9:53 PM Monday2 - October 2023
ಬ್ರೇಕಿಂಗ್ ನ್ಯೂಸ್
ಅನಧಿಕೃತ ಕೃಷಿ ಕೀಟ ನಾಶಕ ಮಾರಾಟ: ಕೆಮಿಕಲ್ ಮಳಿಗೆಗೆ ಕೃಷಿ ಅಧಿಕಾರಿಗಳ ದಿಢೀರ್… ಹೈಕೋರ್ಟ್ ಆದೇಶ ಉಲ್ಲಂಘಿಸಿ ವಿದ್ಯಾರ್ಥಿಗಳ ಮರುಹಂಚಿಕೆಗೆ ಕ್ರಮ? ವೈದ್ಯಕೀಯ ಶಿಕ್ಷಣ ಸಚಿವ ಶರಣ್… ಕೆಜೆ ಹಳ್ಳಿ-ಡಿಜೆಹಳ್ಳಿ-ಹುಬ್ಬಳ್ಳಿ ಕೇಸ್ ಸಂದರ್ಭದಲ್ಲಿ ಕಾಂಗ್ರೆಸ್ ದೇಶದ್ರೋಹಿಗಳ ಪರ ನಿಂತಿತ್ತು: ಕೇಂದ್ರ ಸಚಿವೆ… ಜೆಡಿಎಸ್- ಬಿಜೆಪಿ ಸಖ್ಯ: ಕೇಸರಿ ಪಾಳಯ ತೊರೆದು ದಳ ಸೇರಿದ್ದ ಮೂಡಿಗೆರೆ ಮಾಜಿ… ಕೊಟ್ಟಿಗೆಹಾರ ಸುತ್ತಮುತ್ತ 3 ದಿನಗಳಿಂದ ನಿರಂತರ ಧಾರಾಕಾರ ಮಳೆ: ಆತಂಕಕ್ಕೀಡಾದ ಕಾಫಿ ಬೆಳೆಗಾರರು ಮೆಸ್ಕಾಂ ನಿರ್ಲಕ್ಷ್ಯ: ಹೆಮ್ಮಾಡಿ ಕಾಲು ದಾರಿಯಲ್ಲಿ ವಿದ್ಯುತ್ ಶಾಕ್ ತಗುಲಿ ದಂಪತಿ ದಾರುಣ… ಬೆಳಗಾವಿಯಲ್ಲಿ 2 ದಿನಗಳ ಮೋಡ ಬಿತ್ತನೆಗೆ ಚಾಲನೆ: 20 ಸಾವಿರ ಅಡಿ ಎತ್ತದರದಲ್ಲಿರುವ… ಶೃಂಗೇರಿ: ತುಂಗಾ ನದಿಯ ನಡುಗಡ್ಡೆಯಲ್ಲಿ ಪ್ರವಾಹಕ್ಕೆ ಸಿಲುಕಿದ ಇಬ್ಬರ ರಕ್ಷಣೆ; ಅಗ್ನಿ ಶಾಮಕ… ಕಾವೇರಿ ನದಿ ನೀರು ಹಂಚಿಕೆ ವಿವಾದ: ಅಥಣಿಯಲ್ಲಿ ಪ್ರತಿಭಟನೆ; ಮಾನವ ಸರಪಳಿ ಮಂಗಳೂರಿನಲ್ಲಿ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಬಸ್ ಶೆಲ್ಟರ್ ಇಲ್ಲ!: ಆದ್ಯತೆ ಮೇರೆಗೆ ನಿರ್ಮಾಣ…

ಇತ್ತೀಚಿನ ಸುದ್ದಿ

ಉತ್ತರ ಕರ್ನಾಟಕದಲ್ಲಿ ಕಾರಹುಣ್ಣಿಮೆ ಸಂಭ್ರಮ: ಗಡಿ ಭಾಗದಲ್ಲಿ ಮಣ್ಣೆತ್ತಿನ ಖರೀದಿ ಜೋರು; ಹಸುಗಳಿಗೆ ಬಣ್ಣದ ಹಗ್ಗ ಗೊಂಡೆಗೆ ಮುಗಿಬಿದ್ದ ರೈತರು

03/06/2023, 21:14

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ರಾಜ್ಯದಲ್ಲಿ ಕಾರ ಹುಣ್ಣಿಮೆಯನ್ನ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಅದರಲ್ಲು ಉತ್ತರ ಕರ್ನಾಟಕದಲ್ಲಿ ತನ್ನದೇ ವಿಶೇಷತೆಯಿಂದ ಆಚರಿಸಲ್ಪಡುತ್ತದೆ. ಇದರಂಗವಾಗಿ ಮಣ್ಣೆತ್ತಿನ ಖರೀದಿಯು ಜೋರಾಗಿಯೇ ನಡೆಯಿತು.
ಬೆಳಗಾವಿಯ ಕಾಗವಾಡ ವಿಧಾನ ಸಭಾ ಕ್ಷೇತ್ರದ ಸಂಬರಗಿ ಗ್ರಾಮದಲ್ಲಿ ಕಾರಹುಣ್ಣಿಮೆ ನಿಮಿತ್ಯ ಬಣ್ಣ ಬಣ್ಣದ ಹಗ್ಗ ಗೊಂಡೆಗಳನ್ನ ತೆಗೆದುಕೊಳ್ಳಲು ರೈತರು ಅಂಗಡಿ ಮುಂಗ್ಗಟ್ಟಿಗೆ ಮುಗಿ ಬಿದಿದ್ದರು. ಗ್ರಾಮದ ಕುಂಬಾರರ ಮನೆಯಲ್ಲಿನ ಮಣ್ಣೆತ್ತಿನ ಪೂಜೆ ಮಾಡುವುದು ವಾಡಿಕೆ ಇದೆ ಅದರಂತೆ ಮಣ್ಣೆತ್ತಿನ ಖರೀದಿಯು ಜೋರಾಗಿ ಇತ್ತು.

ಸುಮಾರು ಮೂರು ದಿನಗಳ ಕಾಲ ಆಚರಿಸುವ ಕಾರಹುಣ್ಣಿಮೆ ಮಳೆಗಾಲದ ಮೊದಲ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮೊದಲನೆ ದಿನ ಹೊನ್ನಹುಗ್ಗಿ, ಎರಡನೆ ದಿನ ಕಾರ ಹುಣ್ಣಿಮೆ ಹಾಗೂ ಮೂರನೇ ದಿನ ಕರಿ ಹರಿಯುವಿಕೆ ಅಂತಾ ಆಚರಿಸಲ್ಪಡುತ್ತದೆ. ಕಾರ ಹುಣ್ಣಿಮೆ ಆಚರಣೆಗೆ ತನ್ನದೇ ಪುರಾತನ ಹಿನ್ನೆಲೆಯು ಇದೆ.
ಒಮ್ಮೆ ಕೈಲಾಸದಲ್ಲಿ ಪಾರ್ವತಿ ದೇವಿಯು ಹುಗ್ಗಿ ( ಪಾಯಸ ) ಮಾಡುವಾಗ ಬೆರಳಲ್ಲಿದ್ದ ಚಿನ್ನದ ಉಂಗುರ ಜಾರಿ ಪಾತ್ರೆಯಲ್ಲಿದ್ದ ಕುದಿಯುವ ಹುಗ್ಗಿ ( ಪಾಯಸ ) ದಲ್ಲಿ ಬಿಳ್ಳುತ್ತದೆ. ಅವಾಗ ಪಾರ್ವತಿ ದೇವಿಯು ಉಂಗುರ ಹೊರತೆಗೆಯಲು ಪ್ರಯತ್ನಿಸುತ್ತಾಳೆ. ಎಷ್ಟೇ ಪ್ರಯತ್ನ ಪಟ್ಟರು ಉಂಗುರ ಹೊರತೆಗೆಯಲು ಆಗದೆ ಇದ್ದಾಗ ಪಾರ್ವತಿ ದೇವಿಯು ಶಿವನ ಮೊರೆ ಹೋಗುತ್ತಾಳೆ. ಅವಾಗ ಶಿವನ ವಾಹನ ನಂದಿಗೆ ಶಿವ ಆದ್ನೇ ನೀಡುತ್ತಾನೆ. ಅವಾಗ ನಂದಿಯು ತನ್ನ ಕೊಂಬಿ ನಿಂದ ಕುದಿಯುತ್ತಿದ್ದ ಹುಗ್ಗಿ ( ಪಾಯಸ ) ದಿಂದ ಚಿನ್ನದ ಉಂಗುರ ಹೊರತೆಗೆದು ಪಾರ್ವತಿ ದೇವಿಗೆ ಕೊಡುತ್ತಾನೆ. ಅವಾಗ ಪಾರ್ವತಿ ದೇವಿಯು ಅಂದಿನಿಂದ ಈ ದಿನವನ್ನ ಕಾರ ಹುಣ್ಣಿಮೆ ಅಂತ ಆಚರಿಸಲಿ ಅಂತ ಆಶೀರ್ವಾದ ಮಾಡಿದಳು. ಕುದಿಯುವ ಪಾತ್ರೆಯಿಂದ ಹೊನ್ನ ಹೊರ ತೆಗೆದ ದಿನವನ್ನ ಹೊನ್ನಹುಗ್ಗಿ ಅಂತ ಆಚರಿಸಲಿ ಎಂದು ಆಶೀರ್ವದಿಸಿದ ದಿನದಿಂದ ಕಾರ ಹುಣ್ಣಿಮೆ ಆಚರಿಸಲಾಗುತ್ತದೆ ಅಂತ ಪ್ರತೀತಿ ಇದೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು