4:18 PM Thursday25 - April 2024
ಬ್ರೇಕಿಂಗ್ ನ್ಯೂಸ್
ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್… ಬಹಿರಂಗ ಪ್ರಚಾರದ ಕೊನೆಯ ದಿನ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರಿಂದ ಪಂಪ್’ವೆಲ್’… ಪಂಪ್ ವೆಲ್ ನಿಂದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಉರಿ… ನಂಜನಗೂಡು: ಮಾಜಿ ಶಾಸಕ ಹರ್ಷವರ್ಧನ್ ಅವರಿಂದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಪರ ಮತಯಾಚನೆ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಪ್ರಣಾಳಿಕೆ ಬಿಡುಗಡೆ ಹಿಂದೂ ಧರ್ಮ ಸಾಮರಸ್ಯದ ಬದುಕು ಹೇಳಿಕೊಟ್ಟಿದೆ: ಬೈಕಂಪಾಡಿ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ… ಮೋರ್ಗನ್ಸ್ ಗೇಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಮತ… ಪ್ರಿಯಾಂಕಾ ಗಾಂಧಿ ಇಂದು ರಾಜ್ಯಕ್ಕೆ: ಚಿತ್ರದುರ್ಗದಲ್ಲಿ ಬಹಿರಂಗ ಸಭೆ; ಹಗರಿಬೊಮ್ಮನಹಳ್ಳಿಯಲ್ಲಿ ಸೌಮ್ಯಾ ರೆಡ್ಡಿ… ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏ.26ರಂದು ವಿಜಯಪುರಕ್ಕೆ: ರಾಜು ಆಲಗೂರ ಪರ ಚುನಾವಣಾ…

ಇತ್ತೀಚಿನ ಸುದ್ದಿ

‘ನಮ್ಮ ಭೂಮಿ ನಮ್ಮ ಆರೋಗ್ಯ’: ಬನ್ನಿ ವಿಶ್ವ ಆರೋಗ್ಯ ದಿನವನ್ನು ಪೂರ್ಣಗೊಳಿಸೋಣ

07/04/2022, 11:42

ಆರೋಗ್ಯ  ಮತ್ತು ರೋಗಕ್ಕೆ ಯಾವುದೇ ರೀತಿಯ ರಾಜಕೀಯ ಅಥವಾ ಭೌಗೋಳಿಕ ಗಡಿಗಳ ಮಿತಿಯಿಲ್ಲ. ಪ್ರಪಂಚದ ಯಾವುದೇ ದೇಶದಲ್ಲಿ  ಸಾಂಕ್ರಮಿಕ ರೋಗದ ಲಕ್ಷಣಗಳಿದ್ದರೂ ಕೂಡ ಇನ್ನೊಂದು ಮೂಲೆಯ ದೇಶದ ಜನರೂ ಸಹ ಜಾಗರೂಕಾರಾಗಿ ಇರಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೇವಲ ಖಾಯಿಲೆಯಿಂದ ಬಳಲದೇ ಇರುವುದನ್ನು ಆರೋಗ್ಯ ಎಂದು ಪರಿಗಣಿಸದೆ ಒಬ್ಬ ಮನುಷ್ಯನ ಸಂಪೂರ್ಣವಾದ ದೈಹಿಕ, ಮಾನಸಿಕ, ಸಾಮಾಜಿಕ ಸ್ವಾಸ್ತ್ಯವನ್ನು ಆರೋಗ್ಯ ಎಂದು ವ್ಯಾಖ್ಯಾನ ಮಾಡಲಾಗಿದೆ.

ಪ್ರಪಂಚದಾದ್ಯಂತ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹುಟ್ಟಿಕೊಂಡಿತು.1948 ರಲ್ಲಿ ಜಿನಿವಾದಲ್ಲಿ ನಡೆದ ಶೃಂಗ ಸಭೆಯಲ್ಲಿ ಏಪ್ರಿಲ್ 6ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.1950 ಏಪ್ರಿಲ್ 7 ರಿಂದ ಪ್ರತೀ ವರ್ಷ ಒಂದೊಂದು ವಿಷಯವನ್ನಧರಿಸಿಕೊಂಡು ಆ ಕುರಿತಾಗಿ ಪ್ರಪಂಚದಾದ್ಯಂತ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು WHO ಮಾಡುತ್ತಿದೆ. ಅಂತೆಯೇ ಈ ವರ್ಷ “ನಮ್ಮ ಭೂಮಿ ನಮ್ಮ ಆರೋಗ್ಯ ” ಎನ್ನುವ ದ್ಯೇಯದಡಿ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ.

ಅಭಿವೃದ್ಧಿಯ ಹೆಸರಿನಲ್ಲಿ ಕಲುಷಿತಗೊಳ್ಳುತ್ತಿರುವ ಪರಿಸರದಿಂದಾಗಿ ಕೊರೋನದಂತಹ ಸಾಂಕ್ರಾಮಿಕ ರೋಗ ಹಾಗೂ ಕ್ಯಾನ್ಸರ್ ನಂತ,ಹಲವಾರು ಅನಿಷ್ಟ  ಮಾರಣಾಂತಿಕ ಕಾಯಿಲೆಗಳು ನಮ್ಮನ್ನು ಕಾಡುತ್ತಿದೆ. ಇದು ಎಚ್ಚರಿಕೆಯ ಗಂಟೆಯಾಗಿದೆ.
ಭೂಮಿಯಲ್ಲಿರುವ ಪ್ರತಿಯೊಬ್ಬರೂ ಸಹ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.ತುರ್ತುಪರಿಸ್ಥಿತಿ ಇದೆ ಎಂದು ಹೇಳಿದರೆ ತಪ್ಪಾಗಲಾರದು. WHO ಪ್ರಕಾರ ಪ್ರತಿವರ್ಷ 13 ಲಕ್ಷ ದಶ ಲಕ್ಷ ಕ್ಕೂ ಹೆಚ್ಚು ಸಾವುಗಳು ಕಲುಷಿತ ಹವಾಮಾನ ಬದಲಾವಣೆಯ ಪರಿಸರದಿಂದಾಗಿದೆ ಎಂದು ಅಂದಾಜಿಸಿದೆ.

ಕೆಲವು ಕಡೆ ಅತಿ ವೃಷ್ಠಿಯಾಗಿ ಸಾಂಕ್ರಾಮಿಕ ರೋಗಗಳು ಹರಡಿದರೆ ಇನ್ನೂ ಕೆಲವುಕಡೆ ಅನಾ ವೃಷ್ಠಿಯಿಂದಾಗಿ ಅನೇಕ ತೊಂದರೆಗಳು ಉಂಟಾಗುತ್ತದೆ. ದಿನೇ ದಿನೇ ಹೆಚ್ಚುತ್ತಿರುವ ತಾಪಮಾನ, ಮಿತಿಮೀರಿದ ಪ್ಲಾಸ್ಟಿಕ್ ಬಳಕೆ, ಮರಗಳ ಕಡಿಯುದರಿಂದ, ಸಂಸ್ಕರಿಸಿದ ಆಹಾರ ಬಳಕೆ, ಕಲುಷಿತಗೊಂಡ ನೀರು, ಮಣ್ಣಿನಿಂದಾಗಿ ಮಾನವ ಜನಾಂಗವಲ್ಲದೇ, ಎಲ್ಲ ಜೀವ ವೈವಿಧ್ಯಗಳು ಸಂಕಟದಲ್ಲಿದೆ.ನಮ್ಮ  ಬದಲಾದ  ಒತ್ತಡಯುತ ಜೀವನ ಶೈಲಿಯ ಹಾಗೂ ಆಹಾರ ಕ್ರಮ, ಕಲುಷಿತಗೊಂಡ ಪರಿಸರದಿಂದಾಗಿ, ಡಯಬಿಟಿಸ್, ಅಸ್ತಮ, ಬಿ. ಪಿ, ಅಲರ್ಜಿ, ಸ್ಥೂಲ ಕಾಯ, ಹೃದ್ರೋಗ, ಥೈರಾಯ್ಡ್, PCOD, ಕ್ಯಾನ್ಸರ್ ನಂತಹ ಸಮಸ್ಯೆಗಳು ಸರ್ವೇಸಾಮಾನ್ಯ ಎನ್ನುವಷ್ಟು ನಮ್ಮನ್ನು ಅವರಿಸಿಬಿಟ್ಟಿದೆ. ಆದ್ದರಿಂದ ನಮ್ಮ ಮುಂದಿನ ಅರೋಗ್ಯಕ್ಕರ ಭವಿಷ್ಯತ್ತಿಗಾಗಿ ನಮ್ಮ ಭೂಮಿಯನ್ನು ರಕ್ಷಿಸುವುದರ ಪ್ರತಿ ಜನರ ಜವಾಬ್ದಾರಿಯಾಗಿದೆ.

ವಾಯುಮಾಲಿನ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಜನನಿಬಿಡಿದ  ಪ್ರದೇಶದಲ್ಲಿ ಸಾರ್ವಜನಿಕ ವಾಹನಗಳನ್ನು ಬಳಸುವುದು,ಹತ್ತಿರವಿರುವ ಜಾಗಗಳಿಗೆ ಕಾಲ್ನಡಿಗೆಯಲ್ಲಿ ಹೋಗುವುದರಿಂದ  ಮಾಲಿನ್ಯವನ್ನು ತಡೆಗಟ್ಟ ಬಹುದಲ್ಲದೇ, ನಿಮ್ಮ ಅರೋಗ್ಯವನ್ನು ವೃದ್ಧಿಸಬಹುದು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ನೀರು ಅಥವಾ ಪಾನೀಯಗಳ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯದೆ ಇರುವುದು, ತರಕಾರಿಗಳನ್ನು ಕೊಂಡುಕೊಳ್ಳುವಾಗ  ಬಟ್ಟೆ ಚೀಲವನ್ನು  ಬಳಸುವುದು ಉತ್ತಮ.

ಸ್ಥಳೀಯವಾಗಿ ಬೆಳೆಸಿದ ಹಣ್ಣು ತರಕಾರಿ ಬಳಸುವುದು, ಸಾಧ್ಯವಾದರೆ ಮನೆಯಲ್ಲೇ ಸಾವಯವ ಗೊಬ್ಬರಗಳನ್ನು ಬಳಸಿ ತರಕಾರಿ ಬೆಳೆಸುವುದು. ನೀರಿನ  ಮಿತವಾದ ಬಳಕೆ  ಹಾಗೂ ಕಲುಷಿತಗೊಳ್ಳುವುದನ್ನು ಕಾಪಾಡುವುದು.

ಎಲ್ಲೆಂದರಲ್ಲಿ ಉಗಿಯುವುದು ಸಾರ್ವಜನಿಕ  ಪ್ರದೇಶದಲ್ಲಿ ಬೀಡಿ ಸಿಗರೇಟ್ ಸೇದುದರಿಂದ ನಿಮ್ಮ ಆರೋಗ್ಯವಲ್ಲದೆ, ನಿಮ್ಮ ಸುತ್ತ ಮುತ್ತಲಿರುವವರ ಆರೋಗ್ಯಕ್ಕೂ ಕೂಡ ಸಂಚಿಕಾರ  ತಂದಂತೆ, ಸಾಧ್ಯವಾದಷ್ಟು ಗಿಡ ಮರಗಳನ್ನು ನೆಡುದರಿಂದ ಕಾರ್ಬನ್ ಡೈ ಆಕಸೈಡ್ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯಕ ಹಾಗೂ ಮಳೆಗಾಲದಲ್ಲಿ ಮಣ್ಣು ಸವೆದು ಹೋಗದಂತೆ ತಡೆಯುತ್ತದೆ.

ಮಾಂಸಾಹಾರ ಸೇವನೆಯನ್ನು ಮಿತ ಗೊಳಿಸುದರಿಂದ ಬೊಜ್ಜು, ಸ್ಥೂಲ ಕಾಯ, ಹೃದ್ರೋಗವನ್ನು ತಡೆಯಬಹುದು. ಸಾಧ್ಯವಾದಷ್ಟು ಸಂಸ್ಕರಿಸಿದ ಆಹಾರಗಳಿಂದ ದೂರ ವಿರುವುದು.ಇಂತಹ ಇನ್ನಷ್ಟು ಕ್ರಮಗಳನ್ನು ಪಾಲಿಸಿ ಮಕ್ಕಳಿಗೂ ಅದರ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವುದರಿಂದ ಆರೋಗ್ಯಕರ ಭವಿಷ್ಯ ರೂಪಿಸಲು ಸಹಾಯಕವಾಗುತ್ತದೆ. ಈ ಮೂಲಕ ನಾವೆಲ್ಲರೂ ಪರಿಸರ ಹಾಗೂ ನಮ್ಮ ಆರೋಗ್ಯ ರಕ್ಷಣೆ ಮಾಡುವಲ್ಲಿ ದೃಢ ನಿರ್ಧಾರ ಕೈಕೊಂಡಲ್ಲಿ ಈ ವರ್ಷದ ವಿಶ್ವ ಆರೋಗ್ಯದಿನವನ್ನು ಅರ್ಥ ಪೂರ್ಣವಾಗಿ ಆಚರಿಸದಂತಾಗುತ್ತದೆ.

ಡಾ.ಭವ್ಯ.ಶೆಟ್ಟಿ
✍️

ಇತ್ತೀಚಿನ ಸುದ್ದಿ

ಜಾಹೀರಾತು