4:43 PM Friday19 - April 2024
ಬ್ರೇಕಿಂಗ್ ನ್ಯೂಸ್
ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ…

ಇತ್ತೀಚಿನ ಸುದ್ದಿ

ಬಾಣಂತಿಯರ ಆಹಾರ ಸೇವನೆ: ಪೋಷಕಾಂಶಯುಕ್ತ ಆಹಾರ ಯಾವುದು? ಯಾವ ಆಹಾರ ಸೇವಿಸಬಾರದು?

16/04/2022, 07:50

ಹೆರಿಗೆಯ ನಂತರದ ಅವಧಿಯಲ್ಲಿ ಆಹಾರ ಸೇವನೆಯ ಕ್ರಮ ತುಂಬಾ ಮುಖ್ಯವಾದ ಪಾತ್ರ ವಹಿಸುತ್ತದೆ.

ಹಿಂದಿನ ಕಾಲದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳು ಇಲ್ಲದೆ ಅಸುರಕ್ಷಿತ ಹೆರಿಗೆಯಿಂದಾಗಿ ಗಾಯ ಒಣಗದೇ ನಂಜಾಗುವ ಸಾಧ್ಯತೆ ಹೆಚ್ಚಿರುತ್ತಿತ್ತು, ಹಾಗಾಗಿ ಆಹಾರದಲ್ಲಿ ಹೆಚ್ಚಿನ ಪತ್ಯವನ್ನು ಅನುಸರಿಸುತ್ತಿದ್ದರು. ಆದರೆ ಈಗಿನ ಸುಧಾರಿತ ವೈದ್ಯಕೀಯ ಸೌಲಭ್ಯಗಳಿಂದ ಅಂತಹ ಯಾವುದೇ ರೀತಿಯ ಭಯವಿಲ್ಲ. ಆದರೆ ಇನ್ನೂ ಸಹ ನಮ್ಮಲ್ಲಿ ಹೆರಿಗೆಯ ನಂತರ ಸರಿಯಾದ ಪೋಷಕಾಂಶಯುಕ್ತ ಆಹಾರ ಸೇವಿಸಲು ಹಿಂಜರಿಯುವುದನ್ನು ನೋಡಬಹುದು.

ಮಹಿಳೆಯ ಜೀವನದಲ್ಲಿ ಹಾಲುಣಿಸುವ ಸಮಯದಲ್ಲಿ ಪೌಷ್ಠಿಕಾಂಶದ ಅವಶ್ಯಕತೆಗಳು ಇತರ ಯಾವುದೇ ವಯಸ್ಸಿನಲ್ಲಿರುವುದಕ್ಕಿಂತ ಗರಿಷ್ಠವಾಗಿರುತ್ತದೆ.ಆದ್ದರಿಂದ, ಸಮತೋಲಿತ ಆಹಾರವನ್ನು ಸೇವಿಸಬೇಕು
ki
ಕೆಲವೊಂದು ಆಹಾರ ಮಾರ್ಗಸೂಚಿಗಳು

1. ಪ್ರತಿ ಮೂರು ಗಂಟೆಗಳಿಗೊಮ್ಮೆ ಸಣ್ಣ ಪ್ರಮಾಣದಲ್ಲಿ ಊಟವನ್ನು ತೆಗೆದುಕೊಳ್ಳುವುದು.

2. ಪ್ರತಿ ಊಟದ ಸಮಯದಲ್ಲಿ, ನಿಮ್ಮ ತಟ್ಟೆಯ ಅರ್ಧದಷ್ಟು ಭಾಗವನ್ನು ವಿವಿಧ ವರ್ಣರಂಜಿತ ಹಣ್ಣುಗಳು ಮತ್ತು ತರಕಾರಿಗಳಿಂದ ತುಂಬಿಸಿ.

3. ಆಹಾರದಲ್ಲಿ  ಧಾನ್ಯಗಳನ್ನು ಬಳಸಿ.

4. ಪ್ರತಿ ದಿನ ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆ. ಇದರಿಂದ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ ನ ಅಂಶ ದೊರಕುತ್ತದೆ.

5. ಪ್ರತಿದಿನ  ಕಡು ಹಸಿರು ಎಲೆಗಳ ತರಕಾರಿ, ಹಣ್ಣುಗಳ ಸೇವನೆ.

6. ಮೊಟ್ಟೆ, ಮೀನು ಮತ್ತು ಕೋಳಿಯಂತಹ ಉತ್ತಮ ಗುಣಮಟ್ಟದ ಪ್ರೋಟೀನ್ ಆಹಾರಗಳನ್ನು ತೆಗೆದುಕೊಳ್ಳಿ. 

ಸಸ್ಯಾಹಾರಿಗಳು ಸೋಯಾ, ಪನೀರ್ ಮತ್ತು ಕಡಿಮೆ ಕೊಬ್ಬಿನ ಚೀಸ್ ಅನ್ನು ಆರಿಸಿಕೊಳ್ಳಿ. ಚನಾ, ರಾಜ್ಮಾ, ಬಟಾಣಿ, ಮೂಂಗ್,  ಮುಂತಾದ ಬೀನ್ಸ್ ದಿನಕ್ಕೆ ಕನಿಷ್ಠ ಒಂದು ಸರ್ವಿಂಗ್ನಷ್ಟು  ಸೇವನೆ ಒಳಿತು.

7. ಎಣ್ಣೆಯನ್ನು ಮಿತವಾಗಿ ಬಳಸಿ. 

8. ವಾಲ್ನಂಟ್ , ಪಿಸ್ತಾ, ಅಗಸೆ ಬೀಜಗಳು ಮತ್ತು ಖರ್ಜೂರ, ಅಂಜೂರದ ಹಣ್ಣುಗಳು, ಒಣದ್ರಾಕ್ಷಿಗಳಂತಹ ಒಣಗಿದ ಹಣ್ಣುಗಳು ಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು.

9. ನೀರು : ಪ್ರತಿದಿನ ಸೂಕ್ತವಾದ ಪ್ರಮಾಣದಲ್ಲಿ ನೀರನ್ನು ಸೇವನೆ ಮಾಡುವುದು.ನೀರಿನ ಹೊರತಾಗಿ,

ತಾಜಾ ಸೂಪ್, ಮಜ್ಜಿಗೆ ಮತ್ತು ತೆಂಗಿನ ನೀರು, ಆರೋಗ್ಯಕರ ಆಯ್ಕೆಗಳಾಗಿವೆ.

ನಿರ್ಬಂಧಿತ ಆಹಾರಗಳು :

ಚಹಾ, ಕಾಫಿಯಂತಹ ಪಾನೀಯಗಳು ಆಹಾರದ ಕಬ್ಬಿಣವನ್ನು ಅಂಶದ ಹೀರಿಕೆಯನ್ನು ಕಡಿಮೆ ಮಾಡುತ್ತದೆ  .

ಆದ್ದರಿಂದ ಊಟದ ಮೊದಲು, ಸಮಯದಲ್ಲಿ ಅಥವಾ ನಂತರ ತಕ್ಷಣ ಅವುಗಳನ್ನು ತೆಗೆದುಕೊಳ್ಳಬಾರದು.

ಉಪ್ಪಿನಕಾಯಿ, ಹೆಚ್ಚು ಉಪ್ಪುಸಹಿತ ಆಹಾರಗಳಾದ ಚಿಪ್ಸ್, ಪಪ್ಪಡ್‌ಗಳು,ಸಿಹಿತಿಂಡಿಗಳು, ತಂಪು ಪಾನೀಯಗಳು, ಚಾಕೊಲೇಟ್‌ಗಳಂತಹ ಸಕ್ಕರೆ ಮತ್ತು ಎಣ್ಣೆಯಲ್ಲಿ ಕರಿದ  ಆಹಾರಗಳನ್ನು  ಸೇವನೆ ಕಡಿತಗೊಳಿಸುವುದು.

6 ತಿಂಗಳವರೆಗೆ ವಿಶೇಷ ಸ್ತನ್ಯಪಾನ ಮಾಡುವುದು 

ದೈಹಿಕ ಚಟುವಟಿಕೆ :

ನಿಯಮಿತವಾಗಿ ವ್ಯಾಯಾಮ ಮಾಡಿ ಮತ್ತು ದೈಹಿಕವಾಗಿ ಸಕ್ರಿಯರಾಗಿರಿ.

ಈ ಎಲ್ಲಾ ಕ್ರಮಗಳನ್ನು ಅನುಸರಿಸಿದಲ್ಲಿ, ನಿಮ್ಮ ಆರೋಗ್ಯ ಹಾಗೂ ಮಗುವಿನ ಬೆಳವಣಿಗೆಗೆ ಪೂರಕವಾಗಿರುವ ಪೋಷಕಾಂಶಗಳು ದೊರೆತಂತಾಗುತ್ತದೆ ಅಲ್ಲದೆ, ತೂಕ ಕಳೆದುಕೊಳ್ಳಲು ಸಹ ಸಹಾಯಕಯಾಗಿರುತ್ತದೆ.

ಇನ್ನಾದರೂ ಸಹ ಯಾವುದೇ ಭಯವಿಲ್ಲದೇ, ಸರಿಯಾದ ಆಹಾರವನ್ನು ಸೇವಿಸಲು ತಾಯಂದಿರಿಗೆ ಪ್ರೋತ್ಸಾಹ ನೀಡಬೇಕು.

ಡಾ.ಭವ್ಯ ಶೆಟ್ಟಿ  BHMS, PGDND

ಹೋಮಿಯೋಪತಿ ವೈದ್ಯರು

ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ 

📞8904316163  

ಇತ್ತೀಚಿನ ಸುದ್ದಿ

ಜಾಹೀರಾತು