ಇತ್ತೀಚಿನ ಸುದ್ದಿ
ರಾಜ್ಯದಲ್ಲಿ ಸಿಎಂ ಬದಲಾಗೊಲ್ಲ, ನಾನೇನು ಸಿಎಂ ಆಗೊಲ್ಲ; ಇದೆಲ್ಲ ಗಾಳಿ ಸುದ್ದಿ: ಸಚಿವ ಗೋವಿಂದ ಕಾರಜೋಳ
08/08/2022, 11:46
ವಿಜಯಪುರ(reporterkarnataka.com): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲ್ಲ, ನಾನೇನು ಸಿಎಂ ಆಗೊಲ್ಲ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ವಿಜಯಪುರ ತಾಲೂಕಿನ ನಾಗಠಾಣದಲ್ಲಿ ಬಸ್ ತಂಗುದಾಣ ಉದ್ಘಾಟಿಸಿದ ಬಳಿಕ ಅವರು ಮಾಧ್ಯಮ ಜತೆ ಮಾತನಾಡಿದರು.
ಸಿಎಂ ಬದಲಾಗುತ್ತಾರೆ. ನಾನು ಹೊಸ ಸಿಎಂ ಆಗುತ್ತೇನೆ ಎನ್ನುವುದು ಊಹಾಪೋಹ. ಗಾಳಿ ಸುದ್ದಿಗಳಿಗೆ ಬಹಳ ಬೆಲೆ ಕೊಡಬಾರದು. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗಲ್ಲ. ಅಲ್ಲದೇ, ನಾನೇನು ಸಿಎಂ ಆಗಲ್ಲ, ಇವೆಲ್ಲವೂ ಗಾಳಿ ಸುದ್ದಿ ಆಗಿದೆ ಎಂದರು.
ನಮ್ಮ ಇಲಾಖೆ ಕೆಲಸ ಕಾರ್ಯಗಳಿಗಾಗಿ ದೆಹಲಿಗೆ ಹೋಗಿದ್ದೇನೆ. ನನ್ನ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಬಂದಿದ್ದರು ಎಂದರು.