ಇತ್ತೀಚಿನ ಸುದ್ದಿ
ಬೆಳ್ಮಣ್: ಮನೆಯ ಶೆಡ್ ನಲ್ಲಿ ಇಟ್ಟಿದ್ದ ಸ್ಕೂಟರ್ ಕಳವು; ಕೇಸು ದಾಖಲು
05/08/2022, 12:12
ಸಾಂದರ್ಭಿಕ ಚಿತ್ರ
ಕಾರ್ಕಳ(reporterkarnataka.com):
ಮನೆಯ ಶೆಡ್ ನಲ್ಲಿ ಇಟ್ಟಿದ್ದ ಸ್ಕೂಟರ್ ಅನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದಲ್ಲಿ ನಡೆದಿದೆ.
ಬೆಳ್ಮಣ್ ನಿವಾಸಿ ಸತ್ಯನಾರಾಯಣ ಭಟ್ ಅವರು ತನ್ನ ಸ್ಕೂಟರ್ ಅನ್ನು ಎಂದಿನಂತೆ ಮನೆಯ ಶೆಡ್ ನಲ್ಲಿ ಇಟ್ಟಿದ್ದರು. ಆದರೆ, ಬೆಳಿಗ್ಗೆ ಎದ್ದು ನೋಡುವಾಗ HONDA ACTIVE ಸ್ಕೂಟರ್ ನಿಲ್ಲಿಸಿದ ಜಾಗದಲ್ಲಿ ಇರಲಿಲ್ಲ. ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ಕೂಟರಿನ ಮೌಲ್ಯ 30ಸಾವಿರ ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.