದೇವಿಯು ಹುಗ್ಗಿ ( ಪಾಯಸ ) ಮಾಡುವಾಗ ಬೆರಳಲ್ಲಿದ್ದ ಚಿನ್ನದ ಉಂಗುರ ಜಾರಿ ಪಾತ್ರೆಯಲ್ಲಿದ್ದ ಕುದಿಯುವ ಹುಗ್ಗಿ ( ಪಾಯಸ ) ದಲ್ಲಿ ಬಿಳ್ಳುತ್ತದೆ. ಅವಾಗ ಪಾರ್ವತಿ ದೇವಿಯು ಉಂಗುರ ಹೊರತೆಗೆಯಲು ಪ್ರಯತ್ನಿಸುತ್ತಾಳೆ. ಎಷ್ಟೇ ಪ್ರಯತ್ನ ಪಟ್ಟರು ಉಂಗುರ ಹೊರತೆಗೆಯಲು ಆಗದೆ ಇದ್ದಾಗ ಪಾರ್ವತಿ ದೇವಿಯು ಶಿವನ ಮೊರೆ ಹೋಗುತ್ತಾಳೆ. ಅವಾಗ ಶಿವನ ವಾಹನ ನಂದಿಗೆ ಶಿವ ಆದ್ನೇ ನೀಡುತ್ತಾನೆ. ಅವಾಗ ನಂದಿಯು ತನ್ನ ಕೊಂಬಿ ನಿಂದ ಕುದಿಯುತ್ತಿದ್ದ ಹುಗ್ಗಿ ( ಪಾಯಸ ) ದಿಂದ ಚಿನ್ನದ ಉಂಗುರ ಹೊರತೆಗೆದು ಪಾರ್ವತಿ ದೇವಿಗೆ ಕೊಡುತ್ತಾನೆ. ಅವಾಗ ಪಾರ್ವತಿ ದೇವಿಯು ಅಂದಿನಿಂದ ಈ ದಿನವನ್ನ ಕಾರ ಹುಣ್ಣಿಮೆ ಅಂತ ಆಚರಿಸಲಿ ಅಂತ ಆಶೀರ್ವಾದ ಮಾಡಿದಳು. ಕುದಿಯುವ ಪಾತ್ರೆಯಿಂದ ಹೊನ್ನ ಹೊರ ತೆಗೆದ ದಿನವನ್ನ ಹೊನ್ನಹುಗ್ಗಿ ಅಂತ ಆಚರಿಸಲಿ ಎಂದು ಆಶೀರ್ವದಿಸಿದ ದಿನದಿಂದ ಕಾರ ಹುಣ್ಣಿಮೆ ಆಚರಿಸಲಾಗುತ್ತದೆ ಅಂತ ಪ್ರತೀತಿ ಇದೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು