ಇತ್ತೀಚಿನ ಸುದ್ದಿ
ಪಾಲಿಕೆ ಕಂಬ್ಳ ವಾರ್ಡ್ನಲ್ಲಿ ರಾಜ ಕಾಲುವೆ ತಡೆಗೋಡೆ ನಿರ್ಮಾಣ: ಶಾಸಕ ವೇದವ್ಯಾಸ ಕಾಮತ್ ಶಿಲಾನ್ಯಾಸ
21/03/2023, 13:17

ಮಂಗಳೂರು(reporterkarnataka.com): ಮಂಗಳೂರು ಮಹಾನಗರ ಪಾಲಿಕೆಯ 29ನೇ ಕಂಬ್ಳ ವಾರ್ಡ್ನ ಕುದ್ರೋಳಿ ಭಗವತಿ ದೇವಸ್ಥಾನ, ಕೊಡಿಯಾಲ್ಬೈಲ್ ನಾಗಬನ, ಪ್ರಗತಿ ಸರ್ವಿಸ್ ಸ್ಟೇಶನ್ ಬಳಿ ಎಂಪೈರ್ ಮಾಲ್ ಕಡೆ ಹೋಗುವ ಭಾಗದಲ್ಲಿ ರಾಜ ಕಾಲುವೆ ತಡೆಗೋಡೆ ನಿರ್ಮಾಣಕ್ಕೆ ಇಂದು ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಶಿಲಾನ್ಯಾಸ ನೆರವೇರಿಸಿದರು. ಈ ಭಾಗದ ನಿವಾಸಿ ಕೇಶವ ಆಚಾರ್ಯ ಅವರ ನೇತೃತ್ವದಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು.
ಒಟ್ಟಾರೆ 1.20 ಕೋಟಿ ರೂ ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗುತ್ತಿದೆ. ಮಳೆಗಾಲದಲ್ಲಿ ಈ ಭಾಗದ ನಿವಾಸಿಗಳ ಕಷ್ಟ ನಷ್ಟಗಳನ್ನು ನಿವಾರಿಸಲು ತಡೆಗೋಡೆ ನಿರ್ಮಿಸಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಸಮಾಲೋಚಿಸಿ ನೀರಾವರಿ ಇಲಾಖೆಯಿಂದ 100 ಕೋಟಿ ರೂ ಅನುದಾನವನ್ನು ತಡೆಗೋಡೆ ಕಾಮಗಾರಿಗಳಿಗಾಗಿಯೇ ಒದಗಿಸಲಾಗಿದೆ. ಅದನ್ನು ಸದ್ಬಳಕೆ ಮಾಡಿಕೊಂಡು ನಗರದ ನಿವಾಸಿಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕರು ಈ ಸಂದರ್ಭದಲ್ಲಿ ನುಡಿದರು.
ಉಪಮೇಯರ್ ಪೂರ್ಣಿಮಾ, ನಾರಾಯಣ ಶೆಟ್ಟಿ, ಜಯರಾಮ್ ಶೆಟ್ಟಿ, ಲೋಕನಾಥ್ , ರವಿಕಲಾ ಶೆಟ್ಟಿ, ಮಹಿಳಾ ಮೋರ್ಚಾ ಸದಸ್ಯ ಗೀತಾ, ರಾಧಾಕೃಷ್ಣ ಶೆಟ್ಟಿ, ರಮೇಶ್ ಹೆಗ್ಡೆ, ನೀಲೇಶ್ ಕಾಮತ್, ಪ್ರಕಾಶ್ ನಾಯಕ್, ಪ್ರಕಾಶ್ ಕೋಡಿಯಾಲ್ ಬೈಲ, ವಸಂತ್ ಜೆ ಪೂಜಾರಿ, ಸತೀಶ್ ಕಾಂಚನ್, ನಿಷಿತ್ ಕಾಂಚನ್, ಚಿತ್ರಕಲಾ, ಪ್ರವೀಣ್ ಕುಮಾರ್, ಮೀನಾಕ್ಷಿ, ಮಲ್ಲಿಕಾ ಕಾಮತ್ ಮುಂತಾದವರು ಉಪಸ್ಥಿತರಿದ್ದರು.