ಇತ್ತೀಚಿನ ಸುದ್ದಿ
ಮತಾಂತರಗೊಂಡ ಬಳಿಕ ಮೀಸಲಾತಿ ಪಡೆಯಲು ಸಾಧ್ಯವಿಲ್ಲ: ಮದ್ರಾಸ್ ಹೈಕೋರ್ಟ್
03/12/2022, 23:05
ಚೆನ್ನೈ(reporterkarnataka.com): ಒಬ್ಬ ವ್ಯಕ್ತಿಯು ಬೇರೆ ಧರ್ಮಕ್ಕೆ ಮತಾಂತರಗೊಂಡ ನಂತರ ತನ್ನ ಜಾತಿಯನ್ನು ಒಯ್ಯುವಂತಿಲ್ಲ’ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಹಿಂದುಳಿದ ವರ್ಗಗಳ ಮೀಸಲಾತಿಯ ಹಿಂದೂ ಧರ್ಮದ ಹಕ್ಕೊತ್ತಾಯದಿಂದ ಇಸ್ಲಾಂಗೆ ಮತಾಂತರಗೊಂಡ ವ್ಯಕ್ತಿಯ ಅರ್ಜಿಯನ್ನು ಆಲಿಸಿ ಆದೇಶ ಹೇಳುವ ಸಮಯದಲ್ಲಿ ಈ ಹೇಳಿಕೆಯನ್ನು ನೀಡಲಾಗಿದೆ.
ಹಿಂದೂವಾಗಿ ಜನಿಸಿದ ವ್ಯಕ್ತಿಯು ಜಾತಿ ವ್ಯವಸ್ಥೆಯನ್ನು ಅನುಸರಿಸದ ಅಥವಾ ಗುರುತಿಸದೇ ಮತ್ತೊಂದು ಧರ್ಮಕ್ಕೆ ಮತಾಂತರಗೊಂಡರೆ, ಮತಾಂತರಗೊಂಡ ವ್ಯಕ್ತಿಯು ಇನ್ನು ಮುಂದೆ ತಾನು ಹುಟ್ಟಿದ ಜಾತಿಗೆ ಸೇರುವುದಿಲ್ಲ ಎಂದು ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಸುಪ್ರೀಂ ಕೋರ್ಟ್ ನ ಅನೇಕ ತೀರ್ಪುಗಳನ್ನು ಉಲ್ಲೇಖಿಸಿ ಹೇಳಿದರು.